janadhvani

Kannada Online News Paper

ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ

ಮಂಗಳೂರು , ಮೇ 14: ಮಂಗಳೂರು ಮೂಲದ ಚೊಕ್ಕಬೆಟ್ಟು ನಿವಾಸಿ, ಶಾಜಹಾನ್ (33) ರವರು, ಸುಮಾರು 9 ವರ್ಷಗಳಿಂದ ಕತ್ತರ್ ನಲ್ಲಿ ಉದ್ಯೋಗದಲ್ಲಿದ್ದು, ದಿನಾಂಕ 10-05-2026 ಭಾನುವಾರದಂದು ರಾತ್ರಿ, ಕತ್ತರ್, ದೋಹಾದಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ ಮರಣಹೊಂದಿದ್ದು ಪತ್ನಿ, ಇಬ್ಬರು ಮಕ್ಕಳು ಸಹಿತ ಕುಟುಂಬವನ್ನು ಅಗಲಿರುತ್ತಾರೆ.

ಮೃತದೇಹವನ್ನು ಊರಿಗೆ ಕಳುಹಿಸುವಲ್ಲಿ ಪ್ರಮುಖ ಸಂಘಟನೆಯಾದ ಕೆಸಿಎಫ್ ಕತ್ತರ್ ಮತ್ತು ಡಿಕೆಎಸ್ಸಿ ನಾಯಕರುಗಳಾದ ಅಬ್ದುಲ್ಲ ಕುಂಞಿ, ಹಕೀಮ್ ಪಾತೂರು ಮತ್ತು ಆಶಿಕ್ ಬೈರಿಕಟ್ಟೆ ಮುಂತಾದವರು ಸೇರಿಕೊಂಡು ಭಾರತೀಯ ರಾಯಭಾರಿ ಕಚೇರಿ ಮತ್ತು ಇತರ ಸಂಬಂಧಪಟ್ಟ ಕಚೇರಿಗಳಿಂದ ಪ್ರಮಾಣ ಪತ್ರಗಗಳು ಮತ್ತು ಇತರ ಅಗತ್ಯ ದಾಖಲೆಗಳನ್ನು ಸರಿಪಡಿಸಿಕೊಡಲಾಯ್ತು. ಸಂಘಟನೆಯ ಕಾರ್ಯಕರ್ತರನೇಕರು ಸೇರಿಕೊಂಡು ದುಆ ಮತ್ತು ಮಯ್ಯಿತ್ ನಮಾಜ್ ನಿರ್ವಹಿಸಿ, ಮೃತದೇಹವನ್ನು ಊರಿಗೆ ಕಳುಹಿಸಿಕೊಡಲಾಯ್ತು.

ವರದಿ: ಹಸೈನಾರ್ ಕಾಟಿಪಳ್ಳ

ಇದನ್ನೂ ಓದಿರಿ...