janadhvani

Kannada Online News Paper

ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ

ನಿರೀಕ್ಷೆಗಳ ನೀಲ ನಕ್ಷೆ ಎಂಬ ಶೀರ್ಷಿಕೆಯಡಿ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಗಳನ್ನು ಈ ನಾಡಿಗೆ ಸಮರ್ಪಿಸುವ ಸಾಹಿತ್ಯ ಕಲಾ ವೇದಿಕೆಯಾಗಿದೆ ಎಸ್ಸೆಸ್ಸೆಫ್ ನಡೆಸುತ್ತಿರುವ ಸಾಹಿತ್ಯೋತ್ಸವ ಹಲವಾರು ಚಿಂತಕರು, ಭಾಷಣಕಾರರು, ಹಾಡುಗಾರರು ಸಹಿತ ಪ್ರತಿಭೆಗಳ ಬೆಳವಣಿಗೆಯಲ್ಲಿ ಸಾಹಿತ್ಯೋತ್ಸವ ಪ್ರಮುಖ ಪಾತ್ರ ವಹಿಸಿದೆ.

ಇತ್ತೀಚೆಗೆ SYS ರಾಜ್ಯ ಮಾದರಿ ಮದುವೆ ಸಮಾರೋಪ ವೇದಿಕೆಯಲ್ಲಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಶೈಖುನಾ ಸುಲ್ತಾನುಲ್ ಉಲಮಾ ಎ.ಪಿ. ಉಸ್ತಾದ್ ಸಾಹಿತ್ಯೋತ್ಸವದ ಪೋಸ್ಟರ್ ಬಿಡುಗಡೆಗೊಳಿಸಿದರು. ಈ‌ ಸಂದರ್ಭ ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಹಾಫಿಳ್ ಸುಫ್ಯಾನ್ ಸಖಾಫಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಲಿ ತುರ್ಕಳಿಕೆ ಉಪಸ್ಥಿತರಿದ್ದರು.

ಈ ವರ್ಷದ ಸಾಹಿತ್ಯೋತ್ಸವವೂ ಜೂನ್ ಒಂದರಿಂದ ಫ್ಯಾಮಿಲಿ ಸಾಹಿತ್ಯೋತ್ಸವ ಮೂಲಕ ಚಾಲನೆಗೊಂಡು ನಂತರ ಯುನಿಟ್, ಸೆಕ್ಟರ್, ಡಿವಿಷನ್ ಹಾಗೂ ಜಿಲ್ಲಾ ಘಟಕಗಳಲ್ಲಿ ನಡೆದು ಸೆಪ್ಟೆಂಬರ್ ತಿಂಗಳ 05,06 ತಾರೀಖಿನಂದು ರಾಜ್ಯಮಟ್ಟದ ಸಾಹಿತ್ಯೋತ್ಸವ ವಿಜಯನಗರ ಜಿಲ್ಲೆಯಲ್ಲಿ ನಡೆಯಲಿದೆ. ಎಂದು ರಾಜ್ಯ ಸಾಹಿತ್ಯೋತ್ಸವ ಸಮಿತಿ ಕನ್ವೀನರ್ ಉಬೈದುಲ್ಲಾ ಆರ್.ಜಿ. ನಗರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿರಿ...