janadhvani

Kannada Online News Paper

ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ

ಎ.ಪಿ ಉಸ್ತಾದರ ಜೀವನದ ಪ್ರಮುಖ ಘಟನೆಗಳತ್ತ ಬೆಳಕು ಚೆಲ್ಲಿರುವ ಈ ಕೃತಿಗೆ ಕರ್ನಾಟಕದಲ್ಲೂ ವ್ಯಾಪಕ ಬೇಡಿಕೆ ವ್ಯಕ್ತವಾಗಿದ್ದು ಈಗಾಗಲೇ ಮುಂಗಡ ಬುಕ್ಕಿಂಗ್ ಮೂಲಕ ಸಾವಿರಕ್ಕೂ ಮಿಕ್ಕ ಪ್ರತಿಗಳನ್ನು ಓದುಗರು ಕಾಯ್ದಿರಿಸಿದ್ದಾರೆ.

ಮಂಗಳೂರು: ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ. ಉಸ್ತಾದರ ಆತ್ಮಕಥೆ ‘ವಿಶ್ವಾಸಪೂರ್ವಂ’ ಇದರ ಕನ್ನಡ ಆವೃತ್ತಿ ‘ಪ್ರೀತಿಯಿಂದ’ ಇಂದು ಉಳ್ಳಾಲದಲ್ಲಿ ಲೋಕಾರ್ಪಣೆಗೊಳ್ಳಲಿದೆ.

ಕೇರಳದಲ್ಲಿ ದಾಖಲೆ ಮಾರಾಟ ಕಂಡ ಈ ಕೃತಿಯನ್ನು ಮಲಬಾರ್ ಪಬ್ಲಿಕೇಶನ್ ಪ್ರಕಾಶನಗೊಳಿಸುತ್ತಿದ್ದು, ಕರ್ನಾಟಕ ಮುಸ್ಲಿಂ ಜಮಾಅತ್ ದ.ಕ ವೆಸ್ಟ್ ಜಿಲ್ಲೆ ವಿತರಣೆಯ ಹೊಣೆಯನ್ನು ವಹಿಸಿಕೊಂಡಿದೆ.‌ ಎ.ಪಿ ಉಸ್ತಾದರ ಜೀವನದ ಪ್ರಮುಖ ಘಟನೆಗಳತ್ತ ಬೆಳಕು ಚೆಲ್ಲಿರುವ ಈ ಕೃತಿಗೆ ಕರ್ನಾಟಕದಲ್ಲೂ ವ್ಯಾಪಕ ಬೇಡಿಕೆ ವ್ಯಕ್ತವಾಗಿದ್ದು ಈಗಾಗಲೇ ಮುಂಗಡ ಬುಕ್ಕಿಂಗ್ ಮೂಲಕ ಸಾವಿರಕ್ಕೂ ಮಿಕ್ಕ ಪ್ರತಿಗಳನ್ನು ಓದುಗರು ಕಾಯ್ದಿರಿಸಿದ್ದಾರೆ.

ಮುಂದಿನ ಸೋಮವಾರದಿಂದ ರಾಜ್ಯದ ಎಲ್ಲಾ ಪ್ರಮುಖ ಪುಸ್ತಕಾಲಯಗಳಲ್ಲಿ ಈ ಪುಸ್ತಕ ಮಾರಾಟಕ್ಕೆ ಲಭ್ಯವಿರುತ್ತದೆ. ಆನ್ ಲೈನ್ ಮೂಲಕವೂ ಪುಸ್ತಕ ಖರೀದಿಗೆ ಅವಕಾಶವಿದ್ದು store.malaibar.org ಅಥವಾ kmjbookshop.com ಮೂಲಕ ಪುಸ್ತಕ ಖರೀದಿಸಬಹುದೆಂದು ವಿತರಕರು ತಿಳಿಸಿದ್ದಾರೆ.

ಇದನ್ನೂ ಓದಿರಿ...