ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ರಿ) ಇದರ ಮಕ್ಕಾ ವಲಯದ ಅಧೀನಕ್ಕೊಳಪಟ್ಟ ತಬೂಕ್ ಘಟಕದ ವಾರ್ಷಿಕ ಮಹಾಸಭೆಯು ದಿನಾಂಕ 9 ಎಪ್ರಿಲ್ 2026 ಗುರುವಾರ ರಾತ್ರಿ 11 ಗಂಟೆಗೆ ಸರಿಯಾಗಿ ಇಸ್ತಿರಾಹ್ ಇಖ್ವಾನ್ ನಲ್ಲಿ ನೆರವೇರಿತು.
ಉಸ್ತಾದ್ ಅಬೂಬಕ್ಕರ್ ಸಖಾಫಿ ರವರ ದುಆ ದೊಂದಿಗೆ ಸಭೆಗೆ ಚಾಲನೆ ನೀಡಲಾಯಿತು.


ನೂರುಲ್ ಹುದಾ ಮದ್ರಸ ವಿದ್ಯಾರ್ಥಿ ತುಲ್ಹಾ ಉಮರ್ ಖಿರಾಅತ್ ಪಠಿಸಿದರು.
ಉಸ್ತಾದ್ ಅಬ್ದುರ್ರಹ್ಮಾನ್ ದಾರಿಮಿ ರವರು ಸಮಾರಂಭದ ಉದ್ಘಾಟನೆ ನೆರವೇರಿಸಿದರು. ಕಾರ್ಯಕ್ರಮದ ಸಭಾ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷ ರಾದ ಜನಾಬ್ ಅಶ್ರಫ್ ಪಳ್ಳಿಪ್ಪಾಡಿ ವಹಿಸಿದ್ದರು.
ಕಾರ್ಯದರ್ಶಿ ಜನಾಬ್ ಜುನೈದ್ ಅಡ್ಡೂರು ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರವನ್ನು ಮಂಡಿಸಿ ಸಭೆಯ ಅಂಗೀಕಾರ ಪಡೆದರು.
ಉಸ್ತಾದ್ ಹೈದರಾಲಿ ನಈಮಿ
ಹಿತವಚನ ನೀಡಿದರು. ಡಿಕೆಯಸ್ಸಿ ಕೇಂದ್ರ ಸಮಿತಿ ಆರ್ಗನೈಝರ್ ಉಸ್ತಾದ್ ಅಬ್ದುರ್ರಶೀದ್ ಸಅದಿ ಸಂಘಟನೆಯ ರೂಪರೇಖೆಯನ್ನು ಅಚ್ಚುಕಟ್ಟಾಗಿ ವಿವರಿಸಿದರು.ಡಿಕೆಯಸ್ಸಿ ಹಿತೈಷಿ ಅಬ್ದುಲ್ ಮಜೀದ್ ವಿಟ್ಲರವರು ಚುನಾವಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿ 2026-27 ನೇ ಸಾಲಿನ ನೂತನ ಸಮಿತಿಯನ್ನು ರಚಿಸಿದರು.

2026-27 ನೇ ಸಾಲಿನ ನೂತನ ಸಮಿತಿ
ಅಧ್ಯಕ್ಷ: ಉಸ್ತಾದ್ ಅಬ್ದುರ್ರಹ್ಮಾನ್ ದಾರಿಮಿ (ತಬೂಕು ದಾರಿಮಿ)
ಪ್ರಧಾನ ಕಾರ್ಯದರ್ಶಿ:
ಜನಾಬ್ ಮೋನು ದೊಂಪ
ಹಣಕಾಸು ಕಾರ್ಯದರ್ಶಿ: ಜನಾಬ್ ಅಶ್ರಫ್ ಪಳ್ಳಿಪ್ಪಾಡಿ
ಸಂವಹನ ಕಾರ್ಯದರ್ಶಿ: ಜನಾಬ್ ಶಫೀಖ್ ಪೆರಾಡಿ
ಡೆವಲಪ್ ಮೆಂಟ್ ಚೆಯರ್ಮ್ಯಾನ್: ಉಮರ್ ವಳಚ್ಚಿಲ್
ಉಪಾಧ್ಯಕ್ಷರು:
1. ಶೇಖ್ ಅಬ್ದುರ್ರಹ್ಮಾನ್ ಪಲ್ಲಿಪಾಡಿ
2. ಅಬ್ದುಲ್ ಜಬ್ಬಾರ್ ಬಜ್ಪೆ
ಕಾರ್ಯದರ್ಶಿಗಳು:
1. ಜುನೈದ್ ಅಡ್ಡೂರು
2. ಇಮ್ರಾನ್ ಪಳ್ಳಿಪ್ಪಾಡಿ
ಮುಖ್ಯ ಸಲಹೆಗಾರರು:
ಉಸ್ತಾದ್ ಹೈದರ್ ನಈಮೀ
ಲೆಕ್ಕ ಪರಿಶೋಧಕ:
ಜನಾಬ್ ಅಬ್ದುಲ್ ಮಜೀದ್ ವಿಟ್ಲ
ಕಾರ್ಯಕಾರಿ ಸಮಿತಿ ಸದಸ್ಯರು:
ಅಝರ್ ಸುರತ್ಕಲ್
ಹನೀಫ್ ಬಿ.ಸಿ.ರೋಡ್
ಅಬ್ದುಲ್ ಹಮೀದ್ ಮಡಿಕೇರಿ
ಅಬ್ದುಲ್ ಲತೀಫ್ ಎಮ್ಮಾಡಿ
ಮಲಿಕ್ ಪಳ್ಳಿಪ್ಪಾಡಿ
ಅಲ್ತಾಫ್ ವಳಚ್ಚಿಲ್
ಡಿಕೆಯಸ್ಸಿ ತಬೂಕ್ ಘಟಕದ ಯಶಸ್ವಿಗಾಗಿ ಆಹೋರಾತ್ರಿ ದುಡಿದು ಇದೀಗ ಪ್ರವಾಸಿ ಜೀವನಕ್ಕೆ ವಿದಾಯ ಹೇಳಿ ತಾಯ್ನಾಡಿಗೆ ಕುಟುಂಬ ಸಮೇತ ಮರಳುತ್ತಿರುವ ಜನಾಬ್ ಅಬ್ದುಲ್ ವಹ್ಹಾಬ್ ವಳಚ್ಚಿಲ್ ರವರನ್ನು ಶಾಲು ಹೊದಿಸಿ ಬೀಳ್ಕೊಡಲಾಯಿತು.
ತಬೂಕ್ ಘಟಕದ ಸದಸ್ಯ ನಮ್ಮನ್ನಗಲಿದ ಮರ್ಹೂಂ ಅಶ್ರಫ್ ಉಪ್ಪಿನಂಗಡಿ ಹೆಸರಲ್ಲಿ ಗಾಯಿಬೇ ಜನಾಝ ನಮಾಝ್ ನಿರ್ವಹಿಸಿ ಮಗ್ಫಿರತ್ ಮತ್ತು ಮರ್ಹಮತ್ ಗಾಗಿ ಪ್ರಾರ್ಥಿಸಲಾಯಿತು.
ಡಿಕೆಯಸ್ಸಿ ಮಕ್ಕತುಲ್ ಮುಕರ್ರಮ ಆರ್ಗನೈಝರ್ ಉಸ್ತಾದ್ ಅಶ್ರಫ್ ಸಖಾಫಿ ಕುಂಬಕೋಡ್ ಸ್ವಾಗತಿಸಿ, ಧನ್ಯವಾದ ಹಾಗೂ ಕಾರ್ಯಕ್ರಮ ನಿರೂಪಣೆಗೈದರು. ಸ್ವಲಾತುನ್ನಬಿ (ಸ) ಯೊಂದಿಗೆ ಸಭೆ ಮುಕ್ತಾಯಗೊಂಡಿತು.
ವರದಿ: ವಹಬ್ ವಳಚ್ಚಿಲ್
















ಇನ್ನಷ್ಟು ಸುದ್ದಿಗಳು
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್
ಮದ್ರಸಾ ಅಧ್ಯಾಪಕರ ಮೇಲಿನ ಹಲ್ಲೆ ಅತ್ಯಂತ ಖಂಡನೀಯ- ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ SJM ಕಿನ್ನಿಗೋಳಿ ರೇಂಜ್ ಆಗ್ರಹ
ಮದ್ರಸ ಮುಅಲ್ಲಿಮರ ಮೇಲೆ ಹಲ್ಲೆ ಪ್ರಕರಣ: ಎಸ್ಜೆಎಂ ದ.ಕ. ಸೌತ್ ಜಿಲ್ಲಾ ಸಮಿತಿ ತೀವ್ರ ಖಂಡನೆ
ಮದ್ರಸಾ ಅಧ್ಯಾಪಕರ ಮೇಲೆ ಹಲ್ಲೆ- ಎಸ್.ವೈ.ಎಸ್ ದ.ಕ ಜಿಲ್ಲೆ ವೆಸ್ಟ್ ಖಂಡನೆ
ಇರಾಕ್ನಲ್ಲೂ ಖಾಮ್ನಈ ಅಂತ್ಯಕ್ರಿಯೆ ವಿಧಿವಿಧಾನಗಳು; ನಜಫ್ನತ್ತ ಹರಿದುಬಂದ ಜನಸಾಗರ