janadhvani

Kannada Online News Paper

ಕೆಸಿಎಫ್ ದುಬೈ ನಾರ್ತ್ ಝೋನ್: ದಾರುಲ್ ಅಮಾನ್ ಗೃಹ ಪ್ರವೇಶ- ನಿರ್ವಹಣಾ ಸಮಿತಿ ಅಸ್ತಿತ್ವಕ್ಕೆ

ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ಸಮಿತಿಯ ಸಾಮಾಜಿಕ ಕಾರ್ಯಗಳಲ್ಲೊಂದಾದ ಆರ್ಥಿಕತೆಯಲ್ಲಿ ಹಿಂದಿರುವವರಿಗೆ ಗೃಹ ನಿರ್ಮಾಣ ವ್ಯವಸ್ಥೆಯ ಭಾಗವಾಗಿ ದುಬೈ ನಾರ್ತ್ ಝೋನ್ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮ ಒಂದರಲ್ಲಿ ನಿರ್ಮಿಸಲಾದ ‘ದಾರುಲ್ ಅಮಾನ್’ ಮನೆಯ ಉದ್ಘಾಟನಾ ಸಮಾರಂಭದ ನಿರ್ವಹಣಾ ಸಮಿತಿಯನ್ನು ಪನೀರ್ ಹುಸೈನ್ ಹಾಜಿ ನಿವಾಸದಲ್ಲಿ ಇತ್ತೀಚೆಗೆ ಸೇರಿದ ಸಭೆಯಲ್ಲಿ ಅಸ್ತಿತ್ವಕ್ಕೆ ತರಲಾಯಿತು.

ಕೆಸಿಎಫ್ ದುಬೈ ನಾರ್ತ್ ಝೋನ್ ಅಧ್ಯಕ್ಷ ಇಸ್ಮಾಈಲ್ ಮದನಿನಗರ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಕುಡ್ತಮುಗರು ಅಬ್ದುಲ್ಲಾ ಮುಸ್ಲಿಯಾರ್ ಉದ್ಘಾಟಿಸಿದರು. SჄS ದ.ಕ ವೆಸ್ಟ್ ಜಿಲ್ಲಾ ಅಧ್ಯಕ್ಷ ಮಹ್ಬೂಬ್ ಸಖಾಫಿ ಕಿನ್ಯ ಕೆಸಿಎಫ್ ನ ಕಾರ್ಯವೈಖರಿ ಬಗ್ಗೆ ಮಾಹಿತಿ ನೀಡಿದರು.
ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಸಂಘಟನಾ ವಿಭಾಗದ ಅಧ್ಯಕ್ಷ ಮೂಸ ಹಾಜಿ ಬಸರ, ಅಬ್ದುಸ್ಸತ್ತಾರ್ ಸಖಾಫಿ ಅಡ್ಯಾರ್, ಅಬ್ದುಲ್ ಮಜೀದ್ ಹಾಜಿ ಮಂಜನಾಡಿ, ಇ ಕೆ ಇಬ್ರಾಹೀಂ ಕಿನ್ಯ, ಯಾಕೂಬ್ ಅಮಾನಿ ಮೋಂತಿಮಾರ್, ಅಶ್ರಫ್ ಮದನಿನಗರ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿದರು.

ನಿರ್ವಹಣಾ ಸಮಿತಿಯ ಅಧ್ಯಕ್ಷರಾಗಿ ಹುಸೈನ್ ಹಾಜಿ ಪನೀರ್, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಸ್ಸತ್ತಾರ್ ಸಖಾಫಿ ಅಡ್ಯಾರ್, ಕೋಶಾಧಿಕಾರಿಯಾಗಿ ಕೊಳ್ನಾಡ್ ಇಬ್ರಾಹೀಂ ಹಾಜಿ ಅವರನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಅಬ್ದುಲ್ಲಾ ಮುಸ್ಲಿಯಾರ್ ಕುಡ್ತಮುಗರು, ಮಜೀದ್ ಹಾಜಿ ಮಂಜನಾಡಿ, ಜೊತೆ ಕಾರ್ಯದರ್ಶಿಯಾಗಿ ಇ ಕೆ ಇಬ್ರಾಹೀಂ ಕಿನ್ಯ, ಯಾಕೂಬ್ ಅಮಾನಿ ಮೋಂತಿಮಾರ್, ಸಂಚಾಲಕರಾಗಿ ಮಹ್ಬೂಬ್ ಸಖಾಫಿ ಕಿನ್ಯ, ಕಾಸಿಂ ಮದನಿ ತೆಕ್ಕಾರ್ ಅವರನ್ನು ಆರಿಸಲಾಯಿತು.
ಅಕ್ಬರ್ ಅಲಿ, ಸಿರಾಜ್ ಪೂಂಜಾಲ್ಕಟ್ಟೆ, ಶಮೀರ್ ಫರಂಗಿಪೇಟೆ, ಇಬ್ರಾಹೀಂ ಸಖಾಫಿ ಮಠ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಕಾಸಿಂ ಮದನಿ ಪ್ರಾರಂಭದಲ್ಲಿ ಸ್ವಾಗತಿಸಿ, ವಂದಿಸಿದರು.