janadhvani

Kannada Online News Paper

ಹಿರಿಯ ಸುನ್ನೀ ಕಾರ್ಯಕರ್ತರಾದ ಕರೀಂ ಹಾಜಿ ಚೆನ್ನಾರ್ ನಿಧನ- ನಾಯಕರ ಸಂತಾಪ

ಇವರ ಸಹೋದರ ಫಯಾಝ್ ಹಾಜಿಯವರು ಎರಡು ದಿನಗಳ ಹಿಂದೆ ಸೌದಿ ಅರೇಬಿಯಾದಲ್ಲಿ ನಿಧನ ಹೊಂದಿದ್ದು ಇವತ್ತು ದಫನ ನಡೆದಿತ್ತು.

ಪುತ್ತೂರು: ಕರ್ನಾಟಕ ಮುಸ್ಲಿಂ ಜಮಾಅತ್ ಪುತ್ತೂರು ಝೋನ್ ಇದರ ಅಧ್ಯಕ್ಷರೂ, ಸುನ್ನೀ ಸಂಘಟನೆಗಳಲ್ಲಿ ಸಕ್ರಿಯವಾಗಿ ಕಾರ್ಯಾಚರಿಸುತ್ತಿದ್ದ ಕರೀಂ ಹಾಜಿ ಚೆನ್ನಾರ್ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾದರು.

ಇವರ ಸಹೋದರ ಫಯಾಝ್ ಹಾಜಿಯವರು ಎರಡು ದಿನಗಳ ಹಿಂದೆ ಸೌದಿ ಅರೇಬಿಯಾದಲ್ಲಿ ನಿಧನ ಹೊಂದಿದ್ದು ಇವತ್ತು ದಫನ ನಡೆದಿತ್ತು. ಇವರಿಬ್ಬರೂ ಎಸ್ಸೆಸ್ಸೆಫ್ ಮಾಜಿ ರಾಜ್ಯ ಉಪಾಧ್ಯಕ್ಷರಾಗಿದ್ದ ಹಾಫಿಲ್ ಅಬ್ದುಲ್ ಸಲಾಂ ನಿಝಾಮಿ ಚೆನ್ನಾರ್ ಅವರ ಸಹೋದರರಾಗಿದ್ದಾರೆ.

ಕುಟುಂಬದಲ್ಲಿ ದುಃಖದ ಛಾಯೆ ಮಾಸುವ ಮುನ್ನವೇ ಮತ್ತೊಂದು ದುಃಖ ವಾರ್ತೆ ಬಂದಿದ್ದು, ಆ ಕುಟುಂಬಕ್ಕೆ ಸಹಿಸುವ ಸಹನಾ ಶಕ್ತಿಯನ್ನು ಅಲ್ಲಾಹನು ದಯಪಾಲಿಸಲಿ, ಸಹೋದರರೀರ್ವರಿಗೂ ಮಗ್ಫಿರತ್ ಮತ್ತು ಮರ್ಹಮತ್ ಕರುಣಿಸಲಿ ಆಮೀನ್ ಎಂದು ಪ್ರಾರ್ಥಿಸಿ ಇವರ ಅಕಾಲಿಕ ಅಗಲಿಕೆಗೆ ಸಂಘಟನಾ ನಾಯಕರಾದ ಮಾಜಿ ವಖ್ಫ್ ಅಧ್ಯಕ್ಷರಾದ ಮೌಲಾನಾ ಎನ್.ಕೆ.ಶಾಫಿ ಸಅದಿ ಹಾಗೂ ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷರಾದ ಹಾಫಿಳ್ ಸುಫ್ಯಾನ್ ಸಖಾಫಿ ಅಲ್ ಹಿಕಮಿ ಮುಂತಾದವರು ಸಂತಾಪ ಸೂಚಿಸಿದ್ದಾರೆ.