janadhvani

Kannada Online News Paper

ದಾರುಲ್ ಇರ್ಷಾದ್ ಜಿದ್ದಾ ಸಮಿತಿ: ಇಫ್ತಾರ್ ಸಂಗಮ

ಜಿದ್ದಾ: ಮಾಣಿ ದಾರುಲ್ ಇರ್ಷಾದ್ ಜಿದ್ದಾ ಸಮಿತಿ ವತಿಯಿಂದ ಬದ್ರ್ ಮೌಲೀದ್, ಸ್ವಲಾತ್ ಮಜ್ಲಿಸ್ ಹಾಗೂ ಬೃಹತ್ ಇಫ್ತಾರ್ ಸಂಗಮ ದಾರುಲ್ ಇರ್ಷಾದ್ ಆರ್ಗನೈಝರ್ ಉಮರ್ ಮದನಿ ಖಾಮಿಲ್ ಸಖಾಫಿ ಪರಪ್ಪುರವರ ನೇತೃತ್ವದಲ್ಲಿ ನಿನ್ನೆ ಜಿದ್ದಾ ಬನಿಮಾನಿಕ್ ನಲ್ಲಿ ನಡೆಯಿತು.ಈ ಸಂದರ್ಭ ಕೆಸಿಎಫ್ ಜಿದ್ದಾ ಝೋನಲ್ ಅಧ್ಯಕ್ಷರು ಹನೀಫ್ ಸಖಾಫಿ ಸಾಲೆತ್ತೂರು, ದಾರುಲ್ ಇರ್ಷಾದ್ ಜಿದ್ದಾ ಸಮಿತಿ ಅಧ್ಯಕ್ಷರು ಇಕ್ಬಾಲ್ ಹಾಜಿ ಉಳ್ಳಾಲ, ದಾರುಲ್ ಅಶ್ಹರಿಯ್ಯ ಜಿದ್ದಾ ಸಮಿತಿ ಅಧ್ಯಕ್ಷರು ಅಬ್ದುಲ್ ರಝ್ಝಾಖ್ ಹಾಜಿ ಅಕ್ಕರಂಗಡಿ ಮೊದಲಾದವರು ಪಾಲ್ಗೊಂಡಿದ್ದರು