ಖತ್ತರ್ :ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಮದೀನ ಖಲೀಫಾ ಝೋನ್ ಅಲ್ ಖೋರ್ ಯೂನಿಟ್ ವತಿಯಿಂದ ಪವಿತ್ರ ರಬೀವುಲ್ ಅವ್ವಲ್ ತಿಂಗಳ ಪ್ರಯುಕ್ತ ಜಗತ್ತಿಗೆ ಕರುಣೆಯ ಪ್ರವಾದಿ ಘೋಷವಾಕ್ಯದೂಂದಿಗೆ ಮಹಬ್ಬ ಮೀಲಾದ್ ಕಾನ್ಫರೆನ್ಸ್ ಮತ್ತು ಮಾಸಿಕ ಸ್ವಲಾತ್ ಮಜ್ಲಿಸ್ ದಿನಾಂಕ 13-10-2023 ರಂದು ಅಲ್ ಖೋರ್ ಲೈಮೂನ್ ರೆಸ್ಟೋರೆಂಟ್ ಸಭಾಂಗಣದಲ್ಲಿ ನಡೆಯಿತು.

ಕೆಸಿಎಫ್ ಅಲ್’ಕೋರ್ ಯುನಿಟ್ ಅಧ್ಯಕ್ಷರಾದ ಅಬ್ಬಾಸ್ ಕೆದುಂಬಾಡಿ ರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮವನ್ನು, ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಸಂಘಟಣಾ ವಿಭಾಗ ಕಾರ್ಯದರ್ಶಿ ಉಮರುಲ್ ಫಾರುಖ್ ಸಖಾಫಿ ಕೊಡಗುರವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಬೀವುಲ್ ತಿಂಗಳ ಮೀಲಾದ ಆಚರಣೆಯ ಮಹತ್ವ ಹಾಗೂ ಅಲ್ ಖೋರ್ ಯೂನಿಟ್ ಪ್ರತೀ ತಿಂಗಳು ನಡೆಸಿಕೊಂಡು ಬರುತ್ತಿರುವ ಸ್ವಲಾತ್ ಮಜ್ಲೀಸ್ ಬಗ್ಗೆ ಪ್ರಶಂಸನೀಯವಾಗಿ ವಿವರಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಐಸಿಎಫ್ ಅಲ್ ಖೋರ್ ದ’ಅ್’ವಾ ಅಧ್ಯಕ್ಷರಾದ ಮಹಮ್ಮದ್ ಉಸ್ತಾದ್ ತಿರುವಳ್ಳೋರವರು ಹುಬ್ಬುರ್ರಸೂಲ್ ಮುಖ್ಯಪ್ರಬಾಷಣ ಮಾಡುತ್ತಾ ಪ್ರವಾದಿ (ಸ.ಅ) ಯವರ ಜೀವನ ಚರಿತ್ರೆ ಹಾಗೂ ಪ್ರವಾದಿಯವರ ಸ್ನೇಹದ ಮಹತ್ವ ವನ್ನು ಸವಿಸ್ತಾರವಾಗಿ ವಿವರಿಸಿದರು. ಐಸಿಎಫ್ ಅಲ್ ಖೋರ್ ಸೆಕ್ಟರ್ ಅದ್ಯಕ್ಷರಾದ ಕಲಾಂ ಹಾಜಿ ಹಾಗೂ ಕೆಸಿಎಫ್ ಖತರ್ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಫಾರೂಖ್ ಕೃಷ್ಣಾಪುರ ಆಶಂಷ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಕೆಸಿಎಫ್ ಖತರ್ ರಾಷ್ಟ್ರೀಯ ನಾಯಕರಾದ ಅಂದುಮಾಯಿ ನಾವುಂದ, ಖಾಲಿದ್ ಹಿಮಮಿ ಉಸ್ತಾದ್, ಮಿರ್ಶಾದ್ ಕನ್ಯಾನ, ಶಾಫಿ ಲತೀಫಿ ಉಸ್ತಾದ್, ಡಿಕೆಎಸ್’ಸಿ ಅಧ್ಯಕ್ಷರಾದ ಸುಲೈಮಾನ್ ಮುಂಡ್ಕೂರ್ ಸ್ವಾಲಿಹ್ ಉಸ್ತಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕೆಸಿಎಫ್ ಮದೀನ ಖಲೀಫಾ ಝೋನ್ ಅದ್ಯಕ್ಷರಾದ ಇಸ್ಹಾಖ್ ನಿಝಾಮಿ ಅಲ್ ಹಿಖಮಿ ಉಸ್ತಾದ್ ಹಾಗೂ ಸಂಗಡಿಗರಿಂದ ಮೌಲಿದ್ ಮತ್ತು ಬುರ್ದಾ ಹಾಡಿನ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಭಾಗವಾಗಿ ಪವಿತ್ರ ರಬೀವುಲ್ ಅವ್ವಲ್ ತಿಂಗಳಲ್ಲಿ ಅತೀ ಹೆಚ್ಚು ಸ್ವಲಾತ್ ಪಠಿಸಿದದರಿಗೆ ಹಾಗೂ ಮಕ್ಕಳ ಪ್ರತಿಭಾನ್ವಿತ ಹಾಡಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು. ಸಮಾರಂಭದಲ್ಲಿ ಮರ್ಕಝುಲ್ ಇಸ್ಲಾಮಿಯ ಸಹಾಯಧನ ಸಂಗ್ರಹಿಸುವಲ್ಲಿ ಮುಂಚೂಣಿಯಾಗಿ ಹೊರಬಂದ ಅಲ್ ಖೋರ್ ಯುನಿಟ್’ಗೆ ರಾಷ್ಟ್ರೀಯ ಸಮಿತಿಯಿಂದ ಸ್ಮರಣಿಕೆ ನೀಡಿ ಪ್ರಶಂಸಿಸಲಾಯಿತು.
ಕೆಸಿಎಫ್ ಶಿಕ್ಷಣ ವಿಭಾಗ ಕಾರ್ಯದರ್ಶಿ ಸಿದ್ದೀಖ್ ಹಂಡುಗೂಳಿ ಸ್ವಾಗತಿಸಿ, ಇಸ್ಮಾಯಿಲ್ ಉಪ್ಪಳ್ಳಿ ವಂದಿಸಿದರು. ಸಾದಿಖ್ ಕಡಬ ಕಾರ್ಯಕ್ರಮ ನಿರೂಪಿಸಿದರು.
















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ