janadhvani

Kannada Online News Paper

ಸೆ.24: ಕರ್ನಾಟಕ ಸುನ್ನೀ ಯುವಜನ ಸಂಘ (SYS) ದ.ಕ ಜಿಲ್ಲಾ ಜೂಬಿಲಿ ಜರ್ನಿ

ಮಂಗಳೂರು: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಎಸ್ ವೈ ಎಸ್ ಇದರ ಮೂವತ್ತನೇ ವರ್ಷಾಚರಣೆ ಯ ಮಹಾ ಸಮ್ಮೇಳನವು 2024ಜನವರಿ 24ರಂದು ಮಂಗಳೂರಿನಲ್ಲಿ ನಡೆಯಲಿದ್ದು ಅದರ ಪ್ರಚಾರಾರ್ಥ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ರಾಜ್ಯ ನಾಯಕರ ಪ್ರವಾಸ ನಡೆಯಲಿದೆ.

ದ. ಕ ಜಿಲ್ಲೆ ವೆಸ್ಟ್ ವಿಭಾಗದಲ್ಲಿ ನಾಳೆ ಸೆ.24ರಂದು ಪ್ರವಾಸ ಕೈಗೊಳ್ಳಲಾಗಿದ್ದು, ದ. ಕ ಜಿಲ್ಲೆಯ ಮಂಗಳೂರು ಝೋನ್, ಸುರತ್ಕಲ್ ಝೋನ್, ಹಾಗೂ ಮೂಡಬಿದಿರೆ ಝೋನ್ ಗಳ ಕಾರ್ಯ ಕ್ರಮವು ಕೈಕಂಬ ಮೆಗಾ ಪ್ಲಾಝಾದಲ್ಲಿ ಸಾಯಂಕಾಲ 4ಗಂಟೆಗೆ ಜೂಬಿಲಿ ಜರ್ನಿ ನಡೆಯಲಿದೆ.

ಉಳ್ಳಾಲ, ದೇರಳಕಟ್ಟೆ, ಮುಡಿಪು, ಹಾಗೂ ಬಂಟ್ವಾಳ ಝೋನ್ ವಿಭಾಗದ ಜೂಬಿಲಿ ಜರ್ನಿ ಕಾರ್ಯ ಕ್ರಮವು ದೇರಳಕಟ್ಟೆ ತಾಜುಲ್ ಉಲಮಾ ವುಮೆನ್ಸ್ ಕಾಲೇಜಿನಲ್ಲಿ ರಾತ್ರಿ 7 ಗಂಟೆಗೆ ನಡೆಯಲಿದ್ದು ಎಸ್ ವೈ ಎಸ್ ರಾಜ್ಯಾಧ್ಯಕ್ಷ ಹಫೀಳ್ ಸಅದಿ ಕೊಡಗು, ಪ್ರಧಾನ ಕಾರ್ಯದರ್ಶಿ ಎಂ ಬಿ ಎಂ ಸಾದಿಕ್ ಮಾಸ್ಟರ್ ನೇತೃತ್ವದ ತಂಡವು ಭಾಗವಹಿಸಲಿದ್ದಾರೆ ಎಂದು ಎಸ್ ವೈ ಎಸ್ ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಪ್ರಿಂಟೆಕ್ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com