janadhvani

Kannada Online News Paper

KCF ಒಮಾನ್ ಬ್ಲಡ್ ಸೈಬೋಗೆ ಮಿನಿಸ್ಟರಿ ಓಫ್ ಒಮಾನ್ ವತಿಯಿಂದ ಅಭಿನಂದನಾ ಪತ್ರ

ಸೊಹಾರ್: ಸುಲ್ತಾನತ್ ಓಫ್ ಒಮಾನ್ ಮಿನಿಸ್ಟರಿ ವತಿಯಿಂದ ಕರ್ನಾಟಕ ಕಲ್ಚರಲ್ ಫೌಂಡೇಷನ್ ಒಮಾನಿಗೆ ಅಭಿನಂದನಾ ಪತ್ರ ನೀಡಿ ಪ್ರಶಂಸಿಲಾಯಿತು.

ಬ್ಲಡ್ ಬ್ಯಾಂಕ್ ಒಮಾನ್ ಇದರ ಸಹಯೋಗದೊಂದಿಗೆ KCF ಒಮಾನ್ ರಾಷ್ಟ್ರದಾದ್ಯಂತ ನಡೆಸುತ್ತಿರುವ ರಕ್ತದಾನ ಶಿಬಿರವನ್ನು ನಡೆಸಿ ಅದರಿಂದ ಹೆಚ್ಚಿನ ರಕ್ತವನ್ನು ಶೇಖರಿಸುವಲ್ಲಿ ಸಾಧ್ಯವಾಗಿದ್ದು ಇಂದು ಸೊಹಾರಿನಲ್ಲಿ ನಡೆದ ಎಂಟನೇ ರಕ್ತದಾನ ಶಿಬಿರದಲ್ಲಿ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸೊಹಾರ್ ಸರ್ಕಾರಿ ಆಸ್ಪತ್ರೆ ಬ್ಲಡ್ ಬ್ಯಾಂಕ್ ನಿರ್ದೇಶಕ ಡಾ. ಅಬ್ದುಲ್ಲಾ ,
ಡಾ. ಅಬ್ದುಲ್ ರಜಾಕ್ ಕಾಫು , KCF ಒಮಾನ್ ರಾಷ್ಟ್ರೀಯ ಆಡಳಿತ ವಿಭಾಗದ ಅಧ್ಯಕ್ಷ ಸಿದ್ದೀಕ್ ಮಾಂಬ್ಳಿ ಸುಳ್ಯ ,ಇಹ್ಸಾನ್ ಕರ್ನಾಟಕ ಒಮಾನ್ ವಿಭಾಗದ ಅಧ್ಯಕ್ಷ ಇಕ್ಬಾಲ್ ಎರ್ಮಾಳ್, ಸೊಹಾರ್ ಝೋನ್ ಅಧ್ಯಕ್ಷರಾದ ಫಾರೂಕ್ ಕುಕ್ಕಾಜೆ, ಕಾರ್ಯದರ್ಶಿ ಮುಬೀನ್ ಜೋಕಟ್ಟೆ, ಅಶ್ರಫ್ ಕುತ್ತಾರ್, ಆರಿಫ್ ಮದಕ, ಮಜೀದ್ ಕರೋಪಾಡಿ,ಅಝೀಝ್ ಬಜ್ಪೆ, ಅಲಿ ಇಮಾಮಿ, ರಫೀಕ್ ಕಕ್ಕಿಂಜೆ,ಶರೀಪ್ ಮಾಚಾರ್ ಹಾಗೂ ಕೆಸಿಎಫ್ ಸೊಹಾರ್ ಝೋನ್ ಸಮಿತಿ ಪದಾಧಿಕಾರಿಗಳು , ಸದಸ್ಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.