ರಿಯಾದ್: ಸೌದಿ ಅರೇಬಿಯಾ(Saudi Arabia) ದಿಂದ ರಜೆಯ ಮೇಲೆ ತೆರಳಿರುವ ವಲಸಿಗರಿಗೆ, ಮರು ಪ್ರವೇಶ ವೀಸಾ(Re Entry Visa) ವಿಸ್ತರಣೆ ಶುಲ್ಕವನ್ನು ದ್ವಿಗುಣಗೊಳಿಸಿದೆ. ನಿವಾಸ ವೀಸಾ(Iqama) ಹೊಂದಿರುವವರು ಈಗ ವಿದೇಶದಲ್ಲಿ ತಮ್ಮ ಮರು-ಪ್ರವೇಶದ ಅವಧಿಯನ್ನು ವಿಸ್ತರಿಸಲು ದುಪ್ಪಟ್ಟು ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಪರಿಷ್ಕೃತ ದರಗಳಿಗೆ ಸೌದಿ ಆಡಳಿತಾಧಿಕಾರಿ(King Salman) ಅನುಮೋದನೆ ನೀಡಿದ್ದಾರೆ.
ಪ್ರಸ್ತುತ ಮರುಪ್ರವೇಶ ಶುಲ್ಕ ಎರಡು ತಿಂಗಳಿಗೆ 200 ರಿಯಾಲ್ಗಳು ಮತ್ತು ಪ್ರತಿ ಹೆಚ್ಚುವರಿ ತಿಂಗಳಿಗೆ 100 ರಿಯಾಲ್ಗಳು. ದೇಶದ ಹೊರಗಿದ್ದರೆ, ಮರು-ಪ್ರವೇಶದ ಅವಧಿಯನ್ನು ವಿಸ್ತರಿಸಲು ಮಾಸಿಕ ಶುಲ್ಕ 200 ರಿಯಾಲ್ಗಳಿಗೆ ಹೆಚ್ಚಿಸಲಾಗುತ್ತದೆ.
ಪ್ರಸ್ತುತ, ಬಹು ಮರುಪ್ರವೇಶ ವೀಸಾ (Multiple Entry Visa) ಶುಲ್ಕ ಮೂರು ತಿಂಗಳಿಗೆ 500 ರಿಯಾಲ್ಗಳು ಮತ್ತು ಪ್ರತಿ ಹೆಚ್ಚುವರಿ ತಿಂಗಳಿಗೆ 200 ರಿಯಾಲ್ಗಳು.ದೇಶದ ಹೊರಗಿದ್ದರೆ, ಪ್ರತಿ ತಿಂಗಳಿಗೆ ವಿಸ್ತರಣಾ ಶುಲ್ಕವು ಪ್ರಸ್ತುತ ದರಕ್ಕಿಂತ ಎರಡು ಪಟ್ಟು(400 ರಿಯಾಲ್ಗಳು) ಇರುತ್ತದೆ.
ಇಕಾಮಾ ಮಾನ್ಯವಾಗಿದ್ದರೆ ಮಾತ್ರ ಮರು ಪ್ರವೇಶ ವೀಸಾವನ್ನು ವಿಸ್ತರಿಸಲು ಸಾಧ್ಯ. ವಿದೇಶದಲ್ಲಿದ್ದು ಇಖಾಮಾ ನವೀಕರಣೆಗೂ ದುಪ್ಪಟ್ಟು ಶುಲ್ಕ ಪಾವತಿಸಬೇಕಾಗುತ್ತದೆ. ಇದು ಅವಲಂಬಿತ ವೀಸಾ ಹೊಂದಿರುವವರ ಮರುಪ್ರವೇಶ ವೀಸಾಗಳಿಗೂ ಅನ್ವಯಿಸುತ್ತದೆ. ಅವಲಂಬಿತರು ದೇಶದ ಹೊರಗಿದ್ದರೆ, ಗೃಹ ಸಚಿವಾಲಯದ ಎಲೆಕ್ಟ್ರಾನಿಕ್ ಪೋರ್ಟಲ್ ಮೂಲಕ ಇಖಾಮಾ ನವೀಕರಣದ ಶುಲ್ಕವನ್ನು ದ್ವಿಗುಣಗೊಳಿಸಲಾಗುತ್ತದೆ. ಪರಿಷ್ಕೃತ ಕಾನೂನಿಗೆ ಆಡಳಿತಗಾರ ಕಿಂಗ್ ಸಲ್ಮಾನ್ ಅನುಮೋದನೆ ನೀಡಿದರು. ಆದೇಶವು ಜಾರಿಗೆ ಬಂದ ನಂತರ ಶುಲ್ಕ ರಚನೆಯು ಬದಲಾಗುತ್ತದೆ.
ಇನ್ನು ಮುಂದೆ ಸ್ವದೇಶಕ್ಕೆ ತೆರಳುವಾಗ ರಜೆಯನ್ನು ಸರಿಯಾಗಿ ನಿರ್ಧರಿಸಿ ಮರು ಪ್ರವೇಶ ಪಡೆದರೆ ಹೆಚ್ಚುವರಿ ಶುಲ್ಕ ಪಾವತಿಸುವುದನ್ನು ತಪ್ಪಿಸಬಹುದು.
















ಇನ್ನಷ್ಟು ಸುದ್ದಿಗಳು
ಹಿರಿಯ ಧಾರ್ಮಿಕ ವಿದ್ವಾಂಸರಾದ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ ವಫಾತ್
ಅಂಜುಮಾನ್ ಸಿರಾಜುಲ್ ಇಸ್ಲಾಂ ಮದ್ರಸ ಮುಕ್ಕ- SBS ನೂತನ ಸಮಿತಿ ಅಸ್ತಿತ್ವಕ್ಕೆ
ರೆಸಿಡೆನ್ಸಿ ನಿಯಮ ತಿದ್ದುಪಡಿ- ವಿದೇಶಿಯರಿಗೆ ಇನ್ನು ಮುಂದೆ ಸ್ಪಾನ್ಸರ್ ರಹಿತವಾಗಿ ವೀಸಾ ಲಭ್ಯ
ಖತಾರ್ ಗ್ಯಾಸ್ ಪ್ಲಾಂಟ್ ಸ್ಫೋಟ: ಭಾರತೀಯರು ಸೇರಿದಂತೆ 13 ಮಂದಿ ಮೃತ್ಯು
ಸಮಸ್ತ ಶತಮಾನೋತ್ಸವ: ಕರ್ನಾಟಕ ರಾಜ್ಯ ಸ್ವಾಗತ ಸಮಿತಿ ಅಸ್ತಿತ್ವಕ್ಕೆ- ರಾಜ್ಯಾದ್ಯಂತ ಭವ್ಯ ಕಾರ್ಯಕ್ರಮಗಳ ರೂಪುರೇಷೆ
ಬೆಳಕು ಮತ್ತು ವಿಜ್ಞಾನದ ಅದ್ಭುತ ಸಂಗಮ: ಡಾ. ಮುಹಮ್ಮದ್ ರಾಫಿ ಚೆನ್ನಾರ್
ಕುಂಬ್ರದ ಇಂಡಿಯನ್ ಇವೆಂಟ್ಸ್ ಸಂಸ್ಥೆಗೆ ಸಿರಾಜುದ್ದೀನ್ ಖಾಸಿಮಿ ಉಸ್ತಾದ್ ಭೇಟಿ
ಖತಾರ್ನಲ್ಲಿ ಉದ್ಯೋಗಾವಕಾಶ: ಅಕೌಂಟಿಂಗ್, ಐಟಿ, ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಭಾರಿ ಬೇಡಿಕೆ
‘ಮೆಟ್ರಾಶ್’ ವರ್ಕ್ ವೀಸಾಕ್ಕೆ ಅರ್ಜಿ ಸಲ್ಲಿಸಲು ಸುಲಭ ವಿಧಾನ- ಕತಾರ್ ಆಂತರಿಕ ಸಚಿವಾಲಯ
DKSC ಮಕ್ಕತುಲ್ ಮುಕರ್ರಮ ವಲಯ ಸಮಿತಿ: ನೂತನ ಅಧ್ಯಕ್ಷರಾಗಿ ಮುಹಮ್ಮದ್ ಶರೀಫ್ ಮರವೂರು ಆಯ್ಕೆ