✍️ಕೊಡಂಗಾಯಿ ಕಾಮಿಲ್ ಸಖಾಫಿ
ಈ ಚಿತ್ರ ನೋಡುವಾಗ ತಿಳಿಯದೇ ಕಣ್ಣೀರು ಹರಿಯುತ್ತಿದೆ.
ಝುಬೈರ್ ಸಖಾಫಿಯವರು ಜಾಮಿಅ ಮರ್ಕಝ್’ನಲ್ಲಿ ಕಲಿತು 2005ರಲ್ಲಿ ನನ್ನ ಸಹಪಾಠಿಯಾಗಿ ಸಖಾಫಿ ಬಿರುದು ಪಡೆದ ಯುವ ವಿದ್ವಾಂಸರಾಗಿದ್ದಾರೆ.
ಇದೇ ತಿಂಗಳು 25ನೇ ತಾರೀಕಿನಂದು ಪವಿತ್ರ ಉಮ್ರಾ ನಿರ್ವಹಿಸಲು, ಡ್ರೆಸ್ ಖರೀದಿಸಿ ಪತ್ನಿ ಮತ್ತು ಚಿಕ್ಕ ಮಗುವನ್ನು ಬಸ್ಸಿನಲ್ಲಿ ಬಿಟ್ಟು ಇನ್ನೊಬ್ಬ ಮಗನೊಂದಿಗೆ ಸ್ಕೂಟರ್ನಲ್ಲಿ ಮನೆಯ ಕಡೆ ಹೊರಟಿದ್ದರು.
ಅಲ್ಲಾಹನು ಅವರ ಪರಲೋಕ ಜೀವನವನ್ನು ಹಸನಾಗಿಸಲಿ…🤲
ನಿನ್ನೆ ನಗುತ್ತಾ ನಗರಕ್ಕೆ ತಂದೆಯೊಂದಿಗೆ ದ್ವಿಚಕ್ರ ವಾಹನದಲ್ಲಿ ಕುಳಿತು ಬಂದಾಗ ಆ ಮಗು ಇದು ನನ್ನ ಕೊನೆಯ ಯಾತ್ರೆಯೆಂದು ತಿಳಿದಿರಲಿಕ್ಕಿಲ್ಲ.
ವಯನಾಡು ಜಿಲ್ಲೆಯ ಪನಮರಂ ಎಂಬಲ್ಲಿ ಬಸ್ ಮತ್ತು ಬೈಕ್ ಡಿಕ್ಕಿಯಾಗಿ ತಂದೆ ಝುಬೈರ್ ಸಖಾಫಿ ಮತ್ತು ಮಗ ಮಿದ್ಲಾಜ್ ಇಹಲೋಕ ಬದುಕಿಗೆ ವಿದಾಯ ಹೇಳಿದ್ದರು.
ಇವತ್ತು ಅವರಿಬ್ಬರು ಜೊತೆಯಾಗಿಯೇ ಈ ನಶ್ವರ ಲೋಕವನ್ನು ಬಿಟ್ಟು ಅಗಲಿದರು.
ಊರಿನ ಮಸೀದಿಯ ಮುಂಭಾಗದಲ್ಲಿರುವ ಆರಡಿ ಮಣ್ಣಿನಡಿಯಲ್ಲಿ ಒಂದೇ ಕಬರಿನಲ್ಲಿ ಒಂದು ಗೋಡೆಯ ಎರಡು ಕಡೆಗಳಲ್ಲಿ ಮಲಗಿ ನಿದ್ರಿಸುತ್ತಿದ್ದಾರೆ. ಒಮ್ಮೆಯೂ ಎದ್ದೇಳಲಾಗದ ನಿದ್ರೆ…
ಅವರ ಮನೆ ಮತ್ತು ಊರಿನಲ್ಲಿ ಕಣ್ಣೀರ ಮಳೆಯಾಗುತ್ತಿದೆ.
ಕಳೆದ ವಾರದಲ್ಲಿ ಇದೇ ಕುಟುಂಬದ ಸಣ್ಣ ಮಗುವೊಂದು ಅಪಘಾತದಲ್ಲಿ ಅಸುನೀಗಿತ್ತು. ಆ ನೋವಿನ ಗಾಯ ಮಾಯವಾಗುವ ಮೊದಲೇ ಮತ್ತೊಂದು ಆಘಾತ.
ಅಲ್ಲಾಹು ಅವರಿಗೆ ಸ್ವರ್ಗ ನೀಡಿ ಅನುಗ್ರಹಿಸಲಿ. ಈ ರೀತಿಯ ಪರೀಕ್ಷೆಗಳಿಂದ ನಮ್ಮನ್ನು ಪಾರುಮಾಡಲಿ. ಅವರ ಕುಟುಂಬಕ್ಕೆ ಸಹನೆಯನ್ನು ಸುರಿಸಲಿ ಆಮೀನ್🤲
















ಇನ್ನಷ್ಟು ಸುದ್ದಿಗಳು
‘ಇಸ್ಲಾಂ ಮತ್ತು ಕಾರ್ಮಿಕರ ಘನತೆ’ – ಇದು ಕೇವಲ ರಜೆಯಲ್ಲ,ಬದುಕಿನ ದಾರಿ!
ಅನಿವಾಸಿಗಳಿಗಾಗಿ ಜಾಗೃತಿ ಸಂದೇಶ: “ಸಂಯಮವೇ ಸುಕ್ಷೇಮ”-ಕ್ಷಣಿಕ ಕೋಪಕ್ಕೆ ಬಲಿಯಾಗಬೇಡಿ
ವಿಶೇಷ ವರದಿ: ಅನಿವಾಸಿ ಕನ್ನಡಿಗರ ಬದುಕು – ಆಡಂಬರದ ಆಕರ್ಷಣೆಗಿಂತ ಭವಿಷ್ಯದ ಭದ್ರತೆ ಮುಖ್ಯ
ಅಲ್ಲಾ ಸ್ವಾಮಿ, ಯುದ್ಧಕ್ಕೆ ಯಾಕೆ ಹುಲ್ಲು?” ಡಿ.ಪಿ ಬೈತಾರ್
ಶಾಂತಿ ಮತ್ತು ಸಹಬಾಳ್ವೆಯ ‘ಈದ್ ಉಲ್ ಫಿತರ್’ ವಿಶೇಷ ಸಂದೇಶ
ವಾರದೊಳಗೆ ಮೂರು ಆತ್ಮಹತ್ಯೆ ಪ್ರಕರಣ!- ಮುಸ್ಲಿಂ ಯುವಕರಿಗೇನಾಗಿದೆ..?
ನಿಮ್ಮ ಕಷ್ಟಗಳಿಗೆ ಪರಿಹಾರ ಬೇಕೇ..? ಈ ಮಸೀದಿಗೆ ಬನ್ನಿರಿ….!!!
ಸಮಸ್ತ: ಶತಮಾನೋತ್ಸವದ ಹೆಜ್ಜೆ ಗುರುತುಗಳು
ಸುಲ್ತಾನುಲ್ ಉಲಮಾ ಎಪಿ ಉಸ್ತಾದರ ಮೂರನೇ ಕೇರಳ ಯಾತ್ರೆ- “ಮನುಷ್ಯರೊಂದಿಗೆ” ಎಂಬ ಮಾನವೀಯ ಸಂದೇಶದ ಮಹಾ ಪಯಣ
‘ಬೆಲ್ಯೆಚ್ಚ ಅಸ್ಸಲಾಮು ಅಲೈಕುಂ’ ಪ್ರೀತಿಯ ಅಣ್ಣನ ಖಬರಿನ ಬಳಿ ತಂಗಿಯ ಸಲಾಂ