ದ.ಕ.ಜಿಲ್ಲೆ ಕಳೆದ ಹಲವು ದಶಕಗಳಿಂದ ಮತೀಯ ಸೂಕ್ಷ್ಮ ಜಿಲ್ಲೆ.ಇದರ ಅಂತಿಮ ಫಸಲು ರಾಜಕೀಯ ಪಕ್ಷಗಳೇ ಮೇಯುತ್ತಿದೆ. ಈ ಬೆಳವಣಿಗೆ ಇಂದಿನವರೆಗೂ ಮುಂದುವರಿದಿದೆ. ಇತ್ತೀಚೆಗೆ ಸುಳ್ಯದಲ್ಲಿನ ಘಟನೆಗಳು ಈ ದೇಶದಲ್ಲಿ ಕನಿಷ್ಠ ರಾಜಧರ್ಮ ಪಾಲಿಸುವ ಆಡಳಿತಗಾರರ ವಂಶ ಅಂತಿಮವಾಗುತ್ತಾ ಬರುವ ಸೂಚನೆಗೆ ಬಂದು ನಿಲ್ಲುವ ಸ್ಥಿತಿ ಸೃಷ್ಟಿಯಾಗಿದೆ.
ಸುಳ್ಯದ ಸಾವುಗಳು ಖಂಡನೀಯ, ಆದರೆ ಈ ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿಯವರು ಸಾವಿನಲ್ಲಿ ಸತ್ತವನ ಧರ್ಮ ನೋಡಿದರು, ಮತ್ತು ತನ್ನ ಭೇಟಿಯನ್ನು ಪ್ರವೀಣ್ ನೆಟ್ಟಾರು ಮನೆಗೆ ಸೀಮಿತ ಗೊಳಿಸಿ ಸಾಂತ್ವನ ಹೇಳಿ ಪರಿಹಾರ ಘೋಷಿಸಿ ಹಿಂತಿರುಗಿದರು. ಅದೇ ಕೆಲವು ದಿನ ಹಿಂದೆ ದುಷ್ಕರ್ಮಿಗಳಿಂದ ಹತ್ಯೆಯಾದ ಮಸೂದ್ ಮನೆಗೆ ಸಾಂತ್ವಾನ ಭೇಟಿ ನೀಡಲಿಲ್ಲ. ಹಿಂತಿರುಗಿ ಬೆಂಗಳೂರು ತಲುಪುವ ಮುನ್ನವೇ ತನ್ನ ಕ್ರಿಯೆಗೆ ಪ್ರತಿಕ್ರಿಯೆ ಸಿದ್ದಾಂತವನ್ನು ಈ ಹಿಂದೆ ಮಂಗಳೂರಿನಲ್ಲಿ ಪ್ರತಿಪಾದಿಸಿದಂತೆ, ಸುರತ್ಕಲ್ ನ ಮುಸ್ಲಿಮ್ ಯುವಕನ ಮತೀಯ ಹತ್ಯೆಗೆ ಕಾರಣರಾದರು.
ಈ ಮೂಲಕ ಬೊಮ್ಮಾಯಿಯವರು ಉಭಯ ಸಾವನ್ನು ಒಂದೇ ದೃಷ್ಟಿಯಲ್ಲಿ ನೋಡಿದ್ದರೆ, ಖಂಡಿತ ಮೂರನೇ ಸಾವನ್ನು ನೈತಿಕವಾಗಿ ತಡೆಯ ಬಹುದಿತ್ತು. ಇದು ರಾಜಧರ್ಮ, ಆದರೆ ದುರದೃಷ್ಟವಶಾತ್ ಬೊಮ್ಮಾಯಿ ಯವರು ಸಾವಿನ ಅಳತೆಯ ಮಾಪನವನ್ನು ಈ ರಾಜ್ಯದ ಜನತೆಗೆ ಕೊಡುಗೆ ನೀಡಿದರು.
ಇಂದು ಬೊಮ್ಮಾಯಿ ನೀಡಿದ ಈ ಕೊಡುಗೆ ಮುಂದೆ ಇನ್ನಿತರ ಸಮುದಾಯಕ್ಕೆ ಅನ್ವಯವಾಗುವ ಭೀತಿ ಸೃಷ್ಟಿಯಾಗಿದೆ. ಈ ದೇಶದ ಜಾತ್ಯಾತೀತ ಸಂಕಲ್ಪ ಉಳ್ಳ ಸರ್ವರೂ ಈ ಬೆಳವಣಿಗೆಗಳ ಬಗ್ಗೆ ವಿಮರ್ಶಿಸ ಬೇಕಿದೆ. ಸಂಭವಿಸಿದ ಸಾವಿಗೆ ನ್ಯಾಯ ಒದಗಿಸುವ ಜವಾಬ್ದಾರಿ ಸರಕಾರಕ್ಕೆ ಇರಲಿ ಎಂದು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಇದರ ಅಧ್ಯಕ್ಷರಾದ ಕೆ.ಅಶ್ರಫ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
















ಇನ್ನಷ್ಟು ಸುದ್ದಿಗಳು
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ
ಮಾದರಿ ಮದುವೆ ಅಭಿಯಾನದ ಸಮಾರೋಪ ಪ್ರಚಾರ; ಎ.28, 29 ರಂದು ವಾಹನ ಸಂದೇಶ ಜಾಥಾ
ಮುಂಬೈಯನ್ನು ನಡುಗಿಸಿದ ಘಟನೆ: ಬಿರಿಯಾನಿ ಮತ್ತು ಕಲ್ಲಂಗಡಿ ತಿಂದ ಕುಟುಂಬ ಬೆಳಗಾಗುವಷ್ಟರಲ್ಲಿ ಅಂತ್ಯ
‘ಮಾದರಿ ಮದುವೆ ಅಭಿಯಾನ’ ಸಮಾರೋಪ ಸಮಾರಂಭ – ಎಸ್ವೈಎಸ್ ಬಂಟ್ವಾಳ ಝೋನ್ ಯಶಸ್ವಿಗೆ ಕರೆ
ಮಂಗಳೂರು ಪೊಲೀಸ್ ಕಮಿಷನರ್: ವರ್ಗಾವಣೆ ವಿಚಾರ ಕೈಬಿಡುವಂತೆ ಮನವಿ- ಡಿಜಿಪಿಗೆ ಇಕ್ಬಾಲ್ ಬಾಳಿಲ ಪತ್ರ