janadhvani

Kannada Online News Paper

ಒಂದೇ ಮನೆಯಲ್ಲಿ 5 ಅಂಗವಿಕಲರಿರುವ ಮನೆಗೆ ವಕ್ಫ್ ಅಧ್ಯಕ್ಷರ ಭೇಟಿ

ಸುಳ್ಯ: ತಾಲೂಕಿನ ಐದು ಅಂಗವಿಕಲರು ಒಂದೇ ಮನೆಯಲ್ಲಿ ಸಂಕಷ್ಟದಲ್ಲಿರುವುದನ್ನರಿತು ವಕ್ಫ್ ಅಧ್ಯಕ್ಷರಾದ ಶಾಫಿ ಸಅದಿ ಯವರು ಭೇಟಿ ನೀಡಿದರು.

ಐದು ಮಂದಿ ಅಂಗವಿಕಲರಲ್ಲಿ ಒಂದು ಹೆಣ್ಣಿನ ಮದುವೆ ನಡೆಯಲಿರುವ ಕಾರಣ ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಕ್ಕೆ ವಕ್ಫ್ ಅಧ್ಯಕ್ಷರಾದ ಶಾಫಿ ಸಅದಿ ಬೆಂಗಳೂರು ರವರು ಪ್ರಾರ್ಥನೆ ಮಾಡಿ ಆಶ್ವಾಸನೆ ನೀಡಿದರು.

ಈ ಸಂಧರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಬೋರ್ಡ್ ಉಪಾಧ್ಯಕ್ಷರಾದ ಅಬ್ದುರ್ರಹ್ಮಾನ್ ಮೊಗರ್ಪಣೆ, ಜಮಾಅತ್ ಅಧ್ಯಕ್ಷರಾದ ಶಾಫಿ ಚೆನ್ನಾರು ಸಹಿತ ಜಮಾಅತಿನ ಹಲವು ನಾಯಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.