ಬುರೈದ: ತ್ಯಾಗ, ಬಲಿದಾನಗಳ ಸಂಕೇತವಾದ ಬಲಿ ಪೆರ್ನಾಲ್ ದಿನದಂದು ಬುರೈದ ದಾರುಲ್ ಖ್ಯೆರ್ ನಲ್ಲಿ ಸೇರಿದ ಕರ್ನಾಟಕ ಕಲ್ಚರಲ್ ಪೌಂಡೇಶನ್ ಕೆ.ಸಿ.ಎಫ್ ಅಲ್ ಕಸೀಮ್ ಝೋನ್ ಕಾರ್ಯಕರ್ತರು ಪರಸ್ಪರ ಶುಭಾಶಯ ವಿನಿಮಯ ನಡೆಸಿದರು.
ಈದ್ ಟೂರ್ ಭಾಗವಾಗಿ ಮಧ್ಯಾಹ್ನ ಬುರೈದದಿಂದ ಹೊರಟ ಯಾತ್ರಾ ತಂಡವು ಭೂ ಲೋಕದ ಸ್ವರ್ಗವಾದ ಪುಣ್ಯ ಮದೀನ ಮುನವ್ವರ , ಬದ್ರ್, ಉಹ್ದ್, ಖಂದಕ್,ಸಲ್ಮಾನುಲ್ ಪಾರಿಸಿ ರ.ಅ ರವರ ತೋಟ, ಉಸ್ಮಾನ್ ರ .ಅ ರವರ ತೋಟ ,ಮಸ್ಜಿದುಲ್ ಖುಬಾ, ಮಸ್ಜಿದುಲ್ ಕಿಬ್ಲತೈನಿ ಮಸ್ಜಿದುಲ್ ದರಾ ಹಾಗೂ, ಹಲವಾರು ಚಾರಿತ್ರಿಕ,ಆಧ್ಯಾತ್ಮಿಕ , ಪ್ರೇಕ್ಷಣೀಯ ಸ್ಥಳಗಳನ್ನು ಸಂದರ್ಶಿಸಿ ಯಾಂಬು ಸಮುದ್ರ ಕಿನಾರೆಗೆ ತಲುಪಿದ ತಂಡವು ಬೋಟಿಂಗ್, ಈಜು, ಕ್ರಿಡೆಗಳಲ್ಲಿ ಬಾಗವಹಿಸಿ ಹಿಂತಿರುಗಿದ ತಂಡವು ಪುನ: ಮರುದಿನ ಸಾಯಂಕಾಲ ಪ್ರಕೃತಿ ರಮಣಿಯ ಉಯಿನುಲ್ ಜುವಾ ಗಾರ್ಡನ್ ನಲ್ಲಿ ಒಟ್ಟು ಸೇರಿ ವಿಶೇಷ ಮಜ್ಲಿಸ್ ಗಳನ್ನು ನಡೆಸಿದರು.
ದಾರಿಯುದ್ದಕ್ಕೂ ದಿಕ್ರ್, ದುವಾ,ಸ್ವಲಾತ್, ನೆಬಿ ಮದ್ಹ್, ಹಾಗೂ ಕ್ವಿಝ ಗಳನ್ನೊಳಗೊಂಡ ಆತ್ಮೀಯತೆಯಿಂದ ಕೂಡಿದ ಯಾತ್ರೆಗೆ ರಿಯಾದ್, ದವಾದ್ಮಿ, ಅಲ್ ರಾಸ್, ಉನೈಝ ದ ಕಾರ್ಯಕರ್ತರು ಕೈ ಜೋಡಿಸಿ ಅವಿಸ್ಮರಣಿಯಗೊಳಿಸಿದರು.
ಚೀಫ್ ಅಮೀರ್ ಯಾಕೂಬ್ ಸಖಾಫಿ ಸಹ ಅಮೀರ್ ಖಯ್ಯುಂ ಜಾಲ್ಸೂರು ಕಂಟ್ರೋಲರ್ ಸಾಲಿ ಬೆಳ್ಳಾರೆ, ರಶೀದ್ ಸಖಾಫಿ ಮಿತ್ತೂರು ನೇತೃತ್ವ ನೀಡಿದರು.


















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ