ನವದೆಹಲಿ: ರಾಜಸ್ಥಾನದ ಉದಯಪುರದಲ್ಲಿ ದುಷ್ಕರ್ಮಿಗಳು ನಡೆಸಿದ ಹಿಂದೂ ಟೈಲರ್ವೊಬ್ಬರ ಭೀಕರ ಶಿರಚ್ಛೇದವನ್ನು ಭಾರತೀಯ ಗ್ರ್ಯಾಂಡ್ ಮುಫ್ತಿ ಶೈಖ್ ಅಬೂಬಕರ್ ಅಹ್ಮದ್ ಕಾಂತಪುರಂ ತೀವ್ರವಾಗಿ ಖಂಡಿಸಿದ್ದಾರೆ.
“ಇಂತಹ ಭೀಕರ ಕೃತ್ಯವು ಇಸ್ಲಾಂ ಧರ್ಮ ಮತ್ತು ಪ್ರವಾದಿ ಮುಹಮ್ಮದ್ (ಸ) ರ ಬೋಧನೆಗಳಿಗೆ ಅನ್ಯವಾಗಿದೆ.ದೇಶದ ಕಾನೂನುಗಳಿಗೂ ವಿರುದ್ಧವಾಗಿದೆ. ಇಸ್ಲಾಂ ಎಂದಿಗೂ ಹಿಂಸೆಯನ್ನು ಪ್ರೋತ್ಸಾಹಿಸುವುದಿಲ್ಲ” ಎಂದು ಇಂಡಿಯನ್ ಗ್ರ್ಯಾಂಡ್ ಮುಫ್ತಿ ತಮ್ಮ ಟ್ವಿಟರ್ ಖಾತೆಯಲ್ಲಿ ಉಲ್ಲೇಖಿಸಿದ್ದಾರೆ.
The heinous murder in Udaipur, Rajasthan, is reprehensible and is against Islam and Prophet Muhammed’s (PBUH) teachings and the laws of the land. Islam never encourages violence.#Udaipur
— H.E Sheikh Abubakr Ahmad الشيخ أبوبكر أحمد (@shkaboobacker) June 29, 2022
ಪ್ರವಾದಿ(ಸ) ರನ್ನು ನಿಂದಿಸಿದ್ದ, ನೂಪುರ್ ಶರ್ಮಾ ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಕ್ಕಾಗಿ ಟೈಲರ್ ಕನ್ಹಯ್ಯ ಲಾಲ್ ಎಂಬವರನ್ನು ನಿನ್ನೆ ಇಬ್ಬರು ಮುಸ್ಲಿಂ ಯುವಕರು ಶಿರಚ್ಛೇದಿಸಿ ದಾರುಣವಾಗಿ ಹತ್ಯೆ ಮಾಡಿದ್ದರು. ಈ ಘಟನೆ ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಕರಣವನ್ನು ಈಗಾಗಲೇ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ತನಿಖೆ ನಡೆಸುತ್ತಿದೆ.







