janadhvani

Kannada Online News Paper

ಅಝಾನ್‌ಗೆ ಧ್ವನಿವರ್ಧಕ: ನಾಳೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ- ದ.ಕ.ಜಿಲ್ಲಾ ವಖ್ಫ್

ಧ್ವನಿವರ್ಧಕದ ಅನುಮತಿ ಪಡೆಯಲು ಪೋಲೀಸ್ ಇಲಾಖೆ ಹಾಗೂ ಇನ್ನಿತರ ಕಚೇರಿಗಳಿಗೆ ಅಲೆದಾಡದಂತೆ ಸಲಹೆ

ಮಂಗಳೂರು; ಅಝಾನ್ ಬಗ್ಗೆ ಸರಕಾರದ ಸುತ್ತೋಲೆಗೆ ಅನುಗುಣವಾಗಿ ಧ್ವನಿವರ್ಧಕದ ಅನುಮತಿಯ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಯವರಿಂದ ತಿಳಿದ ಮಾಹಿತಿ ಪ್ರಕಾರ ಮೇ.24 ರಂದು ಅಧಿಕಾರಿಗಳ ಸಭೆ ನಡೆಯಲಿದ್ದು ನಂತರ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ.

ಅಷ್ಟರವರೆಗೆ ಯಾರೂ ಗೊಂದಲಕ್ಕೊಳಗಾಗದೆ, ಧ್ವನಿವರ್ಧಕದ ಅನುಮತಿ ಪಡೆಯಲು ಪೋಲೀಸ್ ಇಲಾಖೆ ಹಾಗೂ ಇನ್ನಿತರ ಕಚೇರಿಗಳಿಗೆ ಅಲೆದಾಡದಂತೆ ಜಿಲ್ಲೆಯ ಎಲ್ಲಾ ಮಸೀದಿಯ ಆಡಳಿತ ಸಮಿತಿಗೆ ಈ ಮೂಲಕ ಜಿಲ್ಲಾ ವಖ್ಫ್ ಸಲಹಾ ಮಂಡಳಿ ಅಧ್ಯಕ್ಷರಾದ ಬಿ.ಎ.ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ತಿಳಿಸಿದ್ದಾರೆ.