ಮಂಗಳೂರು: ಮುಂದಿನ ತಿಂಗಳು ಉಡುಪಿಯಲ್ಲಿ ಸಹಬಾಳ್ವೆ ಸಂಸ್ಥೆಯಿಂದ ರಾಜ್ಯ ಮಟ್ಟದ ಸೌಹಾರ್ಧ ರ್ಯಾಲಿ ಮತ್ತು ಸಭೆ ನಡೆಯಲಿದ್ದು , ಪೂರ್ವ ಭಾವಿಯಾಗಿ ಇಂದು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜು ಸಭಾಂಗಣದಲ್ಲಿ ಮಂಗಳುರಿನ ಸಮಾನ ಮನಸ್ಕ ಸಂಘಟನೆಗಳ ಪದಾಧಿಕಾರಿಗಳೊಂದಿಗೆ,ಉದ್ದೇಶಿತ ಸಭೆಯ ರೂಪುರೇಷೆ ಬಗ್ಗೆ ಚರ್ಚೆ ಮತ್ತು ಸಲಹೆಗಳನ್ನು ಕ್ರೋಡೀಕರಿಸ ಲಾಯಿತು.
ಸಭೆಯಲ್ಲಿ ಉಡುಪಿಯ ಫಣಿರಾಜ್, ಯಾಸೀನ್ ಮಲ್ಪೆ, ಕೆ.ಅಶ್ರಫ್, ಇಬ್ರಾಹಿಂ ಕೋಡಿಜಾಲ್, ಸಾಹುಲ್ ಹಮೀದ್, ಅಬೂಬಕ್ಕರ್ ಕುಳಾಯಿ, ಮೊಹಮ್ಮದ್ ಕುಂಞ, ಸಿದ್ದೀಕ್ ತಲಪಾಡಿ, ಮುಸ್ತಾಫಾ ಕೆಂಪಿ, ಮೌಸೀನ್ ಸಮಣಿಗ, ಸಿರಾಜ್ ಬಜ್ಪೆ, ಸ್ವಾಲಿಹ್ ಬಜ್ಪೆ, ಇಬ್ರಾಹಿಂ ಹಾಜಿ ಸುಳ್ಯ, ಶಾಫಿ ಬಬ್ಬುಕಟ್ಟೆ, ಹಿದಾಯತ್ ಮಾರಿಪಲ್ಲ, ಕರೀಮ್ ವಳಚ್ಚಿಲ್, ಅಶ್ರಫ್ ಕಿನಾರಾ ಮತ್ತಿತರರು ಉಪಸ್ಥಿತಿದ್ದರು.
ಕೆ.ಅಶ್ರಫ್
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.







