ಮಂಗಳೂರು: ಗುರುಪುರ ಹೋಬ್ಲಿ,ತೆಂಕ ಉಳೆಪ್ಪಾಡಿ ಗ್ರಾಮದ ಮಳಲಿಯ ಶೃದ್ದಾ ಕೇಂದ್ರದ ನವೀಕರಣ ಸಂದರ್ಭ ರಚನೆಯ ವಾಸ್ತು ಶಿಲ್ಪ ನೋಡಿ,ಅದು ಪ್ರಾಚೀನ ಅನ್ಯ ಕೋಮಿನ ಶೃದ್ಧಾ ಕೇಂದ್ರವೆಂದು ರದ್ದಾಂತ ಎಬ್ಬಿಸುವ ಮತೀಯ ಮನಸ್ಥಿತಿ ಇನ್ನಾದರೂ ಈ ದೇಶದಲ್ಲಿ ನಿಲ್ಲಬೇಕು.
ಪುರಾತನ ಮಸೀದಿಗಳ ಹೆಚ್ಚಿನ ವಾಸ್ತು ಶಿಲ್ಪಗಳನ್ನು ಸ್ಥಳೀಯ ಶೈಲಿಯಲ್ಲಿ ಇಲ್ಲಿನ ಮುಸ್ಲಿಮೇತರ ಕೆತ್ತನೆ ಶಿಲ್ಪಿಗಳ ಕೈಯಿಂದಲೇ ರಚಿಸಲಾಗಿದೆ. ಈ ದೇಶದ ಪ್ರಾಚೀನ ಅದೆಷ್ಟೋ ಮಸೀದಿಗಳ ನಿರ್ಮಾಣದಲ್ಲಿ ಈ ನಾಡಿನ ಮುಸ್ಲಿಮೇತರ ಮಾನವ ಶ್ರಮ ಕೊಡುಗೆ ಇದೆ.ಹಾಗೆಂದು ವರ್ತಮಾನದ ಸೀಮಿತ ಮನಸ್ಥಿತಿಯ ಸಂಸ್ಕೃತಿ ಧರ್ಮ ರಕ್ಷಕರು ಎಂದು ಕರೆಸಿಕೊಳ್ಳುವ ಕೆಲವು ಪುಂಡರ ರದ್ದಾಂತವೆ ಹೊರತು, ಮಳಲಿ ಘಟನೆ ಬೇರೇನು ಅಲ್ಲ. ಇವರಿಗೆ ಕರೆಸಿ ಬುದ್ದಿ ಹೇಳುವವರಿಲ್ಲ.
ಇಂತಹ ರದ್ದಾಂತಿಗಳು ,ಇತ್ತೀಚೆಗೆ ಮಂಗಳೂರಿನ ಪಕ್ಷಿಕೆರೆಯಲ್ಲಿ ನಿರ್ಮಾಣವಾದ ನವ ಮಸೀದಿ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಒಳಾಂಗಣ ಸ್ಥಳೀಯ ಹರೀಶ್ ಆಚಾರ್ಯ ಶಿಲ್ಪಿಯ ಇಂಡೋ ಅರೇಬಿಯನ್ ವಾಸ್ತು ಶಿಲ್ಪದ ಮರದ ಕೆತ್ತನೆ ಯನ್ನು , ಮಸೀದಿಗೆ ಮುಕ್ತ ಭೇಟಿ ಮಾಡಿ, ವೀಕ್ಷಿಸ ಲಿ ಮತ್ತು ಹರೀಶ್ ಆಚಾರ್ಯ ರಿಂದ ಪಾಠ ಕಲಿತು ಕೊಳ್ಳಲಿ.
ಕೆ.ಅಶ್ರಫ್.
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.


















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ