ಮಂಗಳೂರು: ಕರ್ನಾಟಕ ಉಚ್ಛ ನ್ಯಾಯಾಲಯ ಇತ್ತೀಚಿಗೆ ಪ್ರಕಟಿಸಿದ ಹಿಜಾಬ್ ಬಗ್ಗೆಗಿನ ತೀರ್ಪುವಿನಲ್ಲಿ, ಹಿಜಾಬ್ ಇಸ್ಲಾಮ್ ಧರ್ಮದ ಅಂಗವಲ್ಲ, ಹಿಜಾಬ್ ಗೆ ಧಾರ್ಮಿಕ ಮಹತ್ವವಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸುವಿಕೆ ಮತ್ತು ಮುಸ್ಲಿಮ್ ಮಹಿಳೆಯರ ಧಾರ್ಮಿಕ ಸ್ವಾತಂತ್ರ್ಯ ದ ಹಕ್ಕು ಆದ ಹಿಜಾಬ್ ಧರಿಸುವಿಕೆಗೆ ಶೈಕ್ಷಣಿಕ ಸಂಸ್ಥೆಗಳಲ್ಲಿ ವಿರೋಧವನ್ನು ವಿಮರ್ಶಿಸಿ ಕರ್ನಾಟಕ ರಾಜ್ಯ ಅಮೀರ್ ಎ ಶರಿಯತ್ ಮುಖ್ಯಸ್ಥರಾದ ಮೌಲಾನ ಸಗೀರ್ ಅಹಮ್ಮದ್ ರವರು ನೀಡಿದ ಒಂದು ದಿನದ ಶಾಂತಿಯುತ ಕರ್ನಾಟಕ ವ್ಯವಹಾರ ಸ್ಥಗಿತ ಮತ್ತು ಈ ಬಂದ್ ಅನ್ನು ಸ್ವಯಂ ಪ್ರೇರಿತ ವಾಗಿ ರಾಜ್ಯಾದ್ಯಂತ ಮತ್ತು ದ.ಕ.ಜಿಲ್ಲೆಯಾದ್ಯಂತ ಶಾಂತಿಯುತವಾಗಿ ನಡೆಸಿದ ಸರ್ವರಿಗೂ ಧನ್ಯವಾದಗಳು.
ಹಿಜಾಬ್ ತೀರ್ಪು ವಿಮರ್ಶಿಸಿ ನಡೆಸಿದ ಈ ಸ್ವಯಂ ಪ್ರೇರಿತ ವ್ಯವಹಾರ ಸ್ಥಗಿತಕ್ಕೆ ಸಹಕರಿಸಿದ ಜಿಲ್ಲೆಯ ಹಸಿ ಮೀನು ಮಾರಾಟ ಮತ್ತು ಕಮಿಷನ್ ಏಜೆಂಟರ ಸಂಘ, ಟ್ರಾವೆಲರ್ ಮೀನುಗಾರಿಕಾ ಬೋಟ್ ಸಂಘ, ಜವಳಿ, ಫ್ಯಾನ್ಸಿ, ಚಪ್ಪಲಿ ವ್ಯಾಪಾರಸ್ಥರು, ರೆಸ್ಟೋರೆಂಟ್ ಮಾಲಕರು,ದಿನಸಿ ವ್ಯಾಪಾರಸ್ಥರು, ಸ್ಟೀಲ್,ಸ್ಕ್ರಾಪ್ ವ್ಯಾಪಾರಸ್ಥರು,ಚಿಕನ್,ಮಟನ್, ಫಿಶ್ ವ್ಯವಹಾರಸ್ಥರು,ಜಿಲ್ಲೆಯ ತರಕಾರಿ,ಹಣ್ಣು ವ್ಯಾಪಾರಸ್ಥರು , ಕಟ್ಟಡ ಸಮಾಗ್ರಿ, ಹಾರ್ಡ್ವೇರ್ ಅಂಗಡಿ ಮಾಲೀಕರು,ಸ್ಟೇಷನರಿ,ಆಟೋ ಕ್ಯಾಬ್,ರಿಕ್ಷಾ ಚಾಲಕರು ಮತ್ತು ಮಾಲಕ ರು,ಶಿಕ್ಷಣ ಸಂಸ್ಥೆ ಮುಖ್ಯಸ್ಥರು,ನಗರ ಮತ್ತು ಗ್ರಾಮಾಂತರ ಜಮಾತ್ ಕಮಿಟಿ,ಕಾರ್ಮಿಕರು,ದಿನಗೂಲಿ ನೌಕರರು, ವೃತ್ತಿ ದಾರರು, ಸ್ಥಳೀಯ ನಗರ ಮತ್ತು ತಾಲೂಕು ಮಟ್ಟದ ಸರ್ವ ಒಕ್ಕೂಟ ಸಂಘಟನೆಗಳು,ವೇದಿಕೆ,ಸಂಘ ಸಂಸ್ಥೆಗಳು,ವಿಧ್ಯಾರ್ಥಿ ವಿದ್ಯಾರ್ಥಿನಿಯರು, ವಿಧ್ಯಾರ್ಥಿ ಸಂಘಟನೆಗಳು, ಪ್ರಜಾಸತ್ತಾತ್ಮಕ ಉದ್ದೇಶಿತ ವಿವಿದ ರಾಜಕೀಯ ಪಕ್ಷಗಳು ಸರ್ವರಿಗೂ ಧನ್ಯವಾದಗಳು. ಈ ವ್ಯವಹಾರ ಸ್ಥಗಿತ ಪ್ರದರ್ಶನಕ್ಕೆ ಸಹಕರಿಸಿದ ದ.ಕ.ಜಿಲ್ಲಾಡಳಿತ, ಮಂಗಳೂರು ನಗರ ಮತ್ತು ದ.ಕ.ಜಿಲ್ಲಾ ಪೊಲೀಸು ಇಲಾಖೆಗೆ ಕೂಡಾ ಧನ್ಯವಾದಗಳು.
ಕೆ.ಅಶ್ರಫ್ (ಮಾಜಿ ಮೇಯರ್)
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.
















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ