ಮಂಗಳೂರು: ಕರ್ನಾಟಕ ಉಚ್ಛ ನ್ಯಾಯಾಲಯ ಇತ್ತೀಚಿಗೆ ಪ್ರಕಟಿಸಿದ ಹಿಜಾಬ್ ಬಗ್ಗೆಗಿನ ತೀರ್ಪುವಿನಲ್ಲಿ, ಹಿಜಾಬ್ ಇಸ್ಲಾಮ್ ಧರ್ಮದ ಅಂಗವಲ್ಲ, ಹಿಜಾಬ್ ಗೆ ಧಾರ್ಮಿಕ ಮಹತ್ವವಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸುವಿಕೆ ಮತ್ತು ಮುಸ್ಲಿಮ್ ಮಹಿಳೆಯರ ಧಾರ್ಮಿಕ ಸ್ವಾತಂತ್ರ್ಯ ದ ಹಕ್ಕು ಆದ ಹಿಜಾಬ್ ಧರಿಸುವಿಕೆಗೆ ಶೈಕ್ಷಣಿಕ ಸಂಸ್ಥೆಗಳಲ್ಲಿ ವಿರೋಧವನ್ನು ವಿಮರ್ಶಿಸಿ ಕರ್ನಾಟಕ ರಾಜ್ಯ ಅಮೀರ್ ಎ ಶರಿಯತ್ ಮುಖ್ಯಸ್ಥರಾದ ಮೌಲಾನ ಸಗೀರ್ ಅಹಮ್ಮದ್ ರವರು ನೀಡಿದ ಒಂದು ದಿನದ ಶಾಂತಿಯುತ ಕರ್ನಾಟಕ ವ್ಯವಹಾರ ಸ್ಥಗಿತ ಮತ್ತು ಈ ಬಂದ್ ಅನ್ನು ಸ್ವಯಂ ಪ್ರೇರಿತ ವಾಗಿ ರಾಜ್ಯಾದ್ಯಂತ ಮತ್ತು ದ.ಕ.ಜಿಲ್ಲೆಯಾದ್ಯಂತ ಶಾಂತಿಯುತವಾಗಿ ನಡೆಸಿದ ಸರ್ವರಿಗೂ ಧನ್ಯವಾದಗಳು.
ಹಿಜಾಬ್ ತೀರ್ಪು ವಿಮರ್ಶಿಸಿ ನಡೆಸಿದ ಈ ಸ್ವಯಂ ಪ್ರೇರಿತ ವ್ಯವಹಾರ ಸ್ಥಗಿತಕ್ಕೆ ಸಹಕರಿಸಿದ ಜಿಲ್ಲೆಯ ಹಸಿ ಮೀನು ಮಾರಾಟ ಮತ್ತು ಕಮಿಷನ್ ಏಜೆಂಟರ ಸಂಘ, ಟ್ರಾವೆಲರ್ ಮೀನುಗಾರಿಕಾ ಬೋಟ್ ಸಂಘ, ಜವಳಿ, ಫ್ಯಾನ್ಸಿ, ಚಪ್ಪಲಿ ವ್ಯಾಪಾರಸ್ಥರು, ರೆಸ್ಟೋರೆಂಟ್ ಮಾಲಕರು,ದಿನಸಿ ವ್ಯಾಪಾರಸ್ಥರು, ಸ್ಟೀಲ್,ಸ್ಕ್ರಾಪ್ ವ್ಯಾಪಾರಸ್ಥರು,ಚಿಕನ್,ಮಟನ್, ಫಿಶ್ ವ್ಯವಹಾರಸ್ಥರು,ಜಿಲ್ಲೆಯ ತರಕಾರಿ,ಹಣ್ಣು ವ್ಯಾಪಾರಸ್ಥರು , ಕಟ್ಟಡ ಸಮಾಗ್ರಿ, ಹಾರ್ಡ್ವೇರ್ ಅಂಗಡಿ ಮಾಲೀಕರು,ಸ್ಟೇಷನರಿ,ಆಟೋ ಕ್ಯಾಬ್,ರಿಕ್ಷಾ ಚಾಲಕರು ಮತ್ತು ಮಾಲಕ ರು,ಶಿಕ್ಷಣ ಸಂಸ್ಥೆ ಮುಖ್ಯಸ್ಥರು,ನಗರ ಮತ್ತು ಗ್ರಾಮಾಂತರ ಜಮಾತ್ ಕಮಿಟಿ,ಕಾರ್ಮಿಕರು,ದಿನಗೂಲಿ ನೌಕರರು, ವೃತ್ತಿ ದಾರರು, ಸ್ಥಳೀಯ ನಗರ ಮತ್ತು ತಾಲೂಕು ಮಟ್ಟದ ಸರ್ವ ಒಕ್ಕೂಟ ಸಂಘಟನೆಗಳು,ವೇದಿಕೆ,ಸಂಘ ಸಂಸ್ಥೆಗಳು,ವಿಧ್ಯಾರ್ಥಿ ವಿದ್ಯಾರ್ಥಿನಿಯರು, ವಿಧ್ಯಾರ್ಥಿ ಸಂಘಟನೆಗಳು, ಪ್ರಜಾಸತ್ತಾತ್ಮಕ ಉದ್ದೇಶಿತ ವಿವಿದ ರಾಜಕೀಯ ಪಕ್ಷಗಳು ಸರ್ವರಿಗೂ ಧನ್ಯವಾದಗಳು. ಈ ವ್ಯವಹಾರ ಸ್ಥಗಿತ ಪ್ರದರ್ಶನಕ್ಕೆ ಸಹಕರಿಸಿದ ದ.ಕ.ಜಿಲ್ಲಾಡಳಿತ, ಮಂಗಳೂರು ನಗರ ಮತ್ತು ದ.ಕ.ಜಿಲ್ಲಾ ಪೊಲೀಸು ಇಲಾಖೆಗೆ ಕೂಡಾ ಧನ್ಯವಾದಗಳು.
ಕೆ.ಅಶ್ರಫ್ (ಮಾಜಿ ಮೇಯರ್)
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.
















ಇನ್ನಷ್ಟು ಸುದ್ದಿಗಳು
ಇಸ್ಲಾಂ ಧರ್ಮ ಮುಸ್ಲಿಮೇತರರ ವಿರೋಧಿಯಲ್ಲ; ಸಹಬಾಳ್ವೆಯೇ ಅದರ ಮೂಲ ಮಂತ್ರ- ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಕರ್ನಾಟಕ ಜಮ್ಇಯ್ಯತುಲ್ ಉಲಮಾ ಮುಶಾವರಕ್ಕೆ ಶಾಫಿ ಸಅದಿ ನೇಮಕ- ಸುಲ್ತಾನುಲ್ ಉಲಮಾ ಘೋಷಣೆ
ಉಳ್ಳಾಲ ದರ್ಗಾ ಆಡಳಿತ ಮಂಡಳಿ ಚುನಾವಣೆ: ಅಧಿಕಾರಿಗಳ ನೇಮಕ ಮಾಡಿದ ವಕ್ಫ್ ಮಂಡಳಿ
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ