ಕಾರ್ಕಳ: ಸುನ್ನೀ ಮ್ಯಾನೇಜ್ ಮೆಂಟ್ ಅಸೋಸಿಯೇಷನ್ ಎಸ್ ಎಮ್ ಎ ಕಾರ್ಕಳ ರೀಜಿನಲ್ ಸಮಿತಿ ನಡೆಸಿದ ರೀಜಿನಲ್ ಸಮಿತಿಗೆ ಒಳಪಟ್ಟ 15 ಮದ್ರಸಗಳ ಪದಾಧಿಕಾರಿಗಳಿಗೆ ಏಕ ದಿನ ಕ್ಯಾಂಪ್ ಬಹಳ ಯಶಸ್ವಿಯೊಂದಿಗೆ ಸಮಾಪ್ತಿಗೊಂಡಿತು.
ಬಜಗೋಳಿಯ ನೂರುಲ್ ಹುದಾ ಜುಮ್ಮಾ ಮಸ್ಜಿದ್ ಸಭಾಂಗಣದಲ್ಲಿ ಆರಂಭ ಗೊಂಡ ಶೈನ್-22 ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಿಜಿನಲ್ ಸಮಿತಿಯ ಅಧ್ಯಕ್ಷರಾದ H.ಸುಲೈಮಾನ್ ಹಾಜಿ ಬಜಗೋಳಿ ರವರು ವಹಿಸಿದ್ದರು
ಎಸ್ ಜೆ ಎಮ್ ಕಾರ್ಕಳ ರೇಂಜ್ ಅಧ್ಯಕ್ಷರಾದ ಉಮರ್ ಸ’ಅದಿ ಅಲ್ಅಫ್ಳಲಿ ಉದ್ಘಾಟಿಸಿದರು.
ಎಸ್ ವೈ ಎಸ್ ರಾಜ್ಯ ನಾಯಕರಾದ GM.ಮುಹಮ್ಮದ್ ಕಾಮಿಲ್ ಸಖಾಫಿಯವರು ಈಗಿನ ಮದ್ರಸ ಹಾಗೂ ಅದರ ಆಡಳಿತ ಸಮಿತಿ ಹೇಗಿರಬೇಕು ಎಂಬ ವಿಷಯಗಳ ಬಗ್ಗೆ ಸವಿಸ್ತಾರವಾಗಿ ತರಗತಿ ನಡೆಸಿದರು.

SMA ಪಡುಬಿದ್ರೆ ಝೋನಲ್ ಅಧ್ಯಕ್ಷರಾದ ಐಡಿಯಲ್ ಅಬ್ದುರ್ರಹ್ಮಾನ್, ಎಸ್.ಜೆ.ಯು ಕಾರ್ಕಳ ಝೋನಲ್ ಪ್ರ.ಕಾರ್ಯದರ್ಶಿ ಶರೀಫ್ ಮದನಿ ಎಸ್.ವೈ.ಎಸ್ ಕಾರ್ಕಳ ಸೆಂಟರ್ ಅಧ್ಯಕ್ಷ ಹೈದರ್ ಕಾಬೆಟ್ಟು, ಕಾರ್ಯದರ್ಶಿ ಮುಸ್ತಫಾ ಬಂಗ್ಲೆಗುಡ್ಡೆ, ಎಸ್.ಎಸ್.ಎಫ್ ರಾಜ್ಯ ಸಮಿತಿ ಕಾರ್ಯದರ್ಶಿ ಎನ್.ಸಿ.ರಹೀಮ್ ಎಸ್.ಎಸ್.ಎಫ್ ಕಾರ್ಕಳ ಡಿವಿಷನ್ ಅಧ್ಯಕ್ಷ ಅಬ್ದುರ್ರಹ್ಮಾನ್ ಅಮ್ಜದಿ, ಕಾರ್ಯದರ್ಶಿ ಮುನೀಬ್ ಬೊಳ್ಳೊಟ್ಟು, ಸ್ವಾದಿಖ್ ಬಜಗೋಳಿ (KCF) ಹಾಗೂ ರೇಂಜ್ ವ್ಯಾಪ್ತಿಗೊಳಪಟ್ಟ ಜಮಾಅತ್’ಗಳ ಅಧ್ಯಕ್ಷರುಗಳು-ಇಮಾಮ್’ಗಳು ಮತ್ತಿತರ ಪ್ರತಿನಿಧಿಗಳು ಉಪಸ್ಥಿತರಿದ್ದರು. ಅಗಲಿದ ಉಲಮಾಅ್’ಗಳು ಮತ್ತು ಕಾರ್ಯಕರ್ತರಿಗೆ ತಹ್’ಲೀಲ್ ಸಮರ್ಪಣೆಯೂ ನಡೆಯಿತು.
ರೀಜಿನಲ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಕಲಂದರ್ ಶಾಫಿ ಸ’ಅದಿ ಸ್ವಾಗತಿಸಿ ಅಬ್ದುರ್ರಹ್ಮಾನ್ ಮುಸ್ಲಿಯಾರ್ ನಿರೂಪಿಸಿದರು.
















ಇನ್ನಷ್ಟು ಸುದ್ದಿಗಳು
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ