janadhvani

Kannada Online News Paper

ಎಸ್ಎಸ್ಎಫ್ ಬಳ್ಳಾರಿ ಜಿಲ್ಲೆಯ ವಾರ್ಷಿಕ ಕೌನ್ಸಿಲ್

ಬಳ್ಳಾರಿ: ಎಸ್ಎಸ್ಎಫ್ ಬಳ್ಳಾರಿ ಜಿಲ್ಲೆಯ ವಾರ್ಷಿಕ ಮಹಾಸಭೆಯು ಜಿಲ್ಲೆಯ ಹುಸೇನ್ ನಗರದ ಮದರಸ ಒಂದರಲ್ಲಿ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾ ಉಪಾಧ್ಯಕ್ಷರಾದ ಫಾರೂಖ್ ಹಿಮಮಿ ರವರು ಸಭೆಯ ಅಧ್ಯಕ್ಷತೆಯನ್ನು ವಹಿಸಿ, ಸಂಘಟನೆಯನ್ನು ನಗರ ಪಟ್ಟಣಗಳಲ್ಲಿ ಸ್ಥಾಪಿಸಬೇಕೆಂದು ಕರೆ ನೀಡಿದರು.

ಜಿಲ್ಲೆಯ ಪ್ರಧಾನ ಕಾರ್ಯದರ್ಶಿಯವರಾದ ಇಸ್ಹಾಖ್ ಸಖಾಫಿ ಅವರು ವಾರ್ಷಿಕ ವರದಿ ಮಂಡಿಸಿ, ಉತ್ತರ ಕರ್ನಾಟಕದಲ್ಲಿ ಪ್ರಪ್ರಥಮವಾಗಿ ಪ್ರತಿಭೋತ್ಸವವನ್ನು ಏರ್ಪಡಿಸಲು ರಾಜ್ಯ ಸಮಿತಿ ತೀರ್ಮಾನಿಸಿದಾಗ ಅದರ ನೇತೃತ್ವ ವಹಿಸಿದ ಬಳ್ಳಾರಿ ಜಿಲ್ಲೆಯೂ ಬಹಳ ಯಶಸ್ವಿಯಾಗಿ ನಡೆಸಿಕೊಟ್ಟಿದೆ ಎಂದರು. ಜಿಲ್ಲೆಯ ಕಾರ್ಯದರ್ಶಿಯಾದ ಅಬೂಬಕ್ಕರ್ ಸಿದ್ದೀಕ್ ಸಖಾಫಿ ಸಂಘಟನೆಯನ್ನು ಬೆಳವಣಿಗೆಯ ಬಗ್ಗೆ ಮಾತನಾಡಿದರು.

ಈ ಸಭೆಯಲ್ಲಿ ಅಬೂಬಕ್ಕರ್ ಮರ್ಝುಖಿ ಸಖಾಫಿ, ಪೀರಾಸಾಬ್ ಪತ್ರಕರ್ತ ಮತ್ತು ಶಾಕಿರ್ ಸಖಾಫಿ ಹಡಗಲಿ, ನವಾಜ್ ಮುಈನಿ ಹಡಗಲಿ ಇತರರು ಭಾಗವಹಿಸಿದ್ದರು.