ದುಬೈ : ಕಿತ್ತಳೆ ಹಣ್ಣು ಮಾರಿದ ಉಳಿತಾಯದಲ್ಲಿ ಶಾಲೆ ಕಟ್ಟಿ ನೂರಾರು ವಿದ್ಯಾರ್ಥಿಗಳಿಗೆ ಶಿಕ್ಶಣದ ಬಾಗಿಲು ತೆರೆದು ಕೊಟ್ಟ ಅಕ್ಷರ ಸಂತ ಪದ್ಮಶ್ರೀ ಹರೇಕಳ ಹಾಜಬ್ಬ ರವರಿಗೆ ಕರ್ನಾಟಕ ಕಲ್ಚರಲ್ ಫೌಂಡೇಷನ್ ಕೆಸಿಎಫ್ ಯುಎಇ ಸಮಿತಿಯ ಗೌರವಾರ್ಪಣೆ ದುಬೈ ನಲ್ಲಿ ನಡೆದ ಪ್ರತಿಭೋತ್ಸವ ಸಮಾರಂಭದಲ್ಲಿ ನಡೆಯಿತು.
ದುಬೈ ಸರಕಾರದ ಉನ್ನತ ಉನ್ನತ ಅಧಿಕಾರಿ ಶೈಖ್ ಸಲಾ ಮೂಸಾ ಅಲ್ ಮದನಿ ರವರು ಪದ್ಮಶ್ರೀ ಹಾಜಬ್ಬರವರಿಗೆ ಗೌರವಾರ್ಪಣೆ ಮಾಡಿದರು. ಗಲ್ಫ್ ನಾದ್ಯಂತ ಕನ್ನಡ ಕಲಿಸುವ ನಮ್ಮ ಕನ್ನಡ ಕಲಿಕಾ ಪ್ರಾರಂಭೋತ್ಸವ ಪದ್ಮಶ್ರೀ ಹರೇಕಳ ಹಾಜಬ್ಬ ರವರಿಂದ ಚಾಲನೆ ನೀಡಲಾಯಿತು.
ಕೆಸಿಎಫ್ ಯುಎಇ ವೆಲ್ಫೇರ್ ಸಮಿತಿ ಅಧ್ಯಕ್ಷರಾದ ಝೈನುದ್ದೀನ್ ಹಾಜಿ ಬೆಳ್ಳಾರೆ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿ ಎಂ ಮುಮ್ತಾಝ್ ಕೃಷ್ಣಾಪುರ (ಉಪಾಧ್ಯಕ್ಷರು ಕರ್ನಾಟಕ ಮುಸ್ಲಿಂ ಜಮಾಅತ್), ಅಬೂಸ್ವಾಲಿ ಹಾಜಿ (ನಫೀಸ್ ಗ್ರೂಪ್ ದುಬೈ), ಸಯ್ಯದ್ ಶೈಖ್ ಮಖ್ಡೂಮ್, ರೊನಾಲ್ಡ್ ಮಾರ್ಟಿಸ್ (ಬ್ಲೂ ರಾಯಲ್ ಗ್ರೂಪ್), ಅಶ್ರಫ್ ಷಾ ನಂತೂರ್ (ಖೈರಿಯತ್ ಅಲ್ ಶಮ್ಸ್) , ಡಾ ಯೂಸುಫ್ (ಅಧ್ಯಕ್ಷರು ಬಿಸಿಎಫ್ ದುಬೈ), ಅಬ್ದುಲ್ಲಾ ಮದುಮೂಲೆ (ಝಾಯಿದ್ ಫೌಂಡೇಷನ್ ಅಬುಧಾಬಿ), ಇಬ್ರಾಹಿಂ ಗಡಿಯಾರ್, ಮುಹಮ್ಮದ್ ಹಾಜಿ ಕುಕ್ಕುವಳ್ಳಿ, ರಫೀಕ್ ಪಿ ಕೆ, ರಾಝಿಕ್ ಉಳ್ಳಾಲ, ಮುಹಮ್ಮದ್ ಅಲಿ ಉಚ್ಚಿಲ, ಡಾ ಕಾಪು ಮುಹಮ್ಮದ್, ಹಿದಾಯತ್ ಅಡ್ಡೂರ್, ಎಂಇ ಮೂಳೂರು, ಅಶ್ರಫ್ ಹಾಜಿ ಅಡ್ಯಾರ್, ಲತೀಫ್ ಮುಲ್ಕಿ ಸೇರಿದಂತೆ ಹಲವು ಖ್ಯಾತ ಉದ್ಯಮಿಗಳು, ಸಾಂಘಿಕ ನಾಯಕರುಗಳು, ಸಾಮಾಜಿಕ ನೇತಾರರುಗಳು ಭಾಗವಹಿಸಿದ್ದರು. ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಮೂಸಾ ಹಾಜಿ ಬಸರ ಸ್ವಾಗತಿಸಿದರು.
















ಇನ್ನಷ್ಟು ಸುದ್ದಿಗಳು
ಇಸ್ಲಾಂ ಧರ್ಮ ಮುಸ್ಲಿಮೇತರರ ವಿರೋಧಿಯಲ್ಲ; ಸಹಬಾಳ್ವೆಯೇ ಅದರ ಮೂಲ ಮಂತ್ರ- ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಕರ್ನಾಟಕ ಜಮ್ಇಯ್ಯತುಲ್ ಉಲಮಾ ಮುಶಾವರಕ್ಕೆ ಶಾಫಿ ಸಅದಿ ನೇಮಕ- ಸುಲ್ತಾನುಲ್ ಉಲಮಾ ಘೋಷಣೆ
ಉಳ್ಳಾಲ ದರ್ಗಾ ಆಡಳಿತ ಮಂಡಳಿ ಚುನಾವಣೆ: ಅಧಿಕಾರಿಗಳ ನೇಮಕ ಮಾಡಿದ ವಕ್ಫ್ ಮಂಡಳಿ
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ