janadhvani

Kannada Online News Paper

ದುಬೈ: ಕೆಸಿಎಫ್ ನಿಂದ ಪದ್ಮಶ್ರೀ ಹರೇಕಳ ಹಾಜಬ್ಬರಿಗೆ ಗೌರವಾರ್ಪಣೆ ಮತ್ತು ನಮ್ಮ ಕನ್ನಡ ಕಲಿಕಾ ಪ್ರಾರಂಭೋತ್ಸವ

ದುಬೈ : ಕಿತ್ತಳೆ ಹಣ್ಣು ಮಾರಿದ ಉಳಿತಾಯದಲ್ಲಿ ಶಾಲೆ ಕಟ್ಟಿ ನೂರಾರು ವಿದ್ಯಾರ್ಥಿಗಳಿಗೆ ಶಿಕ್ಶಣದ ಬಾಗಿಲು ತೆರೆದು ಕೊಟ್ಟ ಅಕ್ಷರ ಸಂತ ಪದ್ಮಶ್ರೀ ಹರೇಕಳ ಹಾಜಬ್ಬ ರವರಿಗೆ ಕರ್ನಾಟಕ ಕಲ್ಚರಲ್ ಫೌಂಡೇಷನ್ ಕೆಸಿಎಫ್ ಯುಎಇ ಸಮಿತಿಯ ಗೌರವಾರ್ಪಣೆ ದುಬೈ ನಲ್ಲಿ ನಡೆದ ಪ್ರತಿಭೋತ್ಸವ ಸಮಾರಂಭದಲ್ಲಿ ನಡೆಯಿತು.

ದುಬೈ ಸರಕಾರದ ಉನ್ನತ ಉನ್ನತ ಅಧಿಕಾರಿ ಶೈಖ್ ಸಲಾ ಮೂಸಾ ಅಲ್ ಮದನಿ ರವರು ಪದ್ಮಶ್ರೀ ಹಾಜಬ್ಬರವರಿಗೆ ಗೌರವಾರ್ಪಣೆ ಮಾಡಿದರು. ಗಲ್ಫ್ ನಾದ್ಯಂತ ಕನ್ನಡ ಕಲಿಸುವ ನಮ್ಮ ಕನ್ನಡ ಕಲಿಕಾ ಪ್ರಾರಂಭೋತ್ಸವ ಪದ್ಮಶ್ರೀ ಹರೇಕಳ ಹಾಜಬ್ಬ ರವರಿಂದ ಚಾಲನೆ ನೀಡಲಾಯಿತು.

ಕೆಸಿಎಫ್ ಯುಎಇ ವೆಲ್ಫೇರ್ ಸಮಿತಿ ಅಧ್ಯಕ್ಷರಾದ ಝೈನುದ್ದೀನ್ ಹಾಜಿ ಬೆಳ್ಳಾರೆ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿ ಎಂ ಮುಮ್ತಾಝ್ ಕೃಷ್ಣಾಪುರ (ಉಪಾಧ್ಯಕ್ಷರು ಕರ್ನಾಟಕ ಮುಸ್ಲಿಂ ಜಮಾಅತ್), ಅಬೂಸ್ವಾಲಿ ಹಾಜಿ (ನಫೀಸ್ ಗ್ರೂಪ್ ದುಬೈ), ಸಯ್ಯದ್ ಶೈಖ್ ಮಖ್ಡೂಮ್, ರೊನಾಲ್ಡ್ ಮಾರ್ಟಿಸ್ (ಬ್ಲೂ ರಾಯಲ್ ಗ್ರೂಪ್), ಅಶ್ರಫ್ ಷಾ ನಂತೂರ್ (ಖೈರಿಯತ್ ಅಲ್ ಶಮ್ಸ್) , ಡಾ ಯೂಸುಫ್ (ಅಧ್ಯಕ್ಷರು ಬಿಸಿಎಫ್ ದುಬೈ), ಅಬ್ದುಲ್ಲಾ ಮದುಮೂಲೆ (ಝಾಯಿದ್ ಫೌಂಡೇಷನ್ ಅಬುಧಾಬಿ), ಇಬ್ರಾಹಿಂ ಗಡಿಯಾರ್, ಮುಹಮ್ಮದ್ ಹಾಜಿ ಕುಕ್ಕುವಳ್ಳಿ, ರಫೀಕ್ ಪಿ ಕೆ, ರಾಝಿಕ್ ಉಳ್ಳಾಲ, ಮುಹಮ್ಮದ್ ಅಲಿ ಉಚ್ಚಿಲ, ಡಾ ಕಾಪು ಮುಹಮ್ಮದ್, ಹಿದಾಯತ್ ಅಡ್ಡೂರ್, ಎಂಇ ಮೂಳೂರು, ಅಶ್ರಫ್ ಹಾಜಿ ಅಡ್ಯಾರ್, ಲತೀಫ್ ಮುಲ್ಕಿ ಸೇರಿದಂತೆ ಹಲವು ಖ್ಯಾತ ಉದ್ಯಮಿಗಳು, ಸಾಂಘಿಕ ನಾಯಕರುಗಳು, ಸಾಮಾಜಿಕ ನೇತಾರರುಗಳು ಭಾಗವಹಿಸಿದ್ದರು. ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಮೂಸಾ ಹಾಜಿ ಬಸರ ಸ್ವಾಗತಿಸಿದರು.