ಬೆಂಗಳೂರು: ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತನ ಹತ್ಯೆಯಾಗಿದೆ. ಹರ್ಷನ ಮೃತದೇಹ ಮೆರವಣಿಗೆ ವೇಳೆ ಕಲ್ಲು ತೂರಾಟ, ಗಲಭೆ ನಡೆದಿದೆ. ಇದಕ್ಕೆಲ್ಲಾ ಈಶ್ವರಪ್ಪನವರೇ ಕಾರಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಅದನ್ನು ಉಲ್ಲಂಘಿಸಲಾಗಿದೆ. ಒಬ್ಬ ಸಚಿವರೇ 144 ಸೆಕ್ಷನ್ ಉಲ್ಲಂಘಿಸಿದ್ದಾರೆ. ಅವರ ಮೇಲೆ ಯಾಕೆ ಕೇಸ್ ಹಾಕಿಲ್ಲ. ಅವರೇ ನಿಂತುಕೊಂಡು ಮೆರವಣಿಗೆ ಮಾಡಿಸಿದ್ದಾರೆ. ಮೆರವಣಿಗೆಯಲ್ಲಿ ಕಲ್ಲು ಹೊಡೆಸಿದ್ದಾರೆ. ಇಷ್ಟೆಲ್ಲಾ ಆದರೂ ಯಾಕೆ ಅವರ ಮೇಲೆ ಕೇಸ್ ಹಾಕಿಲ್ಲ.
ಇದರ ಬಗ್ಗೆ ಡಿಜಿ, ಎಸ್ಪಿ ಹೇಳಬೇಕು. ಗೃಹ ಸಚಿವರು ಏನು ಹೇಳಲ್ಲ ಬಿಡಿ. ಖಾಕಿ ಬಟ್ಟೆ ಹಾಕಿರುವವರು ಇದಕ್ಕೆ ಉತ್ತರಿಸಬೇಕು. ಇಲ್ಲ ಖಾಕಿ ಕಳಚಿ ಕೇಸರಿ ಹಾಕಿಬಿಡಿ ಎಂದು ಸಚಿವ ಹಾಗೂ ಪೋಲಿಸರ ವಿರುದ್ದ ಡಿಕೆಶಿ ಗುಡುಗಿದ್ದಾರೆ







