janadhvani

Kannada Online News Paper

ದಮ್ಮಾಮ್ ನಲ್ಲಿ ಮುಈನುಸುನ್ನಾ ಮುಸ್ಫಿರಾ ಕಾನ್ಫರೆನ್ಸ್

ಉತ್ತರ ಕರ್ನಾಟಕದ ವಿದ್ಯಾಸಂಸ್ಥೆ ಯಾದ ಮುಈನುಸುನ್ನಾ ಅಕಾಡೆಮಿ ಹಾವೇರಿ ,ದಮ್ಮಾಮ್ ಸಮಿತಿ ವತಿಯಿಂದ ಮುಸ್ಫಿರಾ ಅನಿವಾಸಿ ಕುಟುಂಬಗಳ ಸ್ನೇಹ ಸಂಗಮ ನಡೆಯಲಿದೆ.

ದಿನಾಂಕ 24-2-2022ರಂದು ಗುರುವಾರ ಅಸ್ತಮಿಸಿದ ಶುಕ್ರವಾರ ರಾತ್ರಿ ,ದಮ್ಮಾಮ್ ನ ಅಲ್ ಹಿಲಾಲ್ ರಿಸೋರ್ಟ್, ನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ….ಮುಸ್ಫಿರಾ ಕಾನ್ಫರೆನ್ಸ್ ಸ್ವಾಗತ ಸಮಿತಿ ಇದರ ಅಧ್ಯಕ್ಷ ರಾದ ಸಯ್ಯಿದ್ ಬಾವ ಬಣಕಲ್ ಬಜ್ಪೆ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಮುಈನುಸುನ್ನಾ ಓವರ್ಸಿಸ್ ಕೌನ್ಸಿಲ್ ಇದರ ಅಧ್ಯಕ್ಷ ರು ,DKSC ಇದರ ಕಾರ್ಯಾಧ್ಯಕ್ಷ ರಾದ ಸಯ್ಯಿದ್ ಮುಹಮ್ಮದ್ ತಂಙಳ್ ಉಚ್ಚಿಲ ದುಆ ನಡೆಸಲಿದ್ದಾರೆ..KCF ಇದರ ಸೌದಿ ಅರೇಬಿಯ ರಾಷ್ಟ್ರೀಯ ಅಧ್ಯಕ್ಷ ರಾದ DP ಯೂಸುಫ್ ಸಖಾಫಿ ಬೈತಾರ್ ಉದ್ಘಾಟನೆ ಮಾಡಲಿದ್ದಾರೆ.

SSFರಾಜ್ಯ ಕಾರ್ಯದರ್ಶಿ ಹಾಗು ಮುಈನುಸುನ್ನಾ ಅಕಾಡೆಮಿ ಇದರ ಪ್ರಧಾನ ಕಾರ್ಯದರ್ಶಿ ಆದ ಕೆ.ಎಂ ಮುಸ್ತಫಾ ನ‌ಈಮಿ ಅಲ್ ಹಿಮಮಿ ಹಾವೇರಿ ಇವರು ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.

ಸ್ರೀಯರಿಗೆ ವಿಶೇಷ ತರಬೇತಿ ಹಾಗು ಮಕ್ಕಳಿಗೆ ಸ್ಪರ್ಧೆ ಗಳನ್ನು ಏರ್ಪಡಿಸಲಾಗಿದೆ ಎಂದು ಸ್ವಾಗತ ಸಮಿತಿ ಕನ್ವಿನರ್ ಫೈಝಲ್ ದಮ್ಮಾಮ್ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.