ಮೂಡಡ್ಕ: ಶೈಖುನಾ ಮಾಡನ್ನೂರು ಸ್ವಲಾಹುದ್ದೀನ್ ಸಖಾಫಿ ಉಸ್ತಾದರ ಶಿಷ್ಯಂದಿರ ಸಂಗಮವು ಇತ್ತೀಚೆಗೆ ಮೂಡಡ್ಕ ಅಲ್ ಮದೀನತುಲ್ ಮುನವ್ವರ ಸಂಸ್ಥೆಯಲ್ಲಿ ಮೂಡಡ್ಕ ದರ್ಗಾ ಝೀಯಾರತ್ ನೊಂದಿಗೆ ಶೈಖುನಾ ಸ್ವಾಲಾಹುದ್ದೀನ್ ಉಸ್ತಾದರ ನೇತೃತ್ವದಲ್ಲಿ ಸಂಘಟನೆಯ ಅಧ್ಯಕ್ಷರಾದ ಅಬ್ದುಲ್ ಮಜೀದ್ ನಈಮಿ ಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಬೆಯಲ್ಲಿ ಮುಂಬರುವ ಮೂರು ವರ್ಷಗಳ ಯೋಜನೆಗಳಿಗೆ ಚಾಲನೆ ನೀಡಲಾಯಿತು. ನಂತರ ಹೊಸ ಸಮಿತಿ ಪ್ರಕ್ರಿಯೆ ನಡೆಯಿತು.
ನೂತನ ಸಮಿತಿ ಅಧ್ಯಕ್ಷರಾಗಿ ಹುಬ್ಬುಲ್ ಹಬೀಬ್ ಹಾಫಿಲ್ ಇಲ್ಯಾಸ್ ಸಖಾಫಿ ಮಾಡನ್ನೂರ್ , ಪ್ರದಾನ ಕಾರ್ಯದರ್ಶಿ ಯಾಗಿ ಹಾಫಿಲ್ ಮುಈನುದ್ದೀನ್ ರಝ್ವಿ ಅಲ್ ಅಮ್ಜದಿ ಉಳ್ಳಾಲ, ಕೋಶಾಧಿಕಾರಿಯಾಗಿ ಅಬ್ದುಲ್ ರವೂಫ್ ಅಹ್ಸನಿ ಕಾಸರಗೋಡು ಇವರನ್ನು ಆಯ್ಕೆ ಮಾಡಲಾಯಿತು.
ನೂತನ ಸಮಿತಿಯ ನಿರ್ದೇಶಕ ಸಮಿತಿಯಾಗಿ ಅಬ್ದುಲ್ ಮಜೀದ್ ನಈಮಿ ಆಮ್ಚಿನಡ್ಕ, ನವಾಝ್ ಸಖಾಫಿ ಅಲ್ ಅಝ್ಹರಿ ಕಾಜೂರು, ಅಬ್ದುಲ್ ಅಝೀಝ್ ನಈಮಿ ಕಾಸರಗೋಡು ಹಾಗೂ ಉಪಾಧ್ಯಕ್ಷರಾಗಿ ಅಬ್ದುಲ್ ಅಝೀಝ್ ಮುಸ್ಲಿಯಾರ್ ಕುಯಿತಲ್, ನಿಜಾಮ್ ಸುಳ್ಯ, ನೌಫಲ್ ಸಖಾಫಿ ಕಾಜೂರು, ಜುನೈದ್ ಸುಳ್ಯ ಮತ್ತು ಕಾರ್ಯದರ್ಶಿಗಳಾಗಿ ಮುನೀರ್ ಮದನಿ ನೆಲ್ಲಿಪಲಿಕೆ, ತವ್ ಫೀಕ್ ಸಖಾಫಿ ಕಾರ್ಕಳ, ಖುಬೈಬ್ ಜೌಹರಿ ಸೂರ್ಯ, ಝನೈನ್ ಕೊಟಿಕುಲಮ್ ಹಾಗೂ 17 ಸದಸ್ಯರನ್ನೊಳಗೊಂಡ ನೂತನ ಸಮಿತಿ ರಚಿಸಲಾಯಿತು.
ಕಾರ್ಯಕ್ರಮವನ್ನು ಇಲ್ಯಾಸ್ ಸಖಾಫಿ ಉದ್ಘಾಟಿಸಿದರು . ಹಾಫಿಲ್ ಮುಈನ್ ರಝಾ ಅಮ್ಜದಿ ಸ್ವಾಗತಿಸಿ ಜುನೈದ್ ಸುಳ್ಯ ವಂದಿಸಿದರು. ಪೂರ್ವ ವಿದ್ಯಾರ್ಥಿ ಸಂಘದ ಎಲ್ಲಾ ಕಾರ್ಯಕರ್ತರೂ ಸಭೆಯಲ್ಲಿ ಭಾಗವಹಿಸಿದ್ದರು.
















ಇನ್ನಷ್ಟು ಸುದ್ದಿಗಳು
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ