janadhvani

Kannada Online News Paper

ಆಸಿಫ್ ಆಪತ್ಕಾಂಧವರ ಮೇಲೆ ಹಲ್ಲೆಗೆ ಯತ್ನಿಸಿ, ಅಶ್ಲೀಲ ರಂಪಾಟ ನಡೆಸಿದ ಮಂಗಳಮುಖಿಯರ ಬಂಧನ

ಮಂಗಳೂರು: ಸುರತ್ಕಲ್ ಟೋಲ್ ಗೇಟ್ ವಿರೋಧಿಸಿ ಹೋರಾಟ ನಡೆಸುತ್ತಿರುವ ಆಸಿಫ್ ಆಪತ್ಕಾಂಧವ ಮೇಲೆ ಹಲ್ಲೆಗೆ ಯತ್ನಿಸಿದ ಮಂಗಳಮುಖಿಯರನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.

ಆಸಿಫ್ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದು ಮಂಗಳವಾರ ರಾತ್ರಿ ಏಳೆಂಟು ಮಂದಿಯಿದ್ದ ಮಂಗಳಮುಖಿಯರು ಹೋರಾಟದ ವೇದಿಕೆಗೆ ನುಗ್ಗಿ ಹಲ್ಲೆಗೆ ಯತ್ನಿಸಿದ್ದರು. ಅಲ್ಲದೆ, ತಮ್ಮ ಬಟ್ಟೆ ಬಿಚ್ಚಿ ಅಂಗಾಂಗ ಪ್ರದರ್ಶನ ಮಾಡಿದ್ದರು. ಪೊಲೀಸರ ಎದುರಲ್ಲೇ ಈ ಘಟನೆ ನಡೆದಿತ್ತು. ಇದನ್ನು ಆಸಿಫ್ ಫೇಸ್ಟುಕ್ ಲೈವ್ ಮಾಡಿ ತೋರಿಸಿದ್ದರು. ವೀಡಿಯೋ

ಘಟನೆ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು ಆರು ಮಂದಿಯನ್ನು ಬಂಧಿಸಲಾಗಿದೆ. ವಾಸವಿ ಗೌಡ, ಲಿಪಿಕಾ, ಆದ್ಯ ಹಿಮಾ, ಮಾಯಾ ಮತ್ತು ಮೈತ್ರಿ ಬಂಧಿತರಾಗಿದ್ದು ಮಂಡ್ಯ ಮೈಸೂರು ನಿವಾಸಿಗಳಾಗಿದ್ದಾರೆ. ಅವಾಚ್ಯ ನಿಂದನೆ, ಅಸಭ್ಯ ವರ್ತನೆ ಮತ್ತು ಹಲ್ಲೆ ಯತ್ನದ ಬಗ್ಗೆ ಪ್ರಕರಣ ದಾಖಲಾಗಿದೆ.