ಕಾರ್ಕಳ, ಫೆ.8:ಸುಲ್ತಾನುಲ್ ಹಿಂದ್ ಅಜ್ಮೀರ್ ಖ್ವಾಜಾ ಅವರ ಉರೂಸ್ ಪ್ರಯುಕ್ತ ಸುನ್ನೀ ಯುವಜನ ಸಂಘ (SYS) ಕಾರ್ಕಳ ಸೆಂಟರ್ ಸಮಿತಿಯ ವತಿಯಿಂದ ಅನ್ನದಾನ ನಡೆಸಲಾಯಿತು.
ಇಂದು ಬೆಳಿಗ್ಗೆ ಕಾರ್ಕಳದ ಸರಕಾರೀ ಆಸ್ಪತ್ರೆಯ ವೈದ್ಯಾಧಿಕಾರಿ ಡಾ|ಉದಯ ಕುಮಾರ್’ರವರನ್ನು ಸಂಪರ್ಕಿಸಿ ಅಲ್ಲಿನ ರೋಗಿಗಳಿಗೆ ಆಹಾರ ವಿತರಣೆ ಮಾಡಲಾಯಿತು.
SYS ಕಾರ್ಕಳ ಸೆಂಟರ್ ಸಮಿತಿ ಅಧ್ಯಕ್ಷರಾದ ಕಾಬೆಟ್ಟು ಹೈದರ್, ಉಪಾಧ್ಯಕ್ಷರಾದ MH.ಸುಲೈಮಾನ್ ಸ’ಅದಿ, ಪ್ರ.ಕಾರ್ಯದರ್ಶಿ ಉಮರ್ ಸ’ಅದಿ, ನಿಕಟಪೂರ್ವ ಪ್ರ.ಕಾರ್ಯದರ್ಶಿ ಮುಸ್ತಫಾ,ಬಂಗ್ಲೆಗುಡ್ಡೆ, ಜೊ.ಕಾರ್ಯದರ್ಶಿ ಅಬ್ದುರ್ರಹ್ಮಾನ್ ಮುಸ್ಲಿಯಾರ್, ಸಮಿತಿ ಸದಸ್ಯ ದಾವೂದ್ ಲತ್ವೀಫಿ,ಬಜಗೋಳಿ, SJU ಕಾರ್ಕಳ ಝೋನಲ್ ಪ್ರ.ಕಾರ್ಯದರ್ಶಿ ಶರೀಫ್ ಮದನಿ ಬೊಳ್ಳೊಟ್ಟು, ಮತ್ತು SSF ಕಾರ್ಕಳ ಡಿವಿಷನ್ ಮಾಜೀ ಕಾರ್ಯದರ್ಶಿ KCF ಸ್ವಾದಿಖ್ ಬಜಗೋಳಿ ಉಪಸ್ಥಿತರಿದ್ದರು.








