ಮಂಗಳೂರು : ಮಹತ್ವ ಪೂರ್ಣ ಜನವರಿ 26 ನೇ ದಿನದ ರಾಷ್ಟ್ರೀಯ ಹಬ್ಬವಾದ ಗಣ ರಾಜ್ಯೋತ್ಸವ ಸಮಾರಂಭ ದಲ್ಲಿ, ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧ ಚಿತ್ರದ ಟ್ಯಾ ಬ್ಲೋ ವಾಹನ ಸಂಚಲನ ಪ್ರದರ್ಶನವನ್ನು,ಪೆರೇಡ್ ನಿಂದ ಅನರ್ಹ ಗೊಳಿಸಿದ ಕೇಂದ್ರ ಸರಕಾರದ ನಡೆ ತೀವ್ರ ವಿಷಾದನೀಯ.
ನಾರಾಯಣ ಗುರುಗಳು ದಕ್ಷಿಣ ಭಾರತದಲ್ಲಿ ಹಿಂದುಳಿದ ಜನತೆಗೆ ಧಾರ್ಮಿಕ,ಆದ್ಯಾತ್ಮಿಕ ಮತ್ತು ಆರಾಧನಾ ಕೇಂದ್ರಗಳ ಪ್ರವೇಶ ಹಕ್ಕುಗಳನ್ನು ಸ್ಥಾಪಿಸಿದ ಓರ್ವ ಸಮುದಾಯ ಮಹಾತ್ಮ ಮೇರು ವ್ಯಕ್ತಿ ಯಾಗಿದ್ದಾರೆ. ಅವರ ಒಂದೇ ಮತ,ಕುಲ, ದೇವ ಪ್ರತಿಪಾದನೆ ಜಾಗತಿಕ ಮನ್ನಣೆ ಹೊಂದಿದ ಒಂದು ಪ್ರಭಲ ಸಿದ್ಧಾಂತವಾಗಿದೆ. ಆದುದರಿಂದ ನಾರಾಯಣ ಗುರುಗಳ ಸ್ತಬ್ಧ ಚಿತ್ರ ಗಣ ರಾಜ್ಯೋತ್ಸವ ಸಮಾರಂಭ ದಲ್ಲಿ ಸರ್ವ ರೀತಿಯಲ್ಲೂ ಕೂಡಾ ಅರ್ಹತೆ ಪಡೆಯಬೇಕಿತ್ತು.
ಅವರು ಭಾರತದ ಆದ್ಯಾತ್ಮಿ ಕ ಚರಿತ್ರೆಯ ಆಸ್ತಿ ಆಗಿದ್ದಾರೆ. ಅವರ ಪ್ರತಿಪಾದನೆಯ ಮೌಲ್ಯಗಳು ಎಂದೆಂದಿಗೂ ಶಾಶ್ವತ. ಅವರ ಸ್ತಬ್ಧ ಚಿತ್ರ ಪ್ರದರ್ಶನ ಅರ್ಹತೆ ಪಡೆಯಲೇ ಬೇಕಾಗಿದೆ. ಈ ಹಿಂದೆ ಚಾರಿತ್ರಿಕ ಸ್ವಾತಂತ್ರ ಹೋರಾಟಗಾರ ಹಜ್ರತ್ ಟಿಪ್ಪು ಸುಲ್ತಾನರ ಸ್ತಬ್ಧ ಚಿತ್ರ ಪ್ರದರ್ಶನ ಚಾಲನೆಯಲ್ಲಿ ಇತ್ತು, ಕ್ರಮೇಣ ಅಂತಹ ಪ್ರದರ್ಶನಗಳನ್ನೂ ಕೇಂದ್ರ ಸರಕಾರ ಇದೇ ರೀತಿ ಕೈಬಿಟ್ಟಿತ್ತು. ಭಾರತದ ಮಹತ್ವ ಪೂರ್ಣ ಚಾರಿತ್ರಿಕ ಮತ್ತು ಆದ್ಯಾತ್ಮೀಕ ವ್ಯಕ್ತಿಗಳ ಕಡೆಗಣನೆ ಈ ದೇಶದ ಜಾತ್ಯಾತೀತ ವೈಭವ ತೆ ಯನ್ನು ನಾಶ ಪಡಿಸುವ ಒಂದು ಷಡ್ಯಂತ್ರ ವಾಗಿದೆ. ಅದರ ಭಾಗವೇ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧ ಚಿತ್ರ ಪ್ರದರ್ಶನ ವನ್ನು ಪೆರೇಡ್ ನಿಂದ ಅನರ್ಹತೆ ಗೊಳಿಸಿ ಹೊರ ಹಾಕಲಾಗಿದೆ . ಕೇಂದ್ರ ಸರಕಾರದ ಈ ನಡೆ ಜಾತ್ಯಾತೀತ ಮೌಲ್ಯಗಳ ಅವಹೇಳನ ವಾಗಿದೆ, ಮತ್ತು ಈ ವರ್ತನೆ ಖಂಡನೀಯ.
ಕೆ.ಅಶ್ರಫ್
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.
















ಇನ್ನಷ್ಟು ಸುದ್ದಿಗಳು
ಟೋಲ್ ಪ್ಲಾಜಾ ಸಮೀಪದ ನಿವಾಸಿಗಳಿಗೆ ಗುಡ್ ನ್ಯೂಸ್: 20 ಕಿ.ಮೀ ವ್ಯಾಪ್ತಿಯವರಿಗೆ ಡಿಜಿಟಲ್ ಪಾಸ್ ಸೌಲಭ್ಯ!
ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ಗೆ ಭರ್ಜರಿ ಗೆಲುವು- ಆಡಳಿತದ ಹಾದಿಗೆ ಸಿಕ್ಕ ಮುದ್ರೆ ಎಂದ ಸಿಎಂ ಡಿ.ಕೆ. ಶಿವಕುಮಾರ್
ಅಮೆರಿಕ-ಇರಾನ್ ಒಪ್ಪಂದ: ‘ಮಿಸ್ಟರ್ ಸೆಕ್ಯೂರಿಟಿ’ಗೆ ಭಾರಿ ಹಿನ್ನಡೆ- ನೆತನ್ಯಾಹು ರಾಜಕೀಯ ವರ್ಚಸ್ಸಿಗೆ ಧಕ್ಕೆ
‘ಪಶ್ಚಿಮ ಏಷ್ಯಾದಲ್ಲಿ ಶಾಂತಿಯ ಉದಯ’ ;ಅಮೆರಿಕ-ಇರಾನ್ ಕದನ ವಿರಾಮ ತಿಳುವಳಿಕಾ ಪತ್ರಕ್ಕೆ ಸಹಿ- ಹಾರ್ಮುಜ್ ಜಲಸಂಧಿ ಶೀಘ್ರದಲ್ಲೇ ಮುಕ್ತ
‘ಗಲ್ಫ್ ಪ್ರದೇಶದ ಸಂಘರ್ಷಗಳನ್ನು ಭಾರತಕ್ಕೆ ನಿರ್ಲಕ್ಷಿಸಲು ಸಾಧ್ಯವಿಲ್ಲ’ – ಭಾರತೀಯ ರಾಯಭಾರಿ ಡಾ. ಸುಹೈಲ್ ಅಜಾಝ್ ಖಾನ್
ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ: ‘E-GEN ಸ್ಕಾಲರ್ಶಿಪ್’ ಗೆ ಅಧಿಕೃತ ಚಾಲನೆ
SIR ಪ್ರಕ್ರಿಯೆ: ಮತದಾರರ ಹಕ್ಕು ರಕ್ಷಣೆಗೆ ಸಿಪಿಐ(ಎಂ) ಆಗ್ರಹ- ಮುಖ್ಯಮಂತ್ರಿಗಳಿಗೆ ಮನವಿ
ಕೆಸಿಎಫ್ ಯುಎಇ: MRF ಯೋಜನೆಗೆ ಅಧಿಕೃತ ಚಾಲನೆ- 3,000ಕ್ಕೂ ಹೆಚ್ಚು ಸದಸ್ಯರ ಸೇರ್ಪಡೆ ಗುರಿ
ಕಣ್ಣೂರು: ಕೊನೆಗೂ ನಿಟ್ಟುಸಿರು ಬಿಟ್ಟ ಪ್ರಯಾಣಿಕರು; ಆತಂಕ ಸೃಷ್ಟಿಸಿದ್ದ ಜಿದ್ದಾ ವಿಮಾನ ಸುರಕ್ಷಿತ ಲ್ಯಾಂಡಿಂಗ್
ಕದನ ವಿರಾಮವಲ್ಲ, ಅಮೆರಿಕ ಮತ್ತು ಇಸ್ರೇಲ್ ಸೋಲೊಪ್ಪಿಕೊಂಡ ಕ್ಷಣ: ಯುದ್ಧ ಪ್ರೇಮಿಗಳು ಹಿಂದೆ ಸರಿಯಲು ನಿಜವಾದ ಕಾರಣವೇನು?