janadhvani

Kannada Online News Paper

ಜ.13: ರಾಜ್ಯ ಎಸ್ಸೆಸ್ಸೆಫ್ ದಅವಾ ವಿಭಾಗದಿಂದ “ಅಲ್ ವಿಫಾಕ್-22” ರಾಜ್ಯಮಟ್ಟದ ದಅವಾ ಮೀಟ್

ಮಂಗಳೂರು: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ SSF ರಾಜ್ಯ ದಅವಾ ವಿಭಾಗದ ವತಿಯಿಂದ ಅಲ್ ವಿಫಾಕ್ -22 ಕಾರ್ಯಕ್ರಮವು ಶಿವಮೊಗ್ಗ ಮರ್ಕಝ್ ಸ’ಅದ ದಲ್ಲಿ ಜನವರಿ 13 ಗುರುವಾರ ಮಧ್ಯಾಹ್ನ 1:00 ಗಂಟೆಗೆ ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ ಲತೀಫ್ ಸಅದಿ ರವರ ನೇತೃತ್ವದಲ್ಲಿ ನಡೆಯಲಿದೆ.

ರಾಜ್ಯದ ಎಲ್ಲ ಜಿಲ್ಲೆ ಗಳ ಹಾಗೂ ಡಿವಿಷನ್ಗಳ ದಅವಾ ಕಾರ್ಯದರ್ಶಿಗಳು ಮತ್ತು ಕನ್ವೀನರ್ ಗಳು ಭಾಗವಹಿಸುವ ಈ ಸಂಗಮದಲ್ಲಿ ಎಸ್ ವೈ ಎಸ್ ನಾಯಕ ಸಯ್ಯಿದ್ ಯೂಸುಫ್ ಅಲ್ ಬುಖಾರಿ ಮಾಲಿಕೊಪ್ಪ ದುಆ ನೆರವೇರಿಸಲಿದ್ದಾರೆ ಎಸ್ ಎಸ್ ಎಫ್ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ಉದ್ಘಾಟಿಸಲಿದ್ದಾರೆ.

ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಶಿವಮೊಗ್ಗ ಜಿಲ್ಲಾಧ್ಯಕ್ಷ ಜಬ್ಬಾರ್ ಸಅದಿ ರಾಜ್ಯ ವಿಸ್ಡಮ್ ಕಾರ್ಯದರ್ಶಿ ಎನ್ ಸಿ ರಹೀಮ್ ಕಾರ್ಕಳ ಮುಖ್ಯ ಅತಿಥಿ ಗಳಾಗಿ ಆಗಮಿಸಲಿಕ್ಕಿದ್ದಾರೆ.
ರಾಜ್ಯಾಧ್ಯಕ್ಷರಾದ ಅಬ್ದುಲ್ ಲತೀಫ್ ಸಅದಿ ಶಿವಮೊಗ್ಗ ಮತ್ತು ರಾಜ್ಯ ಕೋಶಾಧಿಕಾರಿ ಸುಫ್ಯಾನ್ ಸಖಾಫಿ ಕೊಪ್ಪಳ ಹಾಗೂ ರಾಜ್ಯ ದಅವಾ ಸಿಂಡಿಕೇಟ್ ಸದಸ್ಯರಾದ ಹಬೀಬ್ ನೂರಾನಿ ಅಸ್ಸಖಾಫಿ ತರಗತಿ ಮಂಡಿಸಲಿದ್ದಾರೆ.
ನಂತರ ಚರ್ಚಾಗೋಷ್ಠಿ ಕೂಡ ನಡೆಯಲಿದೆ ಎಂದು ರಾಜ್ಯ ದಅ ವಾ ಕಾರ್ಯದರ್ಶಿ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಳ್ಳಾಲ ಮತ್ತು ರಾಜ್ಯ ದಅವಾ ಕನ್ವೀನರ್ ಯಾಸೀನ್ ಸಖಾಫಿ ಹಾವೇರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ