ದುಬೈ, ನ. 14: ಇರಾನ್ ದೇಶದ ದಕ್ಷಿಣ ಭಾಗದಲ್ಲಿ ಭಾನುವಾರ ಸಂಜೆ ರಿಕ್ಟರ್ ಮಾಪಕದಲ್ಲಿ 6.5 ತೀವ್ರತೆಯ ಭೂಕಂಪ ಸಂಭವಿಸಿದೆ. ಇರಾನ್ನ ಹಾರ್ಮೊಜಗನ್ ಪ್ರಾಂತ್ಯದ ಬಂದರ್ ಅಬ್ಬಾಸ್ ನಗರದಿಂದ 47 ಕಿಮೀ ದೂರದಲ್ಲಿ ಹಾಗೂ 10 ಕಿಮೀ ಆಳದಲ್ಲಿ ಈ ಭೂಕಂಪವಾಗಿದೆ.
ಮೊದಲಿಗೆ 6.1 ತೀವ್ರತೆ ಎಂದು ದಾಖಲಾಗಿತ್ತು. ಬಳಿಕ 6.5 ತೀವ್ರತೆಯ ಭೂಕಂಪ ಎಂಬ ವರದಿಗಳು ಬಂದಿವೆ. ಇಷ್ಟು ತೀವ್ರತೆಯ ಭೂಕಂಪವನ್ನು ಪ್ರಬಲ ಭೂಕಂಪ ಎಂದೇ ಪರಿಗಣಿಸಲಾಗುತ್ತದೆ.
ಇರಾನ್ನಲ್ಲಿ ಭೂಕಂಪ ಸಂಭವಿಸಿದರೂ ಸುತ್ತಲಿನ ಅರಬ್ ದೇಶಗಳಲ್ಲಿ ಭೂಮಿ ನಡುಗಿದೆ. ದುಬೈನ ವಿವಿಧ ಪ್ರದೇಶಗಳಾದ ಜುಮೇರಾ ಲೇಕ್ ಟವರ್ಸ್, ನಹದಾ, ದೇರಾ,ಅಲ್ ಬರ್ಶಾ, ದುಬೈ ಇನ್ವೆಸ್ಟ್ಮೆಂಟ್ ಪಾರ್ಕ್, ಡಿಸ್ಕವರಿ ಗಾರ್ಡನ್ಸ್ ಮೊದಲಾದೆಡೆ ಕೆಲ ನಿಮಿಷಗಳವರೆಗೆ ಭೂಮಿ ಕಂಪಸಿದ ಅನುಭವ ಆಯಿತು ಎಂದು ದುಬೈನ ನಿವಾಸಿಗಳು ತಿಳಿಸಿದ್ದಾರೆ.
ಯುಎಇಯ ಇತರ ಪ್ರಾಂತ್ಯಗಳಾದ ಶಾರ್ಜಾ, ಅಬುಧಾಬಿಯಲ್ಲೂ ಭೂಮಿ ಕಂಪಿಸಿರುವುದು ತಿಳಿದುಬಂದಿದೆ.
ಭೂಕಂಪವಾದರೂ ಟಿ20 ವಿಶ್ವಕಪ್ನ ಫೈನಲ್ ಪಂದ್ಯ ನಿಗದಿಯಂತೆ ನಡೆದಿದೆ. ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯಿಂದ ಯಾವ ಸ್ಪಷ್ಟನೆಯ ಹೇಳಿಕೆಯೂ ಬರಲಿಲ್ಲ.
ಇರಾನ್ನಲ್ಲಿ ಸಂಭವಿಸಿದ ಈ ಭೂಕಂಪದಿಂದ ಪರಿಣಾಮ ಉಂಟಾಗಿರುವುದು ಯುಎಇಯಲ್ಲಿ ಅಷ್ಟೇ ಅಲ್ಲ ಪಾಕಿಸ್ತಾನ್ ದೇಶದವರೆಗೂ ಭೂಮಿಯಲ್ಲಿ ಕಂಪನದ ಅನುಭವಗಳು ಆಗಿರುವುದು ವರದಿಯಾಗಿದೆ. ಬಹ್ರೇನ್, ಸೌದಿ ಅರೇಬಿಯಾ, ಒಮಾನ್, ಕತಾರ್, ಅಫ್ಘಾನಿಸ್ತಾನ್ ಮತ್ತು ಪಾಕಿಸ್ತಾನದಲ್ಲಿ ಕಂಪನಗಳಾಗಿವೆ.
ಇರಾನ್ನ ಬಂದರ್ ಅಬ್ಬಾಸ್ ನಗರದಲ್ಲಿ ಭೂಕಂಪದ ಕಾರಣದಿಂದ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆಂದು ಇರಾನ್ನ ಸ್ಥಳೀಯ ಟಿವಿಗಳ ವರದಿಗಳು ಹೇಳುತ್ತಿವೆ.
















ಇನ್ನಷ್ಟು ಸುದ್ದಿಗಳು
ಹಿರಿಯ ಧಾರ್ಮಿಕ ವಿದ್ವಾಂಸರಾದ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ ವಫಾತ್
ಅಂಜುಮಾನ್ ಸಿರಾಜುಲ್ ಇಸ್ಲಾಂ ಮದ್ರಸ ಮುಕ್ಕ- SBS ನೂತನ ಸಮಿತಿ ಅಸ್ತಿತ್ವಕ್ಕೆ
ರೆಸಿಡೆನ್ಸಿ ನಿಯಮ ತಿದ್ದುಪಡಿ- ವಿದೇಶಿಯರಿಗೆ ಇನ್ನು ಮುಂದೆ ಸ್ಪಾನ್ಸರ್ ರಹಿತವಾಗಿ ವೀಸಾ ಲಭ್ಯ
ಖತಾರ್ ಗ್ಯಾಸ್ ಪ್ಲಾಂಟ್ ಸ್ಫೋಟ: ಭಾರತೀಯರು ಸೇರಿದಂತೆ 13 ಮಂದಿ ಮೃತ್ಯು
ಸಮಸ್ತ ಶತಮಾನೋತ್ಸವ: ಕರ್ನಾಟಕ ರಾಜ್ಯ ಸ್ವಾಗತ ಸಮಿತಿ ಅಸ್ತಿತ್ವಕ್ಕೆ- ರಾಜ್ಯಾದ್ಯಂತ ಭವ್ಯ ಕಾರ್ಯಕ್ರಮಗಳ ರೂಪುರೇಷೆ
ಬೆಳಕು ಮತ್ತು ವಿಜ್ಞಾನದ ಅದ್ಭುತ ಸಂಗಮ: ಡಾ. ಮುಹಮ್ಮದ್ ರಾಫಿ ಚೆನ್ನಾರ್
ಕುಂಬ್ರದ ಇಂಡಿಯನ್ ಇವೆಂಟ್ಸ್ ಸಂಸ್ಥೆಗೆ ಸಿರಾಜುದ್ದೀನ್ ಖಾಸಿಮಿ ಉಸ್ತಾದ್ ಭೇಟಿ
ಖತಾರ್ನಲ್ಲಿ ಉದ್ಯೋಗಾವಕಾಶ: ಅಕೌಂಟಿಂಗ್, ಐಟಿ, ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಭಾರಿ ಬೇಡಿಕೆ
‘ಮೆಟ್ರಾಶ್’ ವರ್ಕ್ ವೀಸಾಕ್ಕೆ ಅರ್ಜಿ ಸಲ್ಲಿಸಲು ಸುಲಭ ವಿಧಾನ- ಕತಾರ್ ಆಂತರಿಕ ಸಚಿವಾಲಯ
DKSC ಮಕ್ಕತುಲ್ ಮುಕರ್ರಮ ವಲಯ ಸಮಿತಿ: ನೂತನ ಅಧ್ಯಕ್ಷರಾಗಿ ಮುಹಮ್ಮದ್ ಶರೀಫ್ ಮರವೂರು ಆಯ್ಕೆ