janadhvani

Kannada Online News Paper

ಶಿವಮೊಗ್ಗ ಜಿಲ್ಲಾ SჄS: ಯೂಸುಫುಲ್ ಬುಖಾರಿ, ಮನ್ಸೂರ್ ಅಲಿ, ಖಲಂದರ್ ಸಾಗರ್ ಸಾರಥಿಗಳು

‍ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘದ (ಎಸ್.ವೈ.ಎಸ್.) ಶಿವಮೊಗ್ಗ ಜಿಲ್ಲಾ ಘಟಕದ ಮಹಾ ಸಭೆಯು ಇತ್ತೀಚೆಗೆ ಶಿವಮೊಗ್ಗ ವಾದಿ ಹುದಾ, ಮರ್ಕಝ್ ಸ‌ಆದ ಸಭಾಂಗಣದಲ್ಲಿ ನಡೆಯಿತು.
ಕರ್ನಾಟಕ ರಾಜ್ಯ ಎಸ್.ವೈ.ಎಸ್. ಪ್ರಧಾನ ಕಾರ್ಯದರ್ಶಿ ಡಾ. ಎಮ್ಮೆಸ್ಸೆಂ. ಝೈನೀ ಕಾಮಿಲ್ ಪುನಾರಚನೆಗೆ ನೇತೃತ್ವ ನೀಡಿದರು.
ಮುಂದಿನ ಎರಡು ವರ್ಷಗಳ ಅವಧಿಗೆ ಕೆಳಗಿನ ಪದಾಧಿಕಾರಿಗಳನ್ನು ಆರಿಸಲಾಯಿತು.

ಸಯ್ಯಿದ್ ಯೂಸುಫುಲ್ ಬುಖಾರಿ ತಂಙಳ್ ಮಾಳಿಕೊಪ್ಪ (ಅಧ್ಯಕ್ಷರು)
ಶಾಹುಲ್ ಹಮೀದ್ ಮುಸ್ಲಿಯಾರ್ ನಗರ (ಉಪಾಧ್ಯಕ್ಷರು) ಮನ್ಸೂರು ಅಲಿ ಕುವೈತ್, ಕೋಟಗದ್ದೆ (ಪ್ರಧಾನ ಕಾರ್ಯದರ್ಶಿ)
ಖಲಂದರ್ ಸಾಗರ (ಕೋಶಾಧಿಕಾರಿ)

ಕಾರ್ಯದರ್ಶಿಗಳಾಗಿ
ರಫೀಖ್ ಮದನಿ ರಿಪ್ಪನ್‌ಪೇಟೆ (ದ‌ಅ್‌ವಾ)
ಪುತ್ತಬ್ಬ ಬೆಜ್ಜವಳ್ಳಿ (ಸಂಘಟನೆ)
ಮುಹಮ್ಮದ್ ಮೀರಾನ್ ಟಿಪ್ಪುನಗರ (ಇಸಾಬಾ)
ಹಂಝಕ್ಕೋಯ ಬಹರೈನ್ ಭದ್ರಾವತಿ (ಸೋಷಿಯಲ್) ಸೈದಲವಿ ಸಖಾಫಿ ಕೋಣಂದೂರು (ಕಲ್ಚರಲ್) ಮುನೀರ್ ಸಖಾಫಿ ಜಯನಗರ (ಮೀಡಿಯಾ)
ಇವರನ್ನು ಆರಿಸಲಾಯಿತು.

ಕಾರ್ಯಕಾರಿ ಸದಸ್ಯರಾಗಿ ಸಯ್ಯಿದ್ ಶಹೀದುದ್ದೀನ್ ಅಲ್ ಬುಖಾರಿ ಶಿಮೋಗ, ಸಯ್ಯಿದ್ ಅಬೂಬಕರ್ ಸಿದ್ದೀಖ್ ಅಲ್ ಹಾದಿ ಮುರ, ತೀರ್ಥಹಳ್ಳಿ,
ಅಬ್ದುಲ್ ಜಬ್ಬಾರ್ ಸ‌ಅದಿ ಸ‌‌ಆದ,
ಹನೀಫ್‌ ಬೆಜ್ಜವಳ್ಳಿ,
ನಾಸಿರ್ ಆವಿನಹಳ್ಳಿ,
ಕುಂಞಿ ಮುಹಮ್ಮದ್ ಕಾರ್ಗಲ್,
ಅಬ್ದುಲ್ ಖಾದರ್ ಬಾಬಾಕ ರಿಪ್ಪನ್ ಪೇಟೆ, ಆಲಿಕ್ಕೋಯ ಜಂಕ್ಷನ್, ಅಬ್ದುಲ್ಲ ಹೊನ್ನಟ್ಟಿ ಹೊಸೂರ್,
ಸಯ್ಯಿದ್ ಹೊಸನಗರ, ಝುಬೈರ್ ಜಯನಗರ, ಅಬೂಬಕರ್ ಸೀಗೆಬಾಗಿ, ಮಾಹಿನ್‌ ಮೂಪಾ ಕಂಪೌಂಡ್,
ಅಬ್ದುಲ್ ರಹ್ಮಾನ್ ರೆಂಜದ‌ಕಟ್ಟೆ,
ಇಬ್ರಾಹಿಂ ಹಾಜಿ ಕಡ್ತೂರು, ಹಂಝ ಕಮ್ಮರಡಿ ಇವರನ್ನು ಆರಿಸಲಾಯಿತು.

ಸಮಾರಂಭದಲ್ಲಿ ನಿಕಟಪೂರ್ವ ಜಿಲ್ಲಾದ್ಯಕ್ಷ ಅಬ್ದುಲ್ ಜಬ್ಬಾರ್ ಸ‌ಅದಿ ಅಧ್ಯಕ್ಷತೆ ವಹಿಸಿದರು. ಮರ್ಕಝ್ ಸ‌ಆದ ಅಧ್ಯಕ್ಷ ಸಯ್ಯಿದ್ ಶಹೀದುದ್ದೀನ್ ಅಲ್ ಬುಖಾರಿ ಉಧ್ಘಾಟಿಸಿದರು, ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಲತೀಫ್ ಸ‌ಅದಿ, ಇಹ್ಸಾನ್ ಕರ್ನಾಟಕ ಕಾರ್ಯದರ್ಶಿ ಶಾಹುಲ್ ಹಮೀದ್ ಮುಸ್ಲಿಯಾರ್ ನಗರ,ಶುಭ ಹಾರೈಸಿದರು. ಹನೀಫ್ ಬೆಜ್ಜವಳ್ಳಿ ಸ್ವಾಗತಿಸಿ ಮನ್ಸೂರ್ ಅಲಿ‌ ಧನ್ಯವಾದ ಸಲ್ಲಿಸಿದರು.