ಪೇರಮೊಗರು ಜಮಾಅತ್ ಆಡಳಿತ ಸಮಿತಿಯ ಅಧ್ಯಕ್ಷರಾಗಿ ಕಳೆದ ಎರಡು ವರ್ಷಗಳಿಂದ ಕಾರ್ಯ ನಿರ್ವವಹಿಸುತ್ತಿದ್ದ ಜನಾಬ್ ಇಬ್ರಾಹಿಂ ಹಾಜಿ (60) ನಿನ್ನೆ(ಸೆ.1)ಇಶಾ ನಮಾಝ್ ಬಳಿಕ ಹೃದಯಾಘಾತದಿಂದ ನಿಧನರಾದರು.
ಪೇರಮೊಗರಿನ ಸುನ್ನೀ ಸಂಘಟನೆಗಳ ಮುಂಚೂಣಿ ನಾಯಕರಾಗಿದ್ದ ಅವರು ಧಾರ್ಮಿಕ ಒಲವುಳ್ಳ ಸಾದಾತ್,ಉಲಮಾಗಳನ್ನು ಅತ್ಯಧಿಕವಾಗಿ ಗೌರವಿಸಿ, ಪ್ರೀತಿಸುತ್ತಿದ್ದರು.ಮೂರು ಅವಧಿಗೆ ಸ್ಥಳೀಯ ಜಮಾಅತ್ ಅಧ್ಯಕ್ಷರಾಗಿದ್ದ ಇಬ್ರಾಹಿಂ ಹಾಜಿ, ಎಸ್ ವೈ ಎಸ್ ಪೇರಮೊಗರು ಬ್ರಾಂಚ್ ಅಧ್ಯಕ್ಷ, ಎಸ್.ಎಂ.ಎ. ವಿಟ್ಲ ಝೋನಲ್ ಕೋಶಾಧಿಕಾರಿ, ಎಸ್.ಎಂ.ಎ ಮಾಣಿ ನಿಕಟ ಪೂರ್ವ ಅಧ್ಯಕ್ಷ, ಹಾಲಿ ಕೋಶಾಧಿಕಾರಿ, ಎಸ್ ವೈ ಎಸ್ ಮಾಣಿ ಸೆಂಟರ್ ಸದಸ್ಯ ಮುಂತಾದ ಪದವಿಗಳಲ್ಲಿ ಸಕ್ರೀಯವಾಗಿ ತನ್ನನ್ನು ತೊಡಗಿಸಿ ಕೊಂಡಿದ್ದರು.
ಮಡದಿ, ನಾಲ್ಕು ಮಕ್ಕಳು (ಎರಡು ಗಂಡು ಎರಡು ಹೆಣ್ಣು) ಸಹಿತ ಅಪಾರ ಬಂಧು ಬಳಗ, ಹಿತೈಷಿಗಳನ್ನು ಅಗಲಿದ್ದಾರೆ.
ಅವರ ಹೆಸರಲ್ಲಿ ಖುರ್ ಆನ್, ತಹ್ಲೀಲ್, ಮಯ್ಯಿತ್ ನಮಾಝ್ ಮಾಡಲು SYS ಪೇರಮೊಗರು ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಹನೀಫ್ ಸಖಾಫಿ ವಿನಂತಿಸಿದ್ದಾರೆ.
SMA ಜಿಲ್ಲಾ ಸಮಿತಿ ತೀವ್ರ ಸಂತಾಪ
ಸುನ್ನಿ ಉಮಾರ ನಾಯಕರು
ಪೇರಮೊಗರು ಜಮಾಅತ್ ಆಡಳಿತ ಸಮಿತಿ ಅಧ್ಯಕ್ಷ SMA ವಿಟ್ಲ ಝೋನ್ ಕೋಶಾಧಿಕಾರಿ ಸುನ್ನೀ ಸಂಘಟನೆಗಳಲ್ಲಿ ಸಕ್ರಿಯ ನಾಯಕತ್ವವನ್ನು ನಿರ್ವಹಿಸಿದ ಸೌಮ್ಯ ವ್ಯಕ್ತಿತ್ವದ ಜನಾಬ್ ಇಬ್ರಾಹಿಂ ಹಾಜಿ ಪೇರಮೊಗರು ಅಲ್ಲಾಹನ ಅನುಲ್ಲಂಘನೀಯ ವಿಧಿಗೆ ವಿದಯರಾಗಿದ್ದಾರೆ. ಅವರ ವಿಯೋಗದ ಸುದ್ದಿ ಕೇಳಿ ಬಾರಿ ನೋವು ತಂದಿದೆ ಅವರ ವಿಯೋಗವು ಸುನ್ನಿ ಸಂಘಟನೆಗಳಿಗೆ ತೀರಾ ನಷ್ಟವಾಗಿದೆ. ನಿಧನಕ್ಕೆ SMA ಜಿಲ್ಲಾ ಸಮಿತಿ ತೀವ್ರ ಸಂತಾಪ ಸೂಚಿಸುತ್ತಾ, ಅಲ್ಲಾಹು ಅವರ ಬರ್ಝಖೀ ಜೀವನ ಸುಖಮಯ ಗೊಳಿಸಲಿ. ಪೂರ್ಣ ಮಗ್ಫಿರತ್, ಮರ್ಹಮತ್ ಕರುಣಿಸಲಿ.ಎಲ್ಲರೂ ಸಾಧ್ಯ ವಾದಷ್ಟು ಖುರ್ಆನ್, ತಹ್ಲೀಲ್ ಹೇಳಿ ದುಆ ಮಾಡ ಬೇಕಾಗಿ ವಿನಂತಿಸುತ್ತಿದ್ದೇವೆ.
ಹಾಜಿ ಹಮೀದ್ ಕೊಡಂಗಾಯಿ
SMA ಈಷ್ಟ್ ಜಿಲ್ಲಾಅಧ್ಯಕ್ಷರು ಮತ್ತು ಸರ್ವ ಸದಸ್ಯರು
















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ