janadhvani

Kannada Online News Paper

ಬಾಡಿಗೆದಾರಿಕೆ ಕುರಿತಂತೆ ಸರಕಾರದಿಂದ ಹೊಸ ಅಧಿನಿಯಮ

ಬೆಂಗಳೂರು: ಬಾಡಿಗೆದಾರಿಕೆ ಕುರಿತಂತೆ ರಾಜ್ಯ ಸರ್ಕಾರ ಹೊಸಾ ಅಧಿನಿಯಮ ತರಲು ಮುಂದಾಗಿದೆ.ಈ ಹೊಸ ಅಧಿನಿಯಮದಲ್ಲಿ ಏನೇನಿದೆ, ಏನೇನಿಲ್ಲ ಇಲ್ಲಿದೆ ಸಂಪೂರ್ಣ ಮಾಹಿತಿ.

  • ಬಾಡಿಗೆದಾರರು ಹಾಗೂ ಮಾಲೀಕರು ಯಾವುದೇ ಒಪ್ಪಂದ ಮಾಡಿಕೊಂಡರೂ,ಈ ಅದರಲ್ಲಿ ಸರ್ಕಾರ ಮೂಗು ತೂರಿಸುವುದಿಲ್ಲ. ಅವರಿಬ್ಬರ ಅಗ್ರಿಮೆಂಟೇ ಫೈನಲ್, ಇನ್ನು ಮೇಲೆ ಏನೇ ಆದರೂ ಇಬ್ಬರೆ ಕುಳಿತು ಬಗೆಹರಿಸಿಕೊಳ್ಳಬೇಕಾಗಬಹುದು.
  • ಬಾಡಿಗೆದಾರ ಹಾಗೂ ಮಾಲೀಕರ ಕೇಸ್ ನ್ಯಾಯಾಯುತವಾಗಿ ಪರಿಹರಿಸಲು ಸಾಧ್ಯವಿರುವ ಎಲ್ಲಾ ಮಾರ್ಗಗಳನ್ನು ಸರ್ಕಾರ ಯೋಚಿಸುತ್ತಿದೆ.
  • ಬಾಡಿಗೆ ಹೆಚ್ಚಳದ ಮೇಲೆ ನಿಯಂತ್ರಣ ತರಲು ಸರ್ಕಾರ ಮುಂದಾಗಿದೆ. ಏಕೆಂದರೆ ಕೆಲವು ಕಡೆ ಮೂಗಿಗಿಂತ ಮೂಗುತಿ ಬಾರ ಅನ್ನುವ ರೀತಿ ಇದೆ. ಅಲ್ಲದೆ ಅವೈಜ್ಞಾನಿಕ ಬಾಡಿಗೆ ಅದರಿಂದ ಉಂಟಾಗುತ್ತಿರುವ ತಲೆನೋವುಗಳಿಂದ ಮುಕ್ತಿ ಕೊಡಲು ಸರ್ಕಾರ ನಿರ್ಧರಿಸಿದೆ.
  • ಅನೌಪಚಾರಿಕ ಬಾಡಿಗೆ ಮಾರುಕಟ್ಟೆಯನ್ನು ಸೃಜಿಸು ಯೋಚನೆಯೂ ಸರ್ಕಾರದ ಮುಂದಿದೆ. ಹಾಗೂ ಬಾಡಿಗೆ ಕರಾರು & ದಸ್ತಾವೇಜುಗಳನ್ನು ಸಲ್ಲಿಸಲು ವೇದಿಕೆಯನ್ನು ಸ್ಥಾಪಿಸಲಾಗುವುದು ಎಂದು ಹೇಳಲಾಗಿದೆ.
  • ಯಾವುದೇ ಹಣಕಾಸಿನ ವ್ಯವಹಾರದಲ್ಲಿ ಗರಿಷ್ಟಮಿತಿ ಇರುವುದಿಲ್ಲ, ಒಪ್ಪಂದದ ‌ಮೇರೆಗೆ ಬಾಡಿಗೆ ನಿರ್ಧಾರ ಮಾಡಬಹುದು.ಗರಿಷ್ಠ ತಿಂಗಳ ಬಾಡಿಗೆಗೆ ಸಮನಾದ ಭದ್ರತಾ ಠೇವಣಿ ಅಂದರೆ ಅಡ್ವಾನ್ಸ್ ಅನ್ನು ಮಾತ್ರ ಪಡೆಯಬೇಕು. ಇದನ್ನು ಸ್ಪಷ್ಟವಾಗಿ ಉಲ್ಲೇಖಿಸುವ ಸಾಧ್ಯತೆ ಇದೆ.
  • ಬಾಡಿಗೆ ನ್ಯಾಯಾಧಿಕರಣದ ಸ್ಥಾಪನೆ, ಕೇಸ್ ವಿಚಾರಣೆಗೆ ಜಿಲ್ಲಾ ನ್ಯಾಯಾಧೀಶರ ನೇಮಕ ಮಾಡಲಾಗುವುದು.
  • ಬಾಡಿಗೆ ಮನೆ ವಿವಾದಕ್ಕೆ ಸಂಬಂಧಿಸಿದಂತೆ 60 ದಿನಗಳ ಒಳಗೆ ಕೇಸ್ ಇತ್ಯರ್ಥ ಮಾಡಬೇಕು, ಯಾವುದೇ ಕಾರಣಕ್ಕೂ ಇದನ್ನು ವಿಳಂಬ ಮಾಡುವಂತಿಲ್ಲ.
  • ಬಾಡಿಗೆ ನ್ಯಾಯಾಲಯದ ಆದೇಶದ ವಿರುದ್ಧ ಮೇಲ್ಮನವಿ, ಮಧ್ಯಕಾಲೀನ ಆದೇಶವನ್ನು ಹೊರಡಿಸುವುದಕ್ಕೆ ಅವಕಾಶವಿದೆ. 3ಕ್ಕಿಂತ ಹೆಚ್ಚು ಮುಂದೂಡಿಕೆಗಳಿಗೆ ಅವಕಾಶ ನೀಡುವಂತಿಲ್ಲ.
  • ಸರ್ವರಿಗೂ ವಸತಿ ಕಾರ್ಯಕ್ರಮ ಪುನರ್ ಜಾರಿಗೆ ಚಿಂತನೆ, ಬಾಡಿಗೆದಾರರು & ಭೂ ಮಾಲೀಕರಿಗೆ ಇದರಿಂದ ಲಾಭ ಹೆಚ್ಚಾಗುವ ನಿರೀಕ್ಷೆ.
  • ಸ್ಪಂದನಶೀಲ, ಸುಸ್ಥಿರ, ಔಪಚಾರಿಕ ಬಾಡಿಗೆ ಮಾರುಕಟ್ಟೆ ಸೃಷ್ಟಿಗೆ ಆದ್ಯತೆ. ಈ ಕುರಿತು ಕಾನೂನು ಚೌಕಟ್ಟಿನಲ್ಲಿ ಕೂಲಂಕುಶವಾಗಿ ಪರಿಶೀಲನೆ ಮಾಡಲಾಗುವುದಾಗಿ ತಿಳಿಸಲಾಗಿದೆ.
  • ಬಾಡಿಗೆ ವಲಯದಲ್ಲಿ ರಿಯಲ್ ಎಸ್ಟೇಟ್ ಹೂಡಿಕೆ, ಸಮಗ್ರ ಆರ್ಥಿಕ ವ್ಯವಸ್ಥೆ ಉತ್ತೇಜಿಸುವುದು.
  • ಅನೀರಿಕ್ಷಿತ ವಿಪತ್ತು ಎದುರಾದಾಗ ಇಬ್ಬರ ಒಪ್ಪಂದಗಳ ಆಧಾರದಲ್ಲಿಯೇ ಮುಂದುವರೆಯುವುದಕ್ಕೆ ಅನುಮತಿಸಿವುದು.
  • ಪ್ರಸ್ತುತ ಜಾರಿಯಲ್ಲಿರುವ ಕಾನೂನುಗಳನ್ನು ತಿದ್ದುಪಡಿ ಮಾಡುವ ಅಗತ್ಯ ಹಾಗೂ ಬಾಡಿಗೆದಾರ – ಮಾಲೀಕನ ಹಿತಾಸಕ್ತಿಗಳನ್ನು ಸಮತೋಲನ ಮಾಡುವುದು.
  • ಹೊಸ ಬಾಡಿಗೆದಾರಿಕೆಗಳಿಗೆ ಲಿಖಿತ ಒಪ್ಪಂದ ಕಡ್ಡಾಯ, ಭೂ ಮಾಲೀಕ, ಅವಶ್ಯಕ ಪೂರೈಕೆಗಳನ್ನ ತಡೆಹಿಡಿಯುವಂತಿಲ್ಲ,.
  • ಬಾಡಿಗೆ ಅವಧಿಯು ಚಾಲ್ತಿಯಲ್ಲಿರುವಾಗ ಬಾಡಿಗೆದಾರರನನ್ನು ಹೊರಹಾಕುವಂತಿಲ್ಲ.
  • ಬಾಡಿಗೆ ಅವಧಿ ಮುಕ್ತಾಯ ನಂತರ, ಖಾಲಿ ಮಾಡದಿರುವ ಸಂಧರ್ಭದಲ್ಲಿ ಹೆಚ್ಚಿಸಲಾದ ಬಾಡಿಗೆ ಹಣವನ್ನು ಬಾಡಿಗೆದಾರ ಕೊಡಬೇಕು.
  • ಮೊದಲ ಎರಡು ತಿಂಗಳಿಗೆ 3 ಪಟ್ಟು, ಅನಂತರ ನಾಲ್ಕು ಪಟ್ಟು ಬಾಡಿಗೆ ನೀಡಬೇಕಾಗುತ್ತದೆ.
  • ವಿವಾದ ಇತ್ಯರ್ಥದಲ್ಲಿರುವಾಗ ಬಾಡಿಗೆದಾರ ಬಾಡಿಗೆ ಕಟ್ಟಬೇಕಾಗುತ್ತದೆ. ಮಾಲೀಕನ ಒಪ್ಪಿಗೆ ಇಲ್ಲದೇ, ಬಾಡಿಗೆದಾರ ಯಾವುದೇ ಬದಲಾವಣೆ ಮಾಡುವಂತಿಲ್ಲ.
  • ಈ ಎಲ್ಲಾ ಸಂಗತಿಗಳ ನಿರ್ವಹಣೆಗೆ ಡೆಪ್ಯೂಟಿ ಕಲೆಕ್ಟರ್ ನ ದರ್ಜೆಯ ಒಬ್ಬ ಅಧಿಕಾರಿ ನೇಮಕ ಹಾಗೂ ದಸ್ತಾವೇಜುಗಳ ಸಲ್ಲಿಕೆ ಸಬಲ ಹಾಗೂ ಸುಲಭಗೊಳಿಸಲು ಡಿಜಿಟಲ್ ವೇದಿಕೆ.