janadhvani

Kannada Online News Paper

ಕರ್ನಾಟಕ ಮುಸ್ಲಿಂ ಜಮಾಅತ್ ; ನಾಳೆ ‘ಸಹಾಯ್ ಎಲೈಟ್ ಅಲಯನ್ಸ್ ‘ ರಚನೆ

ಕೊರೋನ ಎರಡನೇ ಅಲೆ ದೇಶಾದ್ಯಂತ ಅಟ್ಟಹಾಸ ಮೆರೆದಾಗ‌ ಕರ್ನಾಟಕದಲ್ಲಿ ಸಮಾಜ ಸೇವೆಗಾಗಿ ಕರ್ನಾಟಕ ಮುಸ್ಲಿಂ ಜಮಾಅತ್ ಅಧೀನದಲ್ಲಿ ರಚಿಸಲಾದ ‘ಸಹಾಯ್’ ಎಂಬ ತುರ್ತು ಸೇವಾ ಸನ್ನದ್ಧ ತಂಡವು ರಾಜ್ಯಾದ್ಯಂತ ವಿವಿಧ ರೀತಿಯ ಸೇವೆ ಮಾಡಿ ಜಾತಿ ಧರ್ಮ ಭೇದವಿಲ್ಲದೆ ಸಮಾಜದ ಪ್ರಶಂಸೆಗೆ ಪಾತ್ರವಾಗಿದ್ದು, ಇದರ ‘ಸಹಾಯ್ ಎಲೈಟ್ ಅಲಯನ್ಸ್’ ರಚನೆಯು 28-05-2021 ರಂದು ಶುಕ್ರವಾರ 8 ಗಂಟೆಗೆ ನಡೆಯಲಿದೆ.

ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯಾಧ್ಯಕ್ಷ ಮುಫ್ತಿ ಅನ್ವರ್ ಅಲಿ ರವರು ಅಧ್ಯಕ್ಷತೆ ವಹಿಸಲಿದ್ದು, ಇಂಡಿಯನ್ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ ಪಿ ಉಸ್ತಾದ್ ಉದ್ಘಾಟಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಖಾಝಿ ಸಯ್ಯಿದ್ ಫಝಲ್ ತಂಙಳ್ ಕೂರತ್, ಖಾಝಿ ಮಾಣಿ ಉಸ್ತಾದ್, ಕೊಡಗು ಸಹಾಯಕ ಖಾಝಿ ಮಹ್ಮೂದ್ ಮುಸ್ಲಿಯಾರ್, ಕಾವಳಕಟ್ಟೆ ಹಝ್ರತ್ ಸಹಿತವಿರುವ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅಲ್ಲದೆ ಎಸ್.ವೈ.ಎಸ್, ಎಸ್.ಜೆ.ಎಂ, ಕೆಸಿಎಫ್ INC ನಾಯಕರು, ಎಸ್.ಎಂ.ಎ, ಎಸ್ಸೆಸ್ಸೆಫ್ ಇದರ ರಾಜ್ಯ ನಾಯಕರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆಂದು ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಕೆ.ಎಂ ಶಾಫಿ ಸ‌ಅದಿ ಬೆಂಗಳೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.