janadhvani

Kannada Online News Paper

ಇಂದು ಎಸ್ಸೆಸ್ಸೆಫ್ ನಿಂದ ಇಹ್ಸಾನ್ ರಂಝಾನ್ ದಾಈಗಳಿಗೆ ಅಭಿನಂದನಾ ಕಾರ್ಯಕ್ರಮ

ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿಯಿಂದ ರಂಝಾನ್ ನಲ್ಲಿ ಉತ್ತರ ಕರ್ನಾಟಕ ದಅವಾ ಹೋಗಿ ಕಾರ್ಯಾಚರಣೆ ಮಾಡಿದ ಇಹ್ಸಾನ್ ರಂಝಾನ್ ದಾಈಗಳಿಗೆ ಅಭಿನಂದನಾ ಕಾರ್ಯಕ್ರಮವು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ಲತೀಫ್ ಸಅದಿ ಶಿವಮೊಗ್ಗರವರ ಅಧ್ಯಕ್ಷತೆಯಲ್ಲಿ ಮೇ 20 ಗುರುವಾರ ಸಂಜೆ 3:00 ಗಂಟೆಗೆ ಝೂಮ್ ನಲ್ಲಿ ನಡೆಯಲಿರುವುದು.

ವಿಶೇಷ ಆಹ್ವಾನಿತರಾಗಿ ಇಹ್ಸಾನ್ ಕರ್ನಾಟಕ ಚಯರ್ಮ್ಯಾನ್ ಮೌಲಾನಾ NKM ಶಾಫಿ ಸಅದಿ ಬೆಂಗಳೂರು, ಕೆ.ಸಿ.ಎಫ್,ಐ .ಎನ್ .ಸಿ ಪಿನಾನ್ಸ್ ಕಂಟ್ರೋಲರ್ ಅಬ್ದುಲ್ ಹಮೀದ್ ಸಅದಿ ಅಬೂಧಾಬಿ,ಕೆ.ಸಿ.ಎಫ್, ಐ.ಎನ್.ಸಿ ಇಹ್ಸಾನ್ ಚಯರ್ಮ್ಯಾನ್ ರೈಸ್ಕೊ ಅಬೂಬಕ್ಕರ್ ಹಾಜಿ ಸೌದಿ ಅರೇಬಿಯಾ,ಕೆ.ಸಿ.ಎಫ್ ,ಐ.ಎನ್. ಸಿ ಇಹ್ಸಾನ್ ಕಾರ್ಯದರ್ಶಿ ಅಬ್ದುಲ್ ರಹೀಂ ಸ ಅದಿ ಕತ್ತರ್ ಹಾಗೂ ಇನ್ನಿತರ ನಾಯಕರು ಭಾಗವಹಿಸಲಿದ್ದಾರೆ ಎಂದು ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.