ಮಂಗಳೂರು: ತೌಕ್ತೆ ಚಂಡಮಾರುತದಿಂದ ನಿನ್ನೆ ಕಡಲ ಅಲೆಯ ಅಬ್ಬರದಿಂದ ತಲಪಾಡಿ ಕೆಳಗಿನ ಪೇಟೆ ಪ್ರದೇಶದ ಲ್ಲಿ ನೂರಾರು ಮನೆಗಳು ಜಲಾವ್ರತವಾದಾಗ ಕರ್ನಾಟಕ ಮುಸ್ಲಿಂ ಜಮಾಅತ್ ಸಹಾಯ್ ಎಸ್ ಎಸ್ ಎಪ್, ಎಸ್ ವೈ ಎಸ್ ತುರ್ತು ಸೇವಾ ತಂಡ ಹಲವಾರು ದೋಣಿಗಳ ಮೂಲಕ ಕ್ಷಿಪ್ರ ಕಾರ್ಯಚರಣೆ ಯಿಂದ ಅಗತ್ಯ ಸಾಮಗ್ರಿಗಳ ಸಮೇತ ಜನರನ್ನು ಬೇರೆಡೆಗೆ ಸ್ಥಳಾಂತರಿಸುವ ಮೂಲಕ ಯಾವದೇ ಎಲ್ಲರನ್ನು ರಕ್ಷಿಸುವಲ್ಲಿ ಸಫಲವಾಗಿದೆ.
ಇದರಿಂದ ವ್ಯಾಪಕವಾಗಿ ಸಾರ್ವಜನಿಕ ರಿಂದ ಸಹಾಯ್ ತಂಡ ಪ್ರಶಂಸೆ ಗೆ ಪಾತ್ರವಾಯಿತು. ಬೆಳಗ್ಗಿನಿಂದಲೇ ಕಾರ್ಯಚರಣೆ ಗಿಳಿದ ತಂಡದ ನೇತ್ರತ್ವ ವಹಿಸಿದ ಹಮೀದ್ ತಲಪಾಡಿ,ಅನ್ಸಾರ್ ಹಳೇಕಲ,ಶಿಹಾಬ್ ಬೆಂಗಳೂರು ಸಮೇತ ಹಲವಾರು ಸದಸ್ಯರು ಕೈ ಜೋಡಿಸಿದ್ದರು.ಈ ಸಂದರ್ಬದಲ್ಲಿ ಸಹಾಯ್ ರಾಜ್ಯ ಕೋ ಆರ್ಡಿನೇಟರ್ ಅಶ್ರಫ್ ಕಿನಾರ ಮಂಗಳೂರು, ಮುಡಿಪು ಡೈರೆಕ್ಟರ್ ಖಾಲಿದ್ ಹಾಜಿ ಬೇಟಿ ನೀಡಿದ್ದರು.







