janadhvani

Kannada Online News Paper

ಎಸ್ಸೆಸ್ಸೆಫ್ ಮುಖವಾಣಿ ‘ಇಶಾರ ಪಾಕ್ಷಿಕ’ ದ ನೂತನ ಕಛೇರಿ ಉದ್ಘಾಟನೆ

ಮಂಗಳೂರು: ಎಸ್ಸೆಸ್ಸೆಫ್ ನ ಮುಖವಾಣಿ ಇಶಾರ ಪಾಕ್ಷಿಕದ ನೂತನ ಕಛೇರಿಯ ಉದ್ಘಾಟನೆಯು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ಲತೀಫ್ ಸಅದಿ ಶಿವಮೊಗ್ಗ ರವರ ಅಧ್ಯಕ್ಷತೆಯಲ್ಲಿ ಮಂಗಳೂರಿನ ಸ್ಟೇಟ್ ಬ್ಯಾಂಕ್ ಬಳಿ ಇರುವ ಅಲ್- ರಹಬಾ ಪ್ಲಾಝಾದಲ್ಲಿ ನಡೆಯಿತು.

ಎಸ್ಸೆಸ್ಸೆಫ್ ರಾಜ್ಯ ನಾಯಕರಾದ ಸಯ್ಯಿದ್ ಅಲವೀ ತಂಙಳ್ ಕರ್ಕಿ ಕಚೇರಿಯ ಉದ್ಘಾಟನೆಯನ್ನು ಮಾಡಿದರು.ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ, ಕಾರ್ಯದರ್ಶಿಗಳಾದ ನೌಫಳ್ ಸಖಾಫಿ ಕಳಸ, ಮುಬಶ್ಶಿರ್ ಅಹ್ಸನಿ ಕೊಡಗು, ಸಫ್ವಾನ್ ಚಿಕ್ಕಮಂಗಳೂರು, ಶರೀಫ್ ಕೊಡಗು, ನವಾಝ್ ಭಟ್ಕಳ, ಎನ್.ಸಿ ರಹೀಂ ಉಡುಪಿ, ವಾಜಿದ್ ಹಾಸನ, ಹಕೀಂ ಬೆಂಗಳೂರು ಮೊದಲಾದವರು ಉಪಸ್ಥಿತರಿದ್ದರು.

ಎಸ್ಸೆಸ್ಸೆಫ್ ರಾಜ್ಯ ಇಶಾರ ಮಂಡಳಿ ಮ್ಯಾನೆಜಿಂಗ್ ಡೈರಕ್ಟರ್ ಹುಸೈನ್ ಸಅದಿ ಹೊಸ್ಮಾರ್ ಸ್ವಾಗತಿಸಿ,ಕೊನೆಗೆ ವಂದಿಸಿದರು.