ವಿಜಯಪುರ:ಬಿಜಾಪುರ ಸಮೇತವಿರುವ ಕರ್ನಾಟಕದ ಮುಸಲ್ಮಾನರ ಗತಕಾಲದ ಚರಿತ್ರೆಯು ಶ್ಲಾಘನೀಯ ಮತ್ತು ಐತಿಹಾಸಿಕವಾದುದು, ಮುಸ್ಲಿಮರ ಪ್ರಗತಿಪರ ಇತಿಹಾಸವು ಆಧುನಿಕ ಮುಸ್ಲಿಂ ಕನ್ನಡಿಗರಿಗೆ ಮಾದರಿಯಾಗಬೇಕು.

ಚಾರಿತ್ರಿಕ ಭೂಮಿಯಾಗಿದ್ದ ಬಿಜಾಪುರ ಮುಸಲ್ಮಾನರರ ಇಂದಿನ ಅಧೋಗತಿಗೆ ಹೊಲಸು ರಾಜಕೀಯ ಕಾರಣ ಎಂದು ಜಪಿಸುವುದಕ್ಕಿಂತ, ಇತಿಹಾಸದಿಂದ ಪಾಠ ಕಲಿತು ಹೊಸ ತಲೆಮಾರನ್ನು ಶಿಕ್ಷಣ ಕ್ರಾಂತಿಯ ಮೂಲಕ ಅಭಿವೃದ್ಧಿಯತ್ತ ಕೊಂಡೊಯ್ಯಬೇಕೆಂದು ಇಹ್ಸಾನ್ ಕರ್ನಾಟಕ ಚೇರ್ಮೇನ್ ಹಾಗೂ ರಾಜ್ಯ ವಕ್ಫ್ ಮಂಡಳಿ ಸದಸ್ಯರಾದ ಮೌಲಾನಾ ಶಾಫೀ ಸಅದಿ ಹೇಳಿದರು.
ಅವರು ಇಂದು ಬಿಜಾಪುರದ ಮಸ್ಜಿದೇ ಅಲಿಬಾವಿ ಜುಮಾ ಭಾಷಣದಲ್ಲಿ ಮಾತನಾಡಿದರು.ಬಿಜಾಪುರವಿಡೀ ಜಗತ್ತಿನ ಗಮನ ಸೆಳೆಯುವಂತ ಸ್ಮಾರಕಗಳ ನಾಡು, ಆದರೆ ಮುಸಲ್ಮಾನರು ತೀರಾ ಹಿಂದುಳಿದ ವಿಭಾಗವಾಗಿ ಜೀವಿಸಲು ನಾವೆಲ್ಲರೂ ಕೂಡ ಕಾರಣಕರ್ತರು, ಇತಿಹಾಸದಿಂದ ಪಾಠ ಕಲಿತು ಮುಂದುವರಿಯಿರಿ, ಶಿಕ್ಷಣ ಕ್ರಾಂತಿ ಮತ್ತು ಸಹೋದರ ಧರ್ಮೀಯರೊಂದಿಗೆ ಸಹಬಾಳ್ವೆಯಿಂದ ಮುಂದುವರಿಯಿರಿ ಎಂದು ಸಲಹೆ ನೀಡಿದರು.
















ಇನ್ನಷ್ಟು ಸುದ್ದಿಗಳು
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ