ಮದೀನತುಲ್ ಮುನವ್ವರ|ಮದೀನಾದ ಪ್ರವಾದಿ ಮಸೀದಿಯಲ್ಲಿ(ಮಸ್ಜಿದುನ್ನಬವಿ) ರಂಜಾನ್ ಸಿದ್ಧತೆಗಳನ್ನು ಘೋಷಿಸಲಾಗಿದೆ. ರಂಜಾನ್ ಕೊನೆಯ ಹತ್ತು ದಿನಗಳಲ್ಲಿ ವಿಶ್ವಾಸಿಗಳಿಗೆ ಪೂರ್ಣ ಸಮಯ ಮಸೀದಿಗೆ ಪ್ರವೇಶಕ್ಕೆ ಅವಕಾಶವಿರುತ್ತದೆ. ಪ್ರತಿದಿನ 60 ಸಾವಿರ ಜನರಿಗೆ ಪ್ರಾರ್ಥನೆ ಸಲ್ಲಿಸಲು ಸೌಲಭ್ಯ ಕಲ್ಪಿಸಲಾಗುವುದು ಎಂದು ಹರಮ್ ಕಚೇರಿಯ ಮುಖ್ಯಸ್ಥರು ಹೇಳಿದರು.
ಶಅಬಾನ್ ಮತ್ತು ರಂಜಾನ್ ತಿಂಗಳುಗಳಲ್ಲಿ ಮದೀನಾದಲ್ಲಿನ ಮಸೀದಿ ಅಲ್-ನಬವಿಗಾಗಿ ಸಿದ್ಧತೆಗಳು ಮತ್ತು ಮುನ್ನೆಚ್ಚರಿಕೆಗಳನ್ನು ಎರಡು ಹರಮ್ ಕಚೇರಿಗಳ ಮುಖ್ಯಸ್ಥರು ಘೋಷಿಸಿದರು.
ಈದ್ ಅಲ್-ಫಿತರ್ ದಿನ ಸೇರಿದಂತೆ ರಂಜಾನ್ ನ ವಿಶೇಷ ಯೋಜನೆಯನ್ನು ಎರಡೂ ಹರಮ್ ಕಚೇರಿಯ ಮುಖ್ಯಸ್ಥ ಶೈಖ್ ಅಬ್ದುಲ್ ರಹ್ಮಾನ್ ಅಲ್ ಸುದೈಸ್ ಉದ್ಘಾಟಿಸಿದರು.
ರಂಜಾನ್ ಸಮಯದಲ್ಲಿ ರಾತ್ರಿ ತಾರವೀಹ್ ಪ್ರಾರ್ಥನೆ ಮುಗಿದ ಅರ್ಧ ಘಂಟೆಯ ನಂತರ ಮಸೀದಿಯನ್ನು ಮುಚ್ಚಲಾಗುವುದು. ಬೆಳಿಗ್ಗಿನ ಪ್ರಾರ್ಥನೆಗೆ ಎರಡು ಗಂಟೆಗಳ ಮುಂಚಿತವಾಗಿ ತೆರೆಯಲಾಗುವುದು. ಆದರೆ, ರಂಜಾನ್ನ ಕೊನೆಯ ಹತ್ತು ದಿನಗಳಲ್ಲಿ ಭಕ್ತರಿಗೆ ಪೂರ್ಣ ಸಮಯ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗುವುದು ಎಂದು ಎರಡೂ ಹರಂ ಕಚೇರಿಯ ಮುಖ್ಯಸ್ಥರು ತಿಳಿಸಿದ್ದಾರೆ.
ಕೋವಿಡ್ ಪ್ರೋಟೋಕಾಲ್ನ ಸಂಪೂರ್ಣ ಪಾಲನೆಯೊಂದಿಗೆ ಮಾತ್ರ ಹರಂ ಗೆ ಪ್ರವೇಶವನ್ನು ಅನುಮತಿಸಲಾಗುತ್ತದೆ.ಹರಮಿನ ಹಳೆಯ ಭಾಗಕ್ಕೆ ಮತ್ತು ರೌಳಾ ಪ್ರವೇಶಿಸಲು ವಿಶೇಷ ನಿಯಂತ್ರಣಗಳನ್ನು ಏರ್ಪಡಿಸಲಾಗಿದೆ.
ಕೋವಿಡ್ ವಿಸ್ತರಣೆಯ ಹಿನ್ನೆಲೆಯಲ್ಲಿ, ಪ್ರವಾದಿಯ ಮಸೀದಿಯಲ್ಲಿ ಪ್ರತಿದಿನ ಪ್ರತಿದಿನ 45,000 ಜನರಿಗೆ ಮಾತ್ರ ಪ್ರಾರ್ಥನೆ ಸಲ್ಲಿಸಲು ಅವಕಾಶವಿದೆ. ಆದಾಗ್ಯೂ, ಮಸೀದಿಯ ನವೀಕರಣ ಪೂರ್ಣಗೊಂಡ ಸ್ಥಳಗಳಲ್ಲಿ ಪ್ರಾರ್ಥನೆಗೆ ಅವಕಾಶ ನೀಡಲಾಗುವುದು ಎಂದು ಅಲ್-ಸುದೈಸ್ ಹೇಳಿದರು. ಇದರೊಂದಿಗೆ ಪ್ರತಿದಿನ 60,000 ಜನರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗುವುದು.
















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ