ಮದೀನತುಲ್ ಮುನವ್ವರ|ಮದೀನಾದ ಪ್ರವಾದಿ ಮಸೀದಿಯಲ್ಲಿ(ಮಸ್ಜಿದುನ್ನಬವಿ) ರಂಜಾನ್ ಸಿದ್ಧತೆಗಳನ್ನು ಘೋಷಿಸಲಾಗಿದೆ. ರಂಜಾನ್ ಕೊನೆಯ ಹತ್ತು ದಿನಗಳಲ್ಲಿ ವಿಶ್ವಾಸಿಗಳಿಗೆ ಪೂರ್ಣ ಸಮಯ ಮಸೀದಿಗೆ ಪ್ರವೇಶಕ್ಕೆ ಅವಕಾಶವಿರುತ್ತದೆ. ಪ್ರತಿದಿನ 60 ಸಾವಿರ ಜನರಿಗೆ ಪ್ರಾರ್ಥನೆ ಸಲ್ಲಿಸಲು ಸೌಲಭ್ಯ ಕಲ್ಪಿಸಲಾಗುವುದು ಎಂದು ಹರಮ್ ಕಚೇರಿಯ ಮುಖ್ಯಸ್ಥರು ಹೇಳಿದರು.
ಶಅಬಾನ್ ಮತ್ತು ರಂಜಾನ್ ತಿಂಗಳುಗಳಲ್ಲಿ ಮದೀನಾದಲ್ಲಿನ ಮಸೀದಿ ಅಲ್-ನಬವಿಗಾಗಿ ಸಿದ್ಧತೆಗಳು ಮತ್ತು ಮುನ್ನೆಚ್ಚರಿಕೆಗಳನ್ನು ಎರಡು ಹರಮ್ ಕಚೇರಿಗಳ ಮುಖ್ಯಸ್ಥರು ಘೋಷಿಸಿದರು.
ಈದ್ ಅಲ್-ಫಿತರ್ ದಿನ ಸೇರಿದಂತೆ ರಂಜಾನ್ ನ ವಿಶೇಷ ಯೋಜನೆಯನ್ನು ಎರಡೂ ಹರಮ್ ಕಚೇರಿಯ ಮುಖ್ಯಸ್ಥ ಶೈಖ್ ಅಬ್ದುಲ್ ರಹ್ಮಾನ್ ಅಲ್ ಸುದೈಸ್ ಉದ್ಘಾಟಿಸಿದರು.
ರಂಜಾನ್ ಸಮಯದಲ್ಲಿ ರಾತ್ರಿ ತಾರವೀಹ್ ಪ್ರಾರ್ಥನೆ ಮುಗಿದ ಅರ್ಧ ಘಂಟೆಯ ನಂತರ ಮಸೀದಿಯನ್ನು ಮುಚ್ಚಲಾಗುವುದು. ಬೆಳಿಗ್ಗಿನ ಪ್ರಾರ್ಥನೆಗೆ ಎರಡು ಗಂಟೆಗಳ ಮುಂಚಿತವಾಗಿ ತೆರೆಯಲಾಗುವುದು. ಆದರೆ, ರಂಜಾನ್ನ ಕೊನೆಯ ಹತ್ತು ದಿನಗಳಲ್ಲಿ ಭಕ್ತರಿಗೆ ಪೂರ್ಣ ಸಮಯ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗುವುದು ಎಂದು ಎರಡೂ ಹರಂ ಕಚೇರಿಯ ಮುಖ್ಯಸ್ಥರು ತಿಳಿಸಿದ್ದಾರೆ.
ಕೋವಿಡ್ ಪ್ರೋಟೋಕಾಲ್ನ ಸಂಪೂರ್ಣ ಪಾಲನೆಯೊಂದಿಗೆ ಮಾತ್ರ ಹರಂ ಗೆ ಪ್ರವೇಶವನ್ನು ಅನುಮತಿಸಲಾಗುತ್ತದೆ.ಹರಮಿನ ಹಳೆಯ ಭಾಗಕ್ಕೆ ಮತ್ತು ರೌಳಾ ಪ್ರವೇಶಿಸಲು ವಿಶೇಷ ನಿಯಂತ್ರಣಗಳನ್ನು ಏರ್ಪಡಿಸಲಾಗಿದೆ.
ಕೋವಿಡ್ ವಿಸ್ತರಣೆಯ ಹಿನ್ನೆಲೆಯಲ್ಲಿ, ಪ್ರವಾದಿಯ ಮಸೀದಿಯಲ್ಲಿ ಪ್ರತಿದಿನ ಪ್ರತಿದಿನ 45,000 ಜನರಿಗೆ ಮಾತ್ರ ಪ್ರಾರ್ಥನೆ ಸಲ್ಲಿಸಲು ಅವಕಾಶವಿದೆ. ಆದಾಗ್ಯೂ, ಮಸೀದಿಯ ನವೀಕರಣ ಪೂರ್ಣಗೊಂಡ ಸ್ಥಳಗಳಲ್ಲಿ ಪ್ರಾರ್ಥನೆಗೆ ಅವಕಾಶ ನೀಡಲಾಗುವುದು ಎಂದು ಅಲ್-ಸುದೈಸ್ ಹೇಳಿದರು. ಇದರೊಂದಿಗೆ ಪ್ರತಿದಿನ 60,000 ಜನರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗುವುದು.
















ಇನ್ನಷ್ಟು ಸುದ್ದಿಗಳು
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ
ಜಿಸಿಸಿ: ಮಾದಕ ಜಾಲದ ವಿರುದ್ಧ ಮತ್ತಷ್ಟು ಕಠಿಣ ನಿಯಮ- ಮರಣದಂಡನೆ ಶಿಕ್ಷೆ
ಮಕ್ಕಾದಲ್ಲಿ ಹಜ್ ನಿಯಮ ಉಲ್ಲಂಘನೆ: ನೂರಾರು ವಿದೇಶಿಯರ ಬಂಧನ
ಮಾದರಿ ಮದುವೆ ಅಭಿಯಾನದ ಸಮಾರೋಪ ಪ್ರಚಾರ; ಎ.28, 29 ರಂದು ವಾಹನ ಸಂದೇಶ ಜಾಥಾ
ಯುಎಇ: ವೈಯಕ್ತಿಕ ವಾಟ್ಸಾಪ್ ಚಾಟ್ ಮತ್ತು ಫಾರ್ವರ್ಡ್ಗಳಿಗೂ ಸೈಬರ್ ಕಾನೂನು ಅನ್ವಯ
ಮುಂಬೈಯನ್ನು ನಡುಗಿಸಿದ ಘಟನೆ: ಬಿರಿಯಾನಿ ಮತ್ತು ಕಲ್ಲಂಗಡಿ ತಿಂದ ಕುಟುಂಬ ಬೆಳಗಾಗುವಷ್ಟರಲ್ಲಿ ಅಂತ್ಯ
‘ಮಾದರಿ ಮದುವೆ ಅಭಿಯಾನ’ ಸಮಾರೋಪ ಸಮಾರಂಭ – ಎಸ್ವೈಎಸ್ ಬಂಟ್ವಾಳ ಝೋನ್ ಯಶಸ್ವಿಗೆ ಕರೆ
ಮಂಗಳೂರು ಪೊಲೀಸ್ ಕಮಿಷನರ್: ವರ್ಗಾವಣೆ ವಿಚಾರ ಕೈಬಿಡುವಂತೆ ಮನವಿ- ಡಿಜಿಪಿಗೆ ಇಕ್ಬಾಲ್ ಬಾಳಿಲ ಪತ್ರ
ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ತೆಗೆಸಿದ ಘಟನೆ: ಸಚಿವ ದಿನೇಶ್ ಗುಂಡೂರಾವ್ ತೀವ್ರ ಖಂಡನೆ
ಸೌದಿ: ಪಾರ್ಕ್ನಲ್ಲಿ ಆಟವಾಡುತ್ತಿದ್ದಾಗ ವಿದ್ಯುತ್ ಶಾಕ್- ಆರು ವರ್ಷದ ಬಾಲಕ ಮೃತ್ಯು