ಮಂಗಳೂರು, ಫೆ.25: ಇಂದು ಅಪರಾಹ್ನ ಮಂಗಳೂರು ಬೋಂದೆಲ್ನಲ್ಲಿರುವ ತನ್ನ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ರಾಜ್ಯಾಧ್ಯಕ್ಷ, ಹಾಗೂ ಕರ್ನಾಟಕದ ಮದ್ರಸಾ ರಂಗದಲ್ಲಿ ಅನೇಕ ಬದಲಾವಣೆಗಳಿಗೆ ಮುನ್ನುಡಿ ಬರೆದ ಮುಅಲ್ಲಿಂ ಚಳವಳಿಯ ಮುಂಚೂಣಿ ನಾಯಕ ಆತೂರು ಸಅದ್ ಮುಸ್ಲಿಯಾರ್ (60) ಅವರ ವಿಯೋಗವು ಮುಸ್ಲಿಂ ಸಮುದಾಯಕ್ಕೆ ತುಂಬಲಾರದ ನಷ್ಟ ಎಂದು ಎಸ್.ವೈ.ಎಸ್.ಕರ್ನಾಟಕ ರಾಜ್ಯ ಸಮಿತಿಯು ಅಭಿಪ್ರಾಯ ಪಟ್ಟಿದೆ.
ಎಲ್ಲರೊಂದಿಗೂ ನಗು ಮುಖದಿಂದ ಬೆರೆಯುವ ಸದಾ ಉತ್ಸಾಹಿಯಾಗಿದ್ದ ಸಅದ್ ಮುಸ್ಲಿಯಾರ್ ಮದ್ರಸಾ ರಂಗದಲ್ಲಿ ಜಾರಿಗೆ ತಂದ ನೂತನ ಕಾರ್ಯ ಯೋಜನೆಗಳು ಸದಾ ಸ್ಮರಣೀಯ.
ಅವರ ಹೆಸರಲ್ಲಿ ಸಂಘಟನಾ ಕುಟುಂಬದ ಎಲ್ಲ ಸದಸ್ಯರು ಖುರ್ಆನ್,ತಹ್ಲೀಲ್ ಓದಿ ಹದ್ಯಾ ಮಾಡಿ ವಿಶೇಷ ದುಆ ಹಾಗೂ ನಾಳೆ ಜುಮಾ ನಂತರ ಎಲ್ಲಾ ಮಸೀದಿಗಳಲ್ಲಿ ಜನಾಝ ನಮಾಜ್ ನಿರ್ವಹಿಸಬೇಕೆಂದು ಎಸ್.ವೈ.ಎಸ್.ರಾಜ್ಯಾಧ್ಯಕ್ಷ ಪಿ.ಎಂ.ಉಸ್ಮಾನ್ ಸಅದಿ ಪಟ್ಟೋರಿ ಹಾಗೂ ಪ್ರಧಾನ ಕಾರ್ಯದರ್ಶಿ ಡಾ. ಎಮ್ಮೆಸ್ಸೆಂ ಝೈನೀ ಕಾಮಿಲ್ ಅಪೇಕ್ಷಿಸಿದ್ದಾರೆ. ಸಅದ್ ಉಸ್ತಾದರು ಪತ್ನಿ, ಎರಡು ಹೆಣ್ಣು ಮಕ್ಕಳು, ಎರಡು ಗಂಡು ಮಕ್ಕಳು ಹಾಗೂ ಅಪಾರ ಬಂಧು ಬಳಗ,ಅಭಿಮಾನಿ ವೃಂದವನ್ನು ಅಗಲಿದ್ದಾರೆ
ಅವರ ಜನಾಝ ಈಗ ಬೋಂದೆಲ್ನ ಮನೆಯಲ್ಲಿದ್ದು ನಾಳೆ ಸುಬಹಿ ನಮಾಝ್ನ ಬಳಿಕ ದಫನ ಕಾರ್ಯ ನಡೆಯುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.
















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
SSF ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ ಸಮಾಪ್ತಿ