ಮಂಗಳೂರು: ಕರ್ತವ್ಯ ನಿರತ ಮಂಗಳೂರು ಸಿಸಿಬಿ ಪೊಲೀಸರು ನಗರದ ಹೊರವಲಯದ ಕುತ್ತಾರಿನ ಬಾರ್ ಒಂದರಲ್ಲಿ ಆರೋಪಿಯೊಂದಿಗೆ ಪಾರ್ಟಿ ನಡೆಸಿರುವ ವೀಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದು, ಸೂಕ್ತ ತನಿಖೆಗೆ ಮಂಗಳೂರು ಪೋಲೀಸ್ ಕಮಿಷನರ್ ಶಶಿಕುಮಾರ್ ಆದೇಶ ನೀಡಿದ್ದಾರೆ.
ಮಂಗಳೂರು ಸಿಸಿಬಿಯ 8 ಮಂದಿ ಪೋಲೀಸ್ ಸಿಬ್ಬಂದಿಗಳು ಮಂಗಳೂರು ಹೊರವಲಯದ ಕುತ್ತಾರಿನ ಬಾರ್ ಸಮೀಪದ ಬಸ್ ನಿಲ್ದಾಣದ ಬಳಿ ತಮ್ಮ ಕರ್ತವ್ಯ ನಿರತ ಟಿ ಟಿ ವಾಹನವನ್ನು ನಿಲ್ಲಿಸಿ, ಪ್ರಮುಖ ಆರೋಪಿಯೊಂದಿಗೆ ಪಾರ್ಟಿ ನಡೆಸಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದು,ಇಂತಹ ಲಜ್ಜೆಗೆಟ್ಟ ಪೊಲೀಸರು ಸಿಸಿಬಿ ಯಂತಹ ಉನ್ನತ ಮಟ್ಟದ ತನಿಖಾ ಸಂಸ್ಥೆಯಲ್ಲಿ ಮುಂದುವರೆಯುವುದು ಎಷ್ಟು ಸೂಕ್ತ ಎಂದು ಜನಸಾಮಾನ್ಯರು ಪ್ರಶ್ನಿಸುವಂತಾಗಿದೆ.
ರೌಡಿಗಳು,ಅಕ್ರಮಿಗಳ ಹೆಡೆ ಮುರಿ ಕಟ್ಟಬೇಕಾದ ಸಿಸಿಬಿ ಪೊಲೀಸರೇ ಅಕ್ರಮಿಗಳ ಜೊತೆ ಸೇರಿ ಈ ರೀತಿ ಪಾರ್ಟಿ ಮಾಡೋದಾದರೆ ಜನಸಾಮಾನ್ಯರಿಗೆ ಇವರಿಂದ ನ್ಯಾಯ ಮರೀಚಿಕೆಯ ವಿಷಯವೇ ಆಗಿದೆ. ಈ ಬಗ್ಗೆ ನೂತನ ಪೊಲೀಸ್ ಆಯುಕ್ತರಾದ ಎನ್.ಶಶಿಕುಮಾರ್ ಮತ್ತು ಡಿಸಿಪಿ ಹರಿರಾಂ ಶಂಕರ್ ಅವರ ಗಮನಕ್ಕೆ ತರಲಾಗಿದ್ದು,ಪೋಲೀಸ್ ಆಯುಕ್ತರು ತನಿಖೆಗೆ ಆದೇಶ ನೀಡಿದ್ದಾರೆ. ಇಂತಹ ಲಜ್ಜೆಗೆಟ್ಟ ಸಿಸಿಬಿ ಸಿಬ್ಬಂದಿಗಳ ವಿರುದ್ಧ ಯಾವ ರೀತಿ ಕ್ರಮ ಕೈಗೊಳ್ಳುತ್ತಾರೋ ಕಾದು ನೋಡಬೇಕಷ್ಟೆ.
















ಇನ್ನಷ್ಟು ಸುದ್ದಿಗಳು
ಸುಮೊಟೊ ದುರ್ಬಳಕೆ ಮತ್ತು ಪಕ್ಷ ಪಾತೀಯ ನಿಲುವನ್ನು ಖಂಡಿಸಿ KMJ SYS SSF ಸಮಿತಿ ವತಿಯಿಂದ ಕಮಿಷನರ್ ಭೇಟಿ ಮಾಡಿ ಮನವಿ
ಸಾರ್ವಜನಿಕ ಸ್ಥಳದಲ್ಲಿ ನಮಾಝ್: ಘಟನೆಯಲ್ಲಿ ಕೇಸ್ ದಾಖಲಿಸಿದ್ದು ಅಚ್ಚರಿ ಮೂಡಿಸಿದೆ- ಶಾಫಿ ಸಅದಿ
ನೌಕರರ ಮಿಂಚಿನ ಮುಷ್ಕರ : ಅಂತಾರಾಷ್ಟ್ರೀಯ ವಿಮಾನಯಾನ ರದ್ದು
ಮುಖ್ಯಮಂತ್ರಿಯನ್ನು ಭೇಟಿಮಾಡಿ ವಿವಿಧ ಭೇಡಿಕೆಗಳನ್ನಿಟ್ಟ ಸುನ್ನೀ ಸಂಘಟನಾ ನಾಯಕರು
ಭಜರಂಗದಳ ಮಾಜಿ ರಾಜ್ಯ ಸಂಚಾಲಕ ರಘು ಪರಾರಿ
ಖುರ್ಆನ್ ದುರ್ವ್ಯಾಖ್ಯಾನಕಾರರಿಂದ ಇಸ್ಲಾಂಗೆ ಭಾರೀ ಹಾನಿಯುಂಟಾಗುತ್ತಿದೆ- ಡಾ. ಝೈನೀ ಕಾಮಿಲ್
ಪಾನಕ್ಕಾಡ್ ಹೈದರಾಲಿ ತಂಙ್ಞಳ್ ನಿಧನ- ಕೆ.ಅಶ್ರಫ್ ಮುಸ್ಲಿಮ್ ಒಕ್ಕೂಟ ಸಂತಾಪ
SDPI ಮಂಗಳೂರು ವಿಧಾನ ಸಭಾ ಕ್ಷೇತ್ರ ಸಮಿತಿಯಿಂದ ಗಣರಾಜ್ಯೋತ್ಸವ ದಿನಾಚರಣೆ
ವಿವಾಹ ಸಂದರ್ಭ ವರನಿಂದ ಮಾರು ವೇಷ: ಧಾರ್ಮಿಕ ನಂಬಿಕೆಗೆ ಅವಹೇಳನ- ಮುಸ್ಲಿಮ್ ಒಕ್ಕೂಟ ಖಂಡನೆ
ಕಾಣಿಕೆ ಡಬ್ಬಿಗಳನ್ನು ಅಪವಿತ್ರಗೊಳಿಸುತ್ತಿದ್ದ ದೇವದಾಸ್ ದೇಸಾಯಿ ಬಂಧನ