ಮಂಗಳೂರು: ಮುಸ್ಲಿಂ ಜಮಾಅತ್ ಮಂಗಳೂರು ಕಾರ್ಯದರ್ಶಿ SჄS ಕೈಕಂಬ ಸೆಂಟರ್ ನಾಯಕ ವೆನ್ಝ್ ಅಬ್ದುಲ್ ಅಝೀಝ್ ಮೇಲೆ ತಲವಾರು ದಾಳಿ ನಡೆದಿರುವುದು ಅಘಾತಕಾರಿ ಬೆಳವಣಿಗೆ ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ಮಂಗಳೂರು ತಾಲೂಕು ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಖೇದ ವ್ಯಕ್ತಪಡಿಸಿದ್ದಾರೆ.
ಜನಪರ ಮತ್ತು ಸಾಮಾಜಿಕ ಕಾಳಜಿಯಿಂದ ಕಾರ್ಯ ನಿರ್ವಹಿಸುವ ವ್ಯಕ್ತಿಗಳನ್ನು ಕೊಲೆಗೈಯಲು ಸಂಚು ರೂಪಿಸುವುದಕ್ಕೆ ಕಳವಳ ವ್ಯಕ್ತಪಡಿಸಿದ ಅವರು, ಘಟನೆಯ ಕುರಿತು ಸಮಗ್ರ ತನಿಖೆ ನಡೆಸಿ ಈ ಸಂಚಿನ ಸತ್ಯಾಸತ್ಯತೆಯನ್ನು ಬಯಲಿಗೆಳಯಬೇಕು ಎಂದು ಅಬ್ದುಲ್ ನಾಸಿರ್ ರವರು ಒತ್ತಾಯಿಸಿದ್ದಾರೆ.
ಅಬ್ದುಲ್ ಅಝೀಝ್ ಅವರ ಹತ್ಯೆಗೆ ಸಂಚು ರೂಪಿಸಿದವರನ್ನು ಕೂಡಲೇ ಬಂದಿಸಬೇಕು. ಇದರ ಹಿಂದಿರುವ ಷಡ್ಯಂತ್ರ ಬಯಲಿಗೆಳೆಯಬೇಕೆಂದು ಪೋಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ.







