ಕೊಣಾಜೆ :ಎಸ್ಸೆಸ್ಸೆಫ್ ರಾಜ್ಯ ಸಮಿತಿಯ ಸುತ್ತೋಲೆಯಂತೆ ಕೊಣಾಜೆ ಸೆಕ್ಟರ್ ಮಟ್ಟದಲ್ಲಿ ಕಾರ್ಯಕರ್ತನ ಒಂದು ದಿನ ಸಿಲ್ಮ್ ಕ್ಯಾಂಪ್ ನಡುಹಿತ್ಲು ಪಜೀರ್ ಶಾಖೆಯಲ್ಲಿ ಕಾರ್ಯಕ್ರಮ ಜರುಗಿತು.
ಬೆಳ್ಳಂಬೆಳಗ್ಗೆ ಆರಂಭಿಸಿದ ಕ್ಯಾಂಪ್ ನಲ್ಲಿ ಖತಮುಲ್ ಕುರ್ ಆನ್, ತಹ್ಲೀಲ್ ಮಜ್ಲಿಸ್, ಕುರ್ ಆನ್ ತರಗತಿ, ಚರ್ಚಾಗೋಷ್ಠಿ, 200ನೇ ಬ್ಲಡ್ ಸೈಬೋ ಪ್ರಚಾರ,ಸಿಲ್ಮ್ ತರಗತಿ, ಚಹಾ ಕೂಟ, ಬುರ್ದಾ ಮಜ್ಲಿಸ್,ಮಾದರಿ ಮೌಲಿದ್ ಮಜ್ಲಿಸ್ ಮತ್ತು ಮದ್ ಹುರ್ರಸೂಲ್ ಪ್ರಭಾಷಣ,ಅಲ್ ಮಸಾಜಿದ್ ಎಂಬ ಪುಸ್ತಕ ಬಿಡುಗಡೆ ಹಾಗೂ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿಗಳಾಗಿ ಸಯ್ಯಿದ್ ಶರಫುದ್ದೀನ್ ಅಲ್ ಹೈದ್ರೋಸಿ ತಂಙಳ್ , ಇಸ್ಹಾಕ್ ಝುಹ್ರಿ ಕಾನೆಕೆರೆ, ಇಬ್ರಾಹಿಂ ಅಹ್ಸನಿ ಮಂಜನಾಡಿ, ಹೈದರಾಲಿ ಸಖಾಫಿ ಇನೋಳಿ, ಅಬ್ದುಲ್ ಬಾರಿ ಸಅದಿ ಉಚ್ಚಿಲ ರಶೀದ್ ಸಅದಿ ಹಾಗೂ ಬದ್ರುದ್ದೀನ್ ಸಖಾಫಿ ತರಗತಿ ನಡೆಸಿದರು.
ಕಾರ್ಯಕ್ರಮದಲ್ಲಿ ಅಬೂಸ್ವಾಲಿ ಹರೇಕಳ, ಉಸ್ಮಾನ್ ಪಜೀರ್, ಇಕ್ಬಾಲ್ ಮದನಿ, ಅಲ್ತಾಫ್ ಫಾಳಿಲಿ, ಫೈಝಲ್ ಫರೀದ್ ನಗರ,ಜಲೀಲ್ ಆರ್ ಜಿ ನಗರ, ಮಜೀದ್ ಫರೀದ್ ನಗರ, ರಝಾಕ್ ಹಾಜಿ ಮಲಾರ್, ಮುನೀರ್ ಬೈತಾರ್ ಹಾಗೂ ಹನ್ನೆರೆಡು ಶಾಖಾ ಅಧ್ಯಕ್ಷರು ಮತ್ತು ಸದಸ್ಯರಗಳು ಭಾಗವಹಿಸಿದ್ದರು.
ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಉಬೈದುಲ್ಲಾಹ್ ಆರ್ ಜಿ ನಗರ ಸ್ವಾಗತಿಸಿ ಕ್ಯಾಂಪ್ ಅಮೀರ್ ನೌಫಲ್ ಮರ್ಝೂಖಿ ಮಲಾರ್ ನಿರೂಪಿಸಿ, ವಂದಿಸಿದರು.