ಸೌದಿ ಅರೇಬಿಯಾದ: ಖಮೀಸ್ ಮುಶೈತ್, ಎಂಬಲ್ಲಿ ಕಳೆದ ಸುಮಾರು ಎರಡು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮೂಲತಃ ಹೈದರಾಬಾದ್ (ತೆಲಂಗಾಣ) ನಿವಾಸಿ #ಶೇಖ್ ಮುಹಮ್ಮದ್# ಎಂಬವರನ್ನು , ಕೆ.ಸಿ.ಎಫ್ ಸಾಂತ್ವನ ತಂಡದ ನಾಯಕರು ಸಂಪರ್ಕಿಸಿ, ಅವರಿಗೆ ಬೇಕಾಗಿರುವ ಎಲ್ಲಾ ರೀತಿಯ ಆರೋಗ್ಯ, ಸಲಹೆ, ಆರೈಕೆಯನ್ನು ಮಾಡಿ ಕೊನೆಗೂ ಊರಿಗೆ ಕಳುಹಿಸುವ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದಾರೆ.

ಈ ಒಂದು ಸಾಂತ್ವನ ಸೇವೆಗೆ ಕೆ.ಸಿ.ಎಫ್ ಖಮೀಸ್ ಮುಶೈತ್ ಸೆಕ್ಟರ್ ನಾಯಕರಾದ #ಜನಾಬ್ ಅಬ್ದುಲ್ ರಝಾಕ್ ಬನ್ನೂರ್ ಹಾಗೂ #ಸಲ್ಮಾನ್ ಚಿಕ್ಕಮಗಳೂರು, #ಖಾಲಿದ್ ಕಬಕ, #ಇಕ್ಬಾಲ್ ಮದನಿ ಪಾವೂರು, ಕೆ.ಸಿ.ಎಫ್ ಮದೀನಾ ಸಾಂತ್ವನ ವಿಭಾಗದ ನಾಯಕರಾದ #ಅಬ್ದುಲ್ ರಝಾಕ್ ಉಳ್ಳಾಲ್# ಸಹಿತವಿರುವ ತಂಡ.. ನಡೆಯಲು ಸಾಧ್ಯವಾಗದ ಶೇಖ್ ಮುಹಮ್ಮದ್ ರವರನ್ನು ನಿನ್ನೆ (10/10/2020) ರಂದು ಜಿದ್ದಾ ವಿಮಾನ ನಿಲ್ದಾಣ ಮೂಲಕ ಪ್ರತ್ಯೇಕ ಆಸನದ ಸೌಕರ್ಯವನ್ನು ಏರ್ಪಡಿಸಿ ತಾಯ್ನಾಡಿಗೆ ಕಳುಹಿಸಲು ಯಶಸ್ವಿಯಾಗಿದ್ದಾರೆ.
ಈ ಮೂಲಕ ಅನಿವಾಸಿ ಕನ್ನಡಿಗರ ಸಂಘಟನೆಯಾದ ಕೆ.ಸಿ.ಎಫ್ ನೇತೃತ್ವದಲ್ಲಿ, ಕನ್ನಡಿಗರಲ್ಲದೆ ಇತರ ರಾಜ್ಯದ ಅನಿವಾಸಿಗರಿಗೂ ತನ್ನ ಸಾಂತ್ವನ ಸೇವೆಯ ಪುಷ್ಟಿಯನ್ನು ನೀಡುತ್ತಾ ಕೆ.ಸಿ.ಎಫ್ ನ ಕಾರ್ಯಾಚರಣೆಯನ್ನು ಯಾವುದೇ ಭೇದವಿಲ್ಲದೆ ಎಲ್ಲಾ ಕಾರ್ಯಕ್ಷೇತ್ರಗಳಿಗೆ ಮೀಸಲಿಟ್ಟಿದ್ದು ಹೆಮ್ಮೆಯ ವಿಚಾರ ಎಂದು ಕೆ.ಸಿ.ಎಫ್ ಖಮೀಸ್ ಮುಶೈತ್ ಸೆಕ್ಟರ್ ಅದ್ಯಕ್ಷರಾದ #ಅಬ್ದುಲ್ ರಝಾಕ್ ಬನ್ನೂರು# ಈ ಕುರಿತು ಅಭಿಪ್ರಾಯ ಪಟ್ಟಿದ್ದಾರೆ.
ವರದಿ:
ಆಸಿಫ್ ಬದ್ಯಾರ್,















ಇನ್ನಷ್ಟು ಸುದ್ದಿಗಳು
ಜಿಸಿಸಿ: ಮಾದಕ ಜಾಲದ ವಿರುದ್ಧ ಮತ್ತಷ್ಟು ಕಠಿಣ ನಿಯಮ- ಮರಣದಂಡನೆ ಶಿಕ್ಷೆ
ಮಕ್ಕಾದಲ್ಲಿ ಹಜ್ ನಿಯಮ ಉಲ್ಲಂಘನೆ: ನೂರಾರು ವಿದೇಶಿಯರ ಬಂಧನ
ಯುಎಇ: ವೈಯಕ್ತಿಕ ವಾಟ್ಸಾಪ್ ಚಾಟ್ ಮತ್ತು ಫಾರ್ವರ್ಡ್ಗಳಿಗೂ ಸೈಬರ್ ಕಾನೂನು ಅನ್ವಯ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಸೌದಿ: ಪಾರ್ಕ್ನಲ್ಲಿ ಆಟವಾಡುತ್ತಿದ್ದಾಗ ವಿದ್ಯುತ್ ಶಾಕ್- ಆರು ವರ್ಷದ ಬಾಲಕ ಮೃತ್ಯು
ಪ್ರಯಾಣಿಕರ ಸಂಕಷ್ಟಕ್ಕೆ ತೆರೆ: ಕುವೈತ್ ವಿಮಾನ ನಿಲ್ದಾಣದ ಕಾರ್ಯಾಚರಣೆ ಪುನಾರಂಭ
ಶುಭ ಸುದ್ದಿ : ಭಾರತ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಲಗೇಜ್ ಮಿತಿ ಹೆಚ್ಚಳ
ಆರು ವಿಭಾಗ ಜನರಿಗೆ ಮಕ್ಕಾ ಪ್ರವೇಶಕ್ಕೆ ಅನುಮತಿ- ಅಬ್ಶೀರ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ
ಶುಭ ಸುದ್ದಿ: ಕತಾರ್ನಲ್ಲಿ ವಿಮಾನ ಸೇವೆಗಳು ಯಥಾಸ್ಥಿತಿಗೆ
ಹಜ್ ಯಾತ್ರಿಕರಿಗೆ ಲಗೇಜ್ ರಹಿತ ಪ್ರಯಾಣ- ಸೌದಿ ಸಚಿವಾಲಯದ ಹೊಸ ಯೋಜನೆ