janadhvani

Kannada Online News Paper

ಗಾಂಧಿ ವಾಚನದಿಂದ ಭಾರತದ ಪುನಶ್ಚೇತನ : ಎಸ್ಸೆಸ್ಸೆಫ್

ಕೊಪ್ಪಳ : ಭವಿಷ್ಯದಲ್ಲಿ ಭಾರತವನ್ನು ಕಟ್ಟಬೇಕಾದ ಇಂದಿನ ವಿದ್ಯಾರ್ಥಿಗಳಿಗೆ ಅವರು ಸ್ಪರ್ಶಿಸುವ ಎಲ್ಲಾ ಮಜಲುಗಳಲ್ಲೂ ರಾಷ್ಟ್ರಪಿತ ಮಹಾತ್ಮ ಗಾಂಧಿಜಿಯವರನ್ನು ಪರಿಚಯ ಮಾಡಿಕೊಡಬೇಕಾದ ಅನಿವಾರ್ಯತೆ ಇದೆ.

ಮಾದರೀ ಯೋಗ್ಯವಾದ ಚಳವಳಿಗಳ ಮೂಲಕ ನಾಡಿನ ಕಟ್ಟಕಡೆಯ ಪ್ರಜೆಗಳ ಬಗ್ಗೆಯೂ ಕಾಳಜಿ ಹೊಂದಿದ್ದ ಗಾಂದೀಜಿಯವರು ಮಾತ್ರವೇ ಭಾರತದ ರಾಷ್ಟ್ರಪಿತರಾಗಲು ಅರ್ಹರು ಆದ್ದರಿಂದ ಅವರನ್ನು ನೋಟುಗಳಿಗೆ ಅಥವಾ ಪೇಜುಗಳಿಗೆ ಮಾತ್ರ ಸೀಮಿತ ಗೊಳಿಸದೆ ಅವರ ಕನಸನ್ನು ನನಸು ಮಾಡುವಲ್ಲಿ ಸರ್ಕಾರಗಳು ಮುಂದೆ ಬರಬೇಕಾಗಿದೆ ಎಂದು ಎಸ್ಸೆಸ್ಸೆಫ್ ರಾಜ್ಯ ಉಪಾಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ ಕಾವಳಕಟ್ಟೆ ತಿಳಿಸಿದರು.

‘ಗಾಂಧಿ ವಾಚನ ಭಾರತದ ಪುನಶ್ಚೇತನ’ ಎಂಬ ಘೋಷಣೆಯೊಂದಿಗೆ ಎಸ್ಸೆಸ್ಸೆಫ್ ರಾಷ್ಟ್ರದಾದ್ಯಂತ ಎಲ್ಲಾ ರಾಜ್ಯಗಳಲ್ಲಿ ನಡೆಸಿದ ಕಾರ್ಯಕ್ರಮ ಇಂದು ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆಯಿತು.
ರಾಜ್ಯ ಡೆಪ್ಯುಟಿ ಅಧ್ಯಕ್ಷ ಮೌಲಾನಾ ಗುಲಾಂ ಹುಸೈನ್ ನೂರಿ ಅಧ್ಯಕ್ಷತೆ ವಹಿಸಿದರು. ಮಾಜಿ ನಗರಸಭಾ ಅಧ್ಯಕ್ಷ ಶಾಮಿದ್ ಮನಿಯಾರ್ ಸಭೆಯನ್ನು ಉದ್ಘಾಟಿಸಿದರು. ಉಮರುಲ್ ಫಾರೂಖ್ ಕೊಡಗು ಸಂದೇಶ ವಾಚಿಸಿದರು.

ಕರ್ನಾಟಕ ಮುಸ್ಲಿಂ ಜಮಾಅತ್ ಕೊಪ್ಪಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಯ್ಯಿದಲಿ ಸಾಹೇಬ್, ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಮೆಹಬೂಬ್ ಬಸಾಪಟ್ಟಣ, ಎಸ್ ವೈ ಎಸ್ ಜಿಲ್ಲಾಧ್ಯಕ್ಷ ಮೌಲಾನಾ ನಝೀರ್ ಅಹ್ಮದ್, ಎಸ್ಸೆಸ್ಸೆಫ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಫಿಝ್ ಸಲೀಂ ಹಾಗೂ ಇಖ್‌ಬಾಲ್ ಮರ್ಝುಖಿ ಭಾಗವಹಿಸಿದರು.
ನೂರುದ್ದೀನ್ ರಝ್ವಿ ಕಾರ್ಯಕ್ರಮ ನಿರೂಪಿಸಿದರು.