ಸೌದಿ ಅರೇಬಿಯಾದ ರಿಯಾದಿನ ಅಲ್ ಇಮಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಸಹೋದರರೊಬ್ಬರನ್ನು, ರಿಯಾದಿನ ಪ್ರತಿಷ್ಠಿತ ಕ್ಲಿನಿಕ್ ನಲ್ಲಿ ಉನ್ನತ ವ್ಯದ್ಯರಾಗಿರುವ ಡಾಕ್ಟರ್ ಅಬ್ದುಲ್ ಮೊಯಿನ್ ಬ್ಯಾರಿ ಇವರ ಸಹಕಾರದಿಂದ ಕೆಸಿಎಫ್ ರಿಯಾದ್ ಸಮಿತಿಯು ದಮ್ಮಾಮಿನಿಂದ ಮಂಗಳೂರಿಗೆ ಕಳುಹಿಸಿತು.
ಮಂಗಳೂರಿಗೆ ತಲುಪಿದ ಕೂಡಲೇ ಕೆಸಿಎಫ್ ರಿಯಾದ್ ಆಯೋಜಿಸಿದ ಆಂಬುಲೆನ್ಸ್ ಮುಖಾಂತರ ಮಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗೆ ಮುಂದಿನ ಚಿಕಿತ್ಸೆಗೆ ಕರೆದೊಯ್ಯಲಾಯಿತು. ರೋಗ ಪತ್ತೆಯಾದ ದಿನಂದಿಂದ ಡಾಕ್ಟರ್ ಅಬ್ದುಲ್ ಮೊಯಿನ್ ಬ್ಯಾರಿ ಅವರು ರೋಗಿಗೆ ಬೇಕಾದ ಊಟ, ವಸತಿ ವ್ಯವಸ್ಥೆಯನ್ನು ಮಾಡಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.
ಅದೇ ರೀತಿ ಕೆಸಿಎಫ್ ರಿಯಾದ್ ಸಮಿತಿ ಸದಸ್ಯರಾದ ಹಂಝ ಮೈಂದಾಳ , ನಿಝಾಮ್ ಸಾಗರ್, ಅಬ್ದುಲ್ ರಝಕ್ ಹಾಜಿ ಉಜಿರೆ ಹಾಗೂ ಇಸ್ಮಾಯಿಲ್ ಕಣ್ಣಂಗಾರ್ ರೋಗಿಗೆ ಬೇಕಾದ ಟಿಕೆಟ್, ದಸ್ತಾವೇಜು ಸಿದ್ಧಪಡಿಸುವಿಕೆ , ಸಾರಿಗೆ ಹಾಗೂ ಇನ್ನಿತರ ರೀತಿಯ ಸೇವೆಗಳನ್ನು ಒದಗಿಸಿದರು. ದಮ್ಮಾಮ್ ಕೆಸಿಎಫ್ ನೇತಾರರಾದ ಮುಹಮ್ಮದ್ ಮಲೆಬೆಟ್ಟು ಹಾಗೂ ಭಾಷಾ ಗಂಗಾವಳಿ ರೋಗಿಯನ್ನು ವಿಮಾನ ನಿಲ್ದಾಣದಲ್ಲಿ ಭೇಟಿಯಾಗಿ ಸಾಂತ್ವನ ಹೇಳಿದರು.















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು