ಡಿ.ಜೆ ಹಳ್ಳಿ ಘರ್ಷಣೆ ಮತ್ತು ದಾಂದಲೆಯ ಕುರಿತಂತೆ ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್ IPS ಇವರನ್ನು ಶಿವಾಜಿ ನಗರ ಶಾಸಕ ರಿಝ್ವಾನ್ ಹರ್ಷದ್ ಮತ್ತು ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ ಬಾವಾರವರು ಬೇಟಿಯಾಗಿ ಚರ್ಚಿಸಿದರು.
ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸಿ, ಅಮಾಯಕರನ್ನು ಬಂಧಿಸದಿರಿ ಹಾಗೇ ಈಗಾಗಲೇ ಬಂಧಿಸಿರುವ ಅಮಾಯಕರನ್ನು ಬಿಡುಗಡೆಗೊಳಿಸಲು ಕಮಿಷನರ್ ಅವರಲ್ಲಿ ಕೇಳಿಕೊಳ್ಳಲಾಯಿತು. ನಡೆದ ಘಟನೆಗೆ ಕಾರಣ ಮತ್ತು ಅನಂತರದ ದಾಂದಲೆಯನ್ನು ಖಂಡಿಸುತ್ತೇವೆ ಎಂದ ಜಿ. ಎ ಬಾವಾ, ಅಮಾಯಕರ ಬಂಧನದ ಮಾಹಿತಿಯನ್ನು ನೀಡಿದರು.
ಗಲಭೆ ಮಾಡಿದವರನ್ನು ಬಂಧಿಸಿ, ಅದಕ್ಕೆ ಪ್ರಚೋದನೆ ಕೊಟ್ಟವರನ್ನೂ ಕಠಿಣ ಕಾನೂನಿನಲ್ಲಿ ಶಿಕ್ಷಿಸಿ ಹಾಗೇ ಮೊದಲು ಕೇಸು ದಾಖಲಿಸಲು ಹೋದಾಗ, ನಿರ್ಲ್ಯಕ್ಷ್ಯವಹಿಸಿದ ಪೊಲೀಸರನ್ನೂ ತನಿಖೆಗೆ ಒಳಪಡಿಸಿ ಎಂದು ಒತ್ತಾಯಿಸಲಾಯಿತು. ಈಗಾಗಲೇ ಬಂಧಿಸಿರುವವರಲ್ಲಿ ನಿರಪರಾಧಿಗಳಿದ್ದರೆ ಯಾವ ಕಾರಣಕ್ಕೂ ಶಿಕ್ಷಿಸುವುದಿಲ್ಲ. ಇವತ್ತೇ ಆ ಬಗ್ಗೆ ಕ್ರಮ ಕೈಗೊಳ್ಳುತ್ತೇನೆ ಎಂದು ಅಧಿಕಾರಿಗಳನ್ನು ಕರೆಸಿ ಪೊಲೀಸ್ ಕಮಿಷನರ್ ಮಾತು ಕೊಟ್ಟರು.















ಇನ್ನಷ್ಟು ಸುದ್ದಿಗಳು
ಅಬ್ದುಲ್ ರಹೀಮ್ ಬಿಡುಗಡೆ ಆದೇಶಕ್ಕೆ ಸಹಿ – 20 ವರ್ಷಗಳ ಸೆರೆಮನೆ ವಾಸಕ್ಕೆ ಕೊನೆಗೂ ಮುಕ್ತಿ
ಬಕ್ರೀದ್ ‘ಈದ್ ಅಲ್-ಅದ್ಹಾ’ ; 382 ಕೈದಿಗಳ ಬಿಡುಗಡೆ- ಒಮಾನ್ ದೊರೆ ಆದೇಶ
ಈದುಲ್ ಅದ್’ಹಾ ಮುಬಾರಕ್ – ಯುಎಇ ಯಲ್ಲಿ 2700 ಕ್ಕೂ ಹೆಚ್ಚು ಖೈದಿಗಳಿಗೆ ಬಿಡುಗಡೆ ಭಾಗ್ಯ
‘ಲಬ್ಬೈಕ್ ಅಲ್ಲಾಹುಮ್ಮ ಲಬ್ಬೈಕ್’ ಪುಣ್ಯ ಭೂಮಿಯಲ್ಲಿ 20 ಲಕ್ಷಕ್ಕೂ ಹೆಚ್ಚು ಯಾತ್ರಿಕರ ಸಮಾಗಮ- ಇಂದು ‘ಅರಫಾತ್ ಸಂಗಮ’
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವೈದ್ಯಕೀಯ ಕ್ಷೇತ್ರಕ್ಕೆ ಗಂಭೀರ ಸವಾಲು : ಎಸ್ಸೆಸ್ಸೆಫ್ ಬೆಂಗಳೂರು
ಕಾನೂನುಬದ್ಧ ಬಲಿದಾನಕ್ಕೆ ಪೊಲೀಸ್ ಸಂರಕ್ಷಣೆ ನೀಡಿ- ಗೃಹ ಸಚಿವರಿಗೆ ಮೌಲಾನಾ ಶಾಫಿ ಸಅದಿ ಮನವಿ
‘ನನ್ನನ್ನು ತಿಹಾರ್ ಜೈಲಿಗೆ ಹಾಕಬಹುದು’; ಆತಂಕ ಹಂಚಿಕೊಂಡ ಕಾಕ್ರೋಚ್ ಜನತಾ ಪಕ್ಷದ ಸಂಸ್ಥಾಪಕ ಅಭಿಜೀತ್ ದಿಪ್ಕೆ
ವೈದ್ಯರ ನಿರ್ಲಕ್ಷ್ಯದಿಂದ ಯುವಕ ಮೃತ್ಯು: ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ಶಾಫಿ ಸಅದಿ ಅವರಿಂದ ಸಚಿವರಿಗೆ ಮನವಿ
ಉಪ್ಪಿನಂಗಡಿ: ಕಂಪ್ಯೂಟರ್ ಕ್ಲಾಸ್ಗೆ ತೆರಳಿದ್ದ 13 ವರ್ಷದ ಬಾಲಕ ನಾಪತ್ತೆ
ಗಲ್ಫ್ ನಾಯಕರ ವಿನಂತಿಗೆ ಮನ್ನಣೆ ; ಇರಾನ್ ಮೇಲಿನ ದಾಳಿ ತಾತ್ಕಾಲಿಕ ರದ್ದು- ಟ್ರಂಪ್