janadhvani

Kannada Online News Paper

SYS ದ.ಕ ಜಿಲ್ಲಾ ಸಮಿತಿಯಿಂದ ಶರಫುಲ್ ಉಲಮಾ ಅನುಸ್ಮರಣೆ

ಸುನ್ನಿ ಯುವಜನ ಸಂಘ ದಕ್ಷಿಣ ಕನ್ನಡ ಜಿಲ್ಲೆ (ವೆಸ್ಟ್) ವತಿಯಿಂದ ಶರಫುಲ್ ಉಲಮಾ ಶೈಖುನಾ ಅಬ್ಬಾಸ್ ಉಸ್ತಾದ್ ರವರ ಅನುಸ್ಮರಣೆಯನ್ನು ನಡೆಸಲಾಯಿತು.

ಸಮಾಜ ಮತ್ತು ವಿದ್ಯೆಗೆ ಅವರು ನೀಡಿದ ಕೊಡುಗೆಯನ್ನು ಜಿಲ್ಲಾಧ್ಯಕ್ಷ ಮಹಮ್ಮದ್ ಅಲಿ ಸಖಾಫಿ ಅಶ್ಅರಿಯ ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕೋಶಾಧಿಕಾರಿ ಎಸ್.ಎಂ.ಬಶೀರ್ ಹಾಜಿ ಉಪಾಧ್ಯಕ್ಷರುಗಳಾದ ಕೆ.ಇ.ಅಬ್ದುಲ್ ಕಾದರ್ ಸಾಲೆತ್ತೂರು,ಎನ್. ಎಸ್. ಉಮರ್ ಮಾಸ್ಟರ್ ಕೋಟೆಕಾರು ಕಾರ್ಯದರ್ಶಿ ಗಳಾದ ಬದ್ರುದ್ದೀನ್ ಅಝ್ಹರಿ, ಇಸ್ಮಾಯಿಲ್ ಕಿನ್ಯ, ಇಸ್ಹಾಕ್ ಝುಹ್ರಿ, ಬಶೀರ್ ಮದನಿ ಕೂಳೂರು, ರಾಜ್ಯ ಸದಸ್ಯ ಹನೀಫ್ ಹಾಜಿ ಉಳ್ಳಾಲ, ಮುಂತಾದವರು ಉಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಮುಸ್ಲಿಯಾರ್ ಸ್ವಾಗತಿಸಿ ಕೃತಜ್ಞತೆ ಸಲ್ಲಿಸಿದರು.